ಸೌತ್ ಸಿನಿರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿ ಪಡೆದುಕೊಂಡಿರುವ ನಯನತಾರಾ ಅನೇಕ ಸೂಪರ್ ಹಿಟ್ ಸಿನೆಮಾಗಳ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಕಳೆದೆರಡು ವರ್ಷಗಳ ಹಿಂದೆಯಷ್ಟೆ ಆಕೆ ಕಾಲಿವುಡ್ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯಾದಾಗಿನಿಂದ ಆಕೆ ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುತ್ತಿದ್ದರು. ಇದೀಗ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ನಯನತಾರಾ ಸೆರಗೋಸಿ ಪದ್ದತಿಯ ಮೂಲಕ ಮಕ್ಕಳನ್ನು ಪಡೆದುಕೊಂಡ ಬಗ್ಗೆ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.
ಸಿನಿರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಎಂಬ ಟ್ಯಾಗ್ ಪಡೆದುಕೊಂಡಿದ್ದ ನಟಿಯರಲ್ಲಿ ಕೆಲವೇ ಮಂದಿ ಇರುತ್ತಾರೆ. ಈ ಹಿಂದೆ ಸೀನಿಯರ್ ನಟಿ ಸಾವಿತ್ರಿ, ದಿವಂಗತ ಶ್ರೀದೇವಿ, ವಿಜಯ ಶಾಂತಿ ರವರಂತಹ ಬೆರಳಣಿಕೆಯಷ್ಟು ನಟಿಯರು ಮಾತ್ರ ಲೇಡಿ ಸೂಪರ್ ಸ್ಟಾರ್ ಟ್ಯಾಗ್ ಪಡೆದುಕೊಂಡಿದ್ದರು. ಅನೇಕ ಸೂಪರ್ ಹಿಟ್ ಸಿನೆಮಾಗಳಲ್ಲಿ ಅದ್ಬುತವಾಗಿ ನಟಿಸಿ ಫೇಂ ಪಡೆದುಕೊಂಡ ನಯನತಾರಾ ಲೇಡಿ ಸೂಪರ್ ಸ್ಟಾರ್ ಆಗಿ ಫೇಂ ಪಡೆದುಕೊಂಡಿದ್ದಾರೆ. ಲೇಡಿ ಸೂಪರ್ ಸ್ಟಾರ್ ನಯನತಾರಾ ಕಮರ್ಷಿಯಲ್ ಸಿನೆಮಾಗಳ ಜೊತೆಗೆ ಲೇಡಿ ಓರಿಯೆಂಟೆಡ್ ಸಿನೆಮಾಗಳಲ್ಲೂ ಸಹ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಆಕೆ ಇತ್ತೀಚಿಗೆ ಜವಾನ್ ಸಿನೆಮಾದ ಮೂಲಕ ಒಳ್ಳೆಯ ಸಕ್ಸಸ್ ಕಂಡುಕೊಂಡರು. ಮದುವೆಯಾದ ಬಳಿಕ ಆಕೆ ಸೆರಗೋಸಿ ಪದ್ದತಿಯ ಮೂಲಕ ಅವಳಿ ಮಕ್ಕಳನ್ನು ಪಡೆದುಕೊಂಡರು. ಈ ಕುರಿತು ಜ್ಯೋತಿಷಿ ವೇಣುಸ್ವಾಮಿ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.
ನಟಿ ನಯನತಾರ ಸೆರಗೋಸಿ ಪದ್ದತಿಯ ಮೂಲಕ ಮಕ್ಕಳನ್ನು ಪಡೆದುಕೊಂಡ ಬಗ್ಗೆ ಸುಮಾರು ದಿನಗಳಿಂದ ಚರ್ಚೆ ನಡೆಯುತ್ತಲೇ ಇದೆ. ಸದ್ಯ ಇದೆಲ್ಲವೂ ನಿಂತುಹೋಗಿದೆ. ಇದೀಗ ಮತ್ತೆ ಜ್ಯೋತಿಷಿ ವೇಣು ಸ್ವಾಮಿ ನಯನತಾರಾ ಸೆರಗೋಸಿ ಬಗ್ಗೆ ಮಾತನಾಡಿದ್ದಾರೆ. ಆಕೆಯ ಜಾತಕದಲ್ಲಿರುವ ಸಂಚಲನಾತ್ಮಕ ವಿಚಾರವೊಂದನ್ನು ಹೊರಹಾಕಿದ್ದಾರೆ. ನಯನತಾರ ಜಾತಕ ನನಗೆ ಗೊತ್ತು. ಆಕೆಗೆ ಸಂತಾನ, ಸೆರಗೋಸಿ ಬಗ್ಗೆ ತುಂಬಾನೆ ಪ್ರಚಾರ ನಡೆದಿತ್ತು. ಆದರೆ ಅವೆಲ್ಲವೂ ತಪ್ಪು, ನಯನತಾರಾಗೆ ಸಂತಾನ ಯೋಗವಿಲ್ಲ. ಅದಕ್ಕಾಗಿ ಆಕೆ ಸೆರಗೋಸಿ ಪದ್ದತಿಯ ಮೂಲಕ ತಾಯಿ ಆಗುವ ನಿರ್ಧಾರ ತೆಗೆದುಕೊಂಡರು. ಹೊರಗೆ ಪ್ರಚಾರ ಆಗುತ್ತಿರುವಂತೆ ಮಕ್ಕಳನ್ನು ಹೆತ್ತರೇ ಫಿಜಿಕ್ ಹಾಳಾಗುತ್ತದೆ, ಆದ್ದರಿಂದಲೇ ನಯನತಾರ ಸೆರಗೋಸಿ ಪದ್ದತಿಯ ಮೂಲಕ ಮಕ್ಕಳನ್ನು ಪಡೆದುಕೊಂಡರು.
ನಯನತಾರ ಫಿಜಿ, ಸ್ಟ್ರಕ್ಚರ್ ಗಾಗಿ ಸೆರಗೋಸಿ ಮೂಲಕ ಮಕ್ಕಳನ್ನು ಹೆತ್ತಿದ್ದರೇ, ಕಾಜಲ್ ಅಗರ್ವಾಲ್ ಸಹ ಮದುವೆಯಾಗಿ ಮಕ್ಕಳನ್ನು ಹೆತ್ತಿದ್ದಾರೆ ಅಲ್ವಾ, ಮತ್ತೆ ಫಿಜಿಕ್ ತಂದುಕೊಂಡು ಸಿನೆಮಾಗಳನ್ನು ಮಾಡುತ್ತಿದ್ದಾರೆ ಅಲ್ವಾ, ಅದೇ ರೀತಿ ನಯನತಾರಾ ಸಹ ಮಾಡಬಹುದಾಗಿತ್ತು ಅಲ್ಲವೇ. ನಯನತಾರಾಗೆ ಜಾತಕದಲ್ಲಿ ದೋಷವಿರುವ ಕಾರಣ, ಪತಿಯನ್ನು ಮದುವೆಗೂ ಮುಂಚೆ ಒಪ್ಪಿಸಿ ಸೆರಗೋಸಿ ಮೂಲಕ ಮಕ್ಕಳನ್ನು ಪಡೆದುಕೊಂಡರು ಎಂದಿದ್ದಾರೆ. ಆಕೆಯ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.