News

ಕೋಡಿಶ್ರೀ ಸ್ಪೋಟಕ ಭವಿಷ್ಯ, ಯುಗಾದಿ ಬಳಿಕ ಧಾರ್ಮಿಕ ಮುಖಂಡನ ಸಾವು, ಒಳ್ಳೆಯ ಮಳೆ ಬೆಳೆಯಾಗುತ್ತದೆಯಂತೆ…..!

ಅನೇಕ ವಿಪತ್ತುಗಳ ಬಗ್ಗೆ ಭವಿಷ್ಯ ನುಡಿದಂತಹ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ಯುಗಾರಿ ಕಳೆದ ಬಳಿಕ ರಾಜ್ಯದಲ್ಲಿ ಒಳ್ಳೆಯ ಮಳೆ-ಬೆಳೆಯಾಗುವ ಲಕ್ಷಣಗಳಿವೆ. ಬಾಂಬ್ ಸ್ಪೋಟ, ಭೂಕಂಪ ಸಹ ಆಗುತ್ತದೆ. ಧಾರ್ಮಿಕ ಮುಖಂಡನ ಸಾವು ಸಹ ಆಗಲಿದೆ ಎಂದು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ ಕೋಡಿಶ್ರೀಗಳು.

ಕೋಲಾರದ ಮಾಲೂರು ಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಕೋಡಿ ಮಠದ ಶ್ರೀಗಳು ಯುಗಾದಿಯ ಬಳಿಕ ರಾಜ್ಯದಲ್ಲಿ ಮಳೆ ಬೆಳೆಗಳು ಉತ್ತಮವಾಗಿರಲಿದೆ. ಜಾಗತಿಕ ಮಟ್ಟದಲ್ಲಿ ಭಾರಿ ತೊಂದರೆಯಾಗಲಿದೆ. ಬೆಂಕಿ, ನೀರಿನ ಹಾವಳಿ ಹಾಗೂ ಯುದ್ದ ಆಗುತ್ತದೆ. ಅನೇಕ ಸಾವು ನೋವುಗಳಾಗುತ್ತದೆ. ಮತಾಧಂತೆ ಹೆಚ್ಚಾಗುತ್ತದೆ. ಬಾಂಬ್ ಸ್ಪೋಟ ಹಾಗೂ ಭೂಕಂಪನವಾಗುತ್ತದೆ. ರಾಜ್ಯದಲ್ಲಿ ಧಾರ್ಮಿಕ ಮುಖಂಡನ ಸಾವು ಸಹ ಸಂಭವಿಸಲಿದೆ. ರಾಜ್ಯ ರಾಜಕೀಯದ ಬಗ್ಗೆ ಯುಗಾದಿ ಹಬ್ಬದ ಬಳಿಕ ಹೇಳುತ್ತೇನೆ. ಅದಕ್ಕೆ ಇನ್ನೂ ಸಾಕಷ್ಟು ಸಮಯವಿದೆ ಎಂದಿದ್ದಾರೆ.

ಅಷ್ಟೇಅಲ್ಲದೇ ಈ ವರ್ಷ ಅಂದರೆ 2024ರಲ್ಲಿ ಜಗತ್ತಿನ ಜನರಿಗೆ ಒಳ್ಳೆಯ ದಿನಗಳಿರಲ್ಲ. ಜಗತ್ತಿನ ಪ್ರಭಾವಿ ಸಂತರೊಬ್ಬರು ಹಾಗೂ ಪ್ರಧಾನಿಗಳಿಬ್ಬರು ಸಾಯುವ ಲಕ್ಷಣಗಳಿವೆ. 2024ರಲ್ಲಿ ಅಕಾಲಿಕ ಮಳೆ, ಭೂಕಂಪ, ಜಲಕಂಟಕ, ಅಣುಬಾಂಬ್ ಸ್ಫೋಟದಂತಹ ಸನ್ನಿವೇಶಗಳು ಮತ್ತು ಯುದ್ಧದ ಭೀತಿಯಿಂದ ಜಗತ್ತು ತಲ್ಲಣಗೊಳ್ಳುವಂತಹ ಸ್ಥಿತಿ ನಿರ್ಮಾಣವಾಗಲಿದೆ ಎಂದು ಕೋಡಿಶ್ರೀಗಳು ಭವಿಷ್ಯ ನುಡಿದಿದ್ದಾರೆ.

Most Popular

To Top