News

ಮದುವೆ ಕಾರ್ಡಿನಲ್ಲಿ ಪ್ರಣಾಳಿಕೆಯನ್ನು ಮುದ್ರಣ ಮಾಡಿಸಿದ ಪವನ್ ಕಲ್ಯಾಣ್ ಅನುಯಾಯಿ, ವೈರಲ್ ಆದ ಕಾರ್ಡ್….!

ಆಂಧ್ರಪ್ರದೇಶ ರಾಜ್ಯ ರಾಜಕಾರಣ ದಿನೇ ದಿನೇ ರಂಗೇರುತ್ತಿದೆ. ಆಡಳಿತ ಪಕ್ಷ ವೈ.ಎಸ್.ಆರ್‍.ಪಿ ಪಕ್ಷವನ್ನು ಈ ಭಾರಿ ಸೋಲಿಸಬೇಕೆಂದು ಪಣ ತೊಟ್ಟು ಟಿಡಿಪಿ ಹಾಗೂ ಜನಸೇನಾ ಪಕ್ಷ ಮೈತ್ರಿ ಮಾಡಿಕೊಂಡಿದೆ. ಜೊತೆಗೆ ಎನ್.ಡಿ.ಎ ಮೈತ್ರಿ ಕೂಟ ಸಹ ಸೇರಿಕೊಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆಯ ಮತದಾನ ಸಹ ನಡೆಯಲಿದ್ದು, ರಾಜಕೀಯ ಪಕ್ಷಗಳು ಹಾಗೂ ಅವರ ಬೆಂಬಲಿಗರು ಚುನಾವಣಾ ಪ್ರಚಾರವನ್ನು ಸಹ ಜೋರಾಗಿ ನಡೆಸುತ್ತಿದ್ದಾರೆ.

ಆಂಧ್ರ ಪ್ರದೇಶದಲ್ಲಿ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆ ಎರಡೂ ನಡೆಯುತ್ತಿವೆ. ತಮ್ಮ ಪಕ್ಷಗಳನ್ನು ಗೆಲ್ಲಿಸಬೇಕೆಂಬ ದೃಷ್ಟಿಯಿಂದ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಜೊತೆಗೆ ಪಕ್ಷಗಳ ಬೆಂಬಲಿಗರು ತಮ್ಮದೇ ಆದ ಶೈಲಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಇಲ್ಲೊಬ್ಬ ಜನಸೇನಾ ಪಕ್ಷದ ಬೆಂಬಲಿಗೆ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪ್ರಣಾಳಿಕೆಯನ್ನು ಮುದ್ರಣ ಮಾಡಿ ಸುದಿಯಾಗಿದ್ದಾರೆ. ಆಂಧ್ರಪ್ರದೇಶದ ಕಾಕಿನಾಡ ವ್ಯಾಪ್ತಿಯ ನಿವಾಸಿಯೊಬ್ಬರು ಮದುವೆ ಕಾರ್ಡ್ ನಲ್ಲಿ ಜನಸೇನಾ ಪಕ್ಷದ ಪ್ರಣಾಳಿಕೆಯನ್ನು ಮುದ್ರಿಸಿದ್ದಾರೆ. ಈ ವ್ಯಕ್ತಿ ಪವನ್ ಕಲ್ಯಾಣ್ ಬೆಂಬಲಿಗರಾಗಿದ್ದು, ಪಿಠಾಪುರಂನಲ್ಲಿ ಪವನ್ ಕಲ್ಯಾಣ್ ರವರನ್ನು ಬೆಂಬಲಿಸಿ ಮತ ಹಾಕುವಂತೆ ಮದುವೆಗೆ ಆಹ್ವಾನಿಸುವವರಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ವಿಡಿಯೋ ಹಾಗೂ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ.

ಕೆಲವು ದಿನಗಳ ಹಿಂದೆಯಷ್ಟೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಕಂಡಿ ತಾಲೂಕಿನ ಅರುಟ್ಟಾ ಗ್ರಾಮದ ನಂದಿಕಾಂತಿ ಸಾಯಿಕುಮಾರ್‍ ಎಂಬ ಯುವಕನ ಮದುವೆಯ ಆಮಂತ್ರಣ ಕಾರ್ಡ್‌ನಲ್ಲೂ ಮೋದಿಯವರ ಪೊಟೋ ಮುದ್ರಣ ಮಾಡಿ ನನಗೆ ಗಿಫ್ಟ್ ಬೇಡ, ಮೋದಿಗೆ ವೋಟ್ ಹಾಕಿ ಎಂದು ಮನವಿ ಮಾಡಿದ್ದರು. ‌ಇದೀಗ ಪವನ್ ಕಲ್ಯಾಣ್ ಅಭಿಮಾನಿ ಮದುವೆ ಆಹ್ವಾನ ಪತ್ರಿಕೆಯಲ್ಲಿ ಜನಸೇನಾ ಪಕ್ಷದ ಪ್ರಣಾಳಿಕೆಯನ್ನು ಮುದ್ರಣ ಮಾಡಿ ಸುದ್ದಿಯಾಗಿದ್ದಾರೆ.

Most Popular

To Top