Film News

ಕ್ಯೂಟಿ, ಇಬ್ಬರನ್ನೂ ಹ್ಯಾಂಡಲ್ ಮಾಡೋಕೆ ಆಗುತ್ತಾ ಎಂದ ಅಲ್ಲು ಅರ್ಜುನ್, ವೈರಲ್ ಆದ ಪೋಸ್ಟ್….!

ರಾಷ್ಟ್ರೀಯ ಉತ್ತಮ ನಟನಾಗಿ ಅವಾರ್ಡ್ ಪಡೆದುಕೊಂಡ ನಟ ಅಲ್ಲು ಅರ್ಜುನ್ ಪುಷ್ಪಾ ಸಿನೆಮಾದ ಬಳಿಕ ಇಡೀ ವಿಶ್ವದಾದ್ಯಂತ ಕ್ರೇಜ್ ಪಡೆದುಕೊಂಡರು. ವಿವಿಧ ದೇಶಗಳಲ್ಲಿ ಅವರಿಗಾಗಿಯೇ ಫ್ಯಾನ್ ಬೇಸ್ ಏರ್ಪಟ್ಟಿದೆ. ಪ್ಯಾನ್ ಇಂಡಿಯಾ ಸ್ಟಾರ್‍ ಆಗಿರುವ ಅಲ್ಲು ಅರ್ಜುನ್ ಸದ್ಯ ಪುಷ್ಪಾ-2 ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಆಗಸ್ಟ್ 15 ರಂದು ಈ ಸಿನೆಮಾ ಬಿಡುಗಡೆ ಮಾಡುವ ಪ್ಲಾನ್ ಮಾಡಿದ್ದು, ಅಭಿಮಾನಿಗಳು ಈ ಸಿನೆಮಾಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

ನಟ ಅಲ್ಲು ಅರ್ಜುನ್ ರವರಿಗೆ ಪುಷ್ಪಾ ಸಿನೆಮಾಗಾಗಿ ರಾಷ್ಟ್ರೀಯ ಉತ್ತಮ ನಟನಾಗಿ ಅವಾರ್ಡ್ ಪಡೆದುಕೊಂಡರು. ಈ ಅವಾರ್ಡ್ ಪಡೆದುಕೊಂಡ ತೆಲುಗು ಸಿನಿರಂಗದ ಮೊದಲ ನಟ ಎಂಬ ಖ್ಯಾತಿಗೂ ಗುರಿಯಾಗಿದ್ದರು. ಇನ್ನೂ ಇತ್ತೀಚಿಗಷ್ಟೆ ದುಬೈನಲ್ಲಿ ಮೆಡಂ ಟೂಸ್ಪಾಡ್ಸ್ ಮ್ಯೂಸಿಯಂನಲ್ಲಿ ಅಲ್ಲು ಅರ್ಜುನ್ ರವರ ಮೇಣದ ವಿಗ್ರಹವನ್ನು ತಯಾರಿಸಿದ್ದರು. ಈ ಹಿಂದೆ ದುಬೈಗೆ ಹೋದಾಗ ಮೇಣದ ಪ್ರತಿಮೆ ತಯಾರಿಸಲು ಅಳತೆಗಳನ್ನು ಸಹ ಕೊಟ್ಟು ಬಂದಿದ್ದರು. ಈ ಮೇಣದ ಪ್ರತಿಮೆಯನ್ನು ಅಲ್ಲು ಅರ್ಜುನ್ ತಮ್ಮ ಕೈಯಾರೆ ಮಾ.28 ರಂದು ಅನಾವರಣಗೊಳಿಸಿದರು. ಈ ಸಂಬಂಧ ಕೆಲವೊಂದು ಪೊಟೋಗಳು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ. ಈ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ತಮ್ಮ ಕುಟುಂಬ ಸಮೇತ ಭಾಗಿಯಾಗಿದ್ದರು.

ಇನ್ನೂ ಈ ಪ್ರತಿಮೆಯ ಬಳಿ ಅಲ್ಲು ಅರ್ಜುನ್ ಕುಟುಂಬಸ್ಥರೆಲ್ಲಾ ಪೊಟೋಗಳನ್ನು ತೆಗೆದುಕೊಂಡಿದ್ದರು. ಈ ಸಂಬಂಧ ಪೊಟೋಗಳನ್ನು ಅಲ್ಲು ಅರ್ಜುನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಮೂಲಕ ಹಂಚಿಕೊಂಡಿದ್ದರು. ಈ ಪೊಟೋಗಳನ್ನು ಸ್ನೇಹಾರೆಡ್ಡಿ ಸಹ ಅಲ್ಲು ಅರ್ಜುನ್ ಜೊತೆಗೆ ಪ್ರತಿಮೆಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದರು. ಈ ಪೊಟೋಗಳನ್ನು ಶೇರ್‍ ಮಾಡಿದ ಅಲ್ಲು ಅರ್ಜುನ್ ಕ್ಯೂಟಿ ಇಬ್ಬರು ಅಲ್ಲು ಅರ್ಜುನ್ ರನ್ನು ಹ್ಯಾಂಡಲ್ ಮಾಡೋಕೆ ಆಗುತ್ತಾ ಎಂದು ಫನ್ನಿಯಾಗಿ ಕಾಮೆಮಠ್ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಇನ್ನೂ ದೊಡ್ಡ ಮ್ಯೂಸಿಯಂ ನಲ್ಲಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ ಅನಾವರಣಗೊಂಡಿದ್ದು ಅವರ ಅಭಿಮಾನಿಗಳಿಗೆ ಮಾತ್ರವಲ್ಲದೇ ಅನೇಕ ಸಿನೆಮಾ ಸೆಲೆಬ್ರೆಟಿಗಳಿಗೂ ಖುಷಿಯ ವಿಚಾರವಾಗಿದೆ. ಈ ಪೊಟೋಗಳನ್ನು ವೈರಲ್ ಮಾಡುತ್ತಾ, ಮೆಚ್ಚುಗೆಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

Most Popular

To Top