Film News

ಹಿಂದೂ ಹುಡುಗಿ ನಿಮಗ್ಯಾಕೆ, ನಿಮ್ಮ ಧರ್ಮದಲ್ಲೇ 5 ಮದುವೆ ಮಾಡಿಕೊಳ್ಳಿ ಎಂದು ಆಕ್ರೋಷ ಹೊರಹಾಕಿದ ನಟ ಪ್ರಥಮ್….!

ಸದ್ಯ ರಾಜ್ಯದಲ್ಲಿ ನೇಹಾ ಕೊಲೆ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ನೇಹಾ ಕೊಲೆಗೆ ನ್ಯಾಯ ಸಿಗಬೇಕೆಂದು ರಾಜ್ಯದಾದ್ಯಂತ ಭಾರಿ ಆಕ್ರೋಷ ಸಹ ವ್ಯಕ್ತವಾಗುತ್ತಿದೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಇದೀಗ ಕನ್ನಡ ನಟ ಪ್ರಥಮ್ ಸಹ ನೇಹಾ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.

ಹುಬ್ಬಳಿಯ ನೇಹಾ ಹೀರೆಮಠ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಪ್ರಥಮ್ ಮಾತನಾಡಿದ್ದಾರೆ. ಮೃತ ನೇಹಾಳ ತಂದೆ ತಾಯಿಯನ್ನು ಭೇಟಿಯಾಗಿ ಅವರಿಗೆ ಸಾಂತ್ವನ ಹೇಳಿದ್ದಾರೆ. ಬಳಿಕ ಮಾದ್ಯಮಗಳೊಂದಿಗೆ ಅವರು ಮಾತನಾಡಿ ಈ ಪ್ರಕರಣದ ಬಗ್ಗೆ ಆಕ್ರೋಷ ಹೊರಹಾಕಿದ್ದಾರೆ. ನೇಹಾ ನಿಧನದ ಸುದ್ದಿ ಇಡೀ ಚಿತ್ರರಂಗದ ಎಲ್ಲರಿಗೂ ನೋವಾಗಿದೆ. ಪ್ರಹ್ಲಾದ್ ಜೋಶಿಯವರೇ ನೀವು 10 ವರ್ಷದಿಂದ ಅಧಿಕಾರದಲ್ಲಿದ್ದೀರಾ ಅಂತರ್‍ ಧರ್ಮೀಯ ವಿವಾಹದ ಬಗ್ಗೆ ಕಠಿಣ ನಿಯಮ ತೆಗೆದುಕೊಂಡು ಬನ್ನಿ. ಹಿಂದೂ ಧರ್ಮದ ಹುಡುಗಿಯರನ್ನು ಬೇರೆ ಧರ್ಮದವರು ಮದುವೆಯಾಗಲೇ ಬಾರದು. ಹಿಂದೂ ಹುಡುಗಿಯರನ್ನು ನೀವ್ಯಾಕೆ ಲವ್ ಮಾಡ್ತೀರಾ? ನಿಮ್ಮ ಪಾಡಿಗೆ ನೀವು ನಿಮ್ಮ ಸಮುದಾಯವರನ್ನು ಮದುವೆಯಾಗಿ, ಹಿಂದೂ ಹುಡುಗಿಯರ ಜೊತೆ ನಿಮಗೇನು ಕೆಲಸ. ನಿಮ್ಮ ಸಮುದಾಯದಲ್ಲಿ ಒಂದಲ್ಲ ಎರಡಲ್ಲ ಐದು ಮದುವೆ ಬೇಕಾದರೇ ಮಾಡಿಕೊಳ್ಳಿ, ನಿಮ್ಮನ್ನು ಯಾರು ಕೇಳ್ತಾರೆ. ಇನ್ನೊಮ್ಮೆ ಹಿಂದೂಗಳ ತಂಟೆಗೆ ಬರಬೇಡಿ ಎಂದು ಪ್ರಥಮ್ ಆಕ್ರೋಷ ಹೊರಹಾಕಿದ್ದಾರೆ.

ಇನ್ನೂ ನೇಹಾ ನಿಧನದ ಸುದ್ದಿ ತಿಳಿದು ನನಗೆ ತುಂಬಾ ನೋವಾಯ್ತು. ಆದ್ದರಿಂದ ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದೇನೆ. ಪ್ರೀತಿ ಒಪ್ಪದಿದ್ದರೇ ಈ ರೀತಿ ಪ್ರಾಣ ತೆಗೆದುಬಿಡೋದಾ? ಆರೋಪಿಯ ತಾಯಿ ನನ್ನ ಮಗ ಅಂತಹವನಲ್ಲ ಎಂದು ಹೇಳುತ್ತಾರೆ. ವೀರಪ್ಪ ನಾಯಕ ಸಿನೆಮಾದ ಕಥೆಯಂತೆ ಹೇಳಿಕೆ ನೀಡುತ್ತಾರೆ. 20 ವರ್ಷದ ಹಿಂದೆ ಇವರು ಸಿಕ್ಕಿದ್ದಿದ್ರೆ ನಿರ್ದೇಶಕರು ಶ್ರುತಿ ಬದಲು ಅವರನ್ನೇ ಆಯ್ಕೆ ಮಾಡುತ್ತಿದ್ದರು. ಮುಖಂಡರುಗಳೂ ಹೇಳಿಕೆಗಳನ್ನು ನೀಡುವಾಗ ಅವರಿಗೆ ನೋವು ಕೊಡಬೇಡಿ. ನಿಮ್ಮ ಮಕ್ಕಳು ಯಾರ ಜೊತೆ ಇರುತ್ತಾರೆ, ಎಲ್ಲಿಗೆ ಹೋಗ್ತಾರೆ ಎಂಬುದನ್ನು ಗಮನಿಸಿ, ನೇಹಾಳನ್ನು ಅವನು 9 ಸಲ ಚುಚ್ಚಿದ್ದಾನೆ ಎಂದರೇ ಅವನ ಮನಸ್ಸು ಎಷ್ಟು ಕ್ರೂರ ಹಾಗೂ ವಿಕೃತವಾಗಿದೆ. ಈ ವಿಚಾರದಲ್ಲಿ ರಾಜಕೀಯ ಬೇಡ. ಸಿನೆಮಾದ ಪ್ರಚಾರಕ್ಕೆ ಈ ಊರಿಗೆ ಬರಬೇಕು ಎಂದುಕೊಂಡಿದ್ದೆ. ಆದರೆ ಸಾವಿನ ಮನೆಗೆ ಬರುವಂತಾಯ್ತು ಎಂದಿದ್ದಾರೆ.

Most Popular

To Top