ಎರಡು ಮನಸುಗಳ ನಡುವೆ ಉಂಟಾದ ಪ್ರೀತಿ ಅನೇಕ ಘಟನೆಗಳಿಗೆ ಕಾರಣವಾಗುತ್ತಿರುತ್ತದೆ. ಪ್ರೀತಿ ಫಲಿಸಲಿಲ್ಲ ಎಂದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕೆಲವರಿಗೆ ಪೋಷಕರು ಪ್ರೀತಿಗೆ ಅಡ್ಡ ಆಗುತ್ತಾರೆ. ಸಾಮಾನ್ಯವಾಗಿ ಒಮ್ಮೆ ಪ್ರೀತಿಗೆ ಬಿದ್ದ ಬಳಿಕ ತಮ್ಮ ಪೋಷಕರಿಗಿಂತಲೂ ತಾವು ಪ್ರೀತಿಸಿದ ವ್ಯಕ್ತಿಯ ಮೇಲೆ ಹೆಚ್ಚಿನ ನಂಬಿಕೆಯನ್ನು ಇಟ್ಟುಕೊಂಡಿರುತ್ತಾರೆ. ತಾನು ಪ್ರಾಣದಂತೆ ಪ್ರೀತಿಸಿದ ಯುವತಿ ಪೋನ್ ಮಾಡಿದ್ದಳೆಂದು ಓಡಿ ಹೋದ ಯುವಕ ತನ್ನ ಮರ್ಮಾಂಗವನ್ನೆ ಕಳೆದುಕೊಂಡಿರುವ ಘಟನೆಯೊಂದು ನಡೆದಿದೆ. ಅಷ್ಟಕ್ಕೂ ಆಗಿದ್ದೇನು ಎಂಬ ವಿಚಾರಕ್ಕೆ ಬಂದರೇ,
ಬಿಹಾರ ರಾಜ್ಯದ ಮುಜಾಫರ್ ಪುರ ನಗರದಲ್ಲಿ ಅಂತಹ ಪ್ರಕರಣವೊಂದು ನಡೆದಿದೆ. ಗೆಳತಿಯ ಕುಟುಂಬದವರು ಯುವಕನ ಖಾಸಗಿ ಅಂಗವನ್ನು ಕತ್ತರಿಸಿದ್ದಾರೆ. ಗಾಯಗೊಂಡ ಯುವಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಲಾಗಿದೆ. ಮುಜಾಫರ್ ಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಯುವಕನೋರ್ವ ಸಾರಯ್ಯ ಗಂಜ್ ಎಂಬ ಪ್ರದೇಶದ ಯುವತಿಯನ್ನು ಸುಮಾರು ದಿನಗಳಿಂದ ಪ್ರೀತಿ ಮಾಡುತ್ತಿದ್ದ ಎನ್ನಲಾಗಿದೆ. ಯುವತಿ ಕರೆ ಮಾಡಿದ್ದು, ಪ್ರೇಯಸಿಯ ಮಾತುಗಳನ್ನು ಕೇಳಿ ಆಕೆಯ ಮನೆಗೆ ಹೋಗಿದ್ದ ಪ್ರಿಯಕರನಿಂದ ಚಿನ್ನದ ಸರ, ಉಂಗುರ, ಮೊಬೈಲ್ ಕಸಿದು, ಆತನ ಮರ್ಮಾಂಗವನ್ನು ಸಹ ಕತ್ತರಿಸಿದ್ದಾರೆ ಎಂದು ಯುವಕನ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಯುವಕನ ತಾಯಿ ನೀಡಿದ ದೂರಿನಂತೆ, ನನ್ನ ಮಗ ಹಾಗೂ ಯುವತಿ ಸುಮಾರು ದಿನಗಳಿಂದ ಪ್ರೀತಿ ಮಾಡುತ್ತಿದ್ದರು. ಆದರೆ ಅವರ ಪ್ರೀತಿಗೆ ಯುವತಿಯ ಕುಟುಂಬಸ್ಥರು ಆಕ್ಷೇಪ ಮಾಡುತ್ತಿದ್ದರು. ಜೊತೆಗೆ ಅನೇಕ ಬಾರಿ ನನ್ನ ಮಗನಿಗೆ ಬೆದರಿಕೆ ಕರೆಗಳೂ ಸಹ ಬಂದಿದೆ. ಆದರೆ ಆತ ಪ್ರೀತಿಯನ್ನು ಬಿಡದ ಕಾರಣದಿಂದ ತಮ್ಮ ಮಗಳಿಂದ ಕರೆ ಮಾಡಿಸಿ ಮೋಸ ಮಾಡಿ ಮನೆಗೆ ಕರೆಸಿಕೊಂಡಿದ್ದಾರೆ. ಪ್ರತಿದಿನ ನನ್ನ ಮಗ ಸಂಜೆ 4 ಗಂಟೆಗೆ ಜಿಮ್ ಗೆ ಹೋಗುತ್ತಿದ್ದ. ಆದರೆ ಯುವತಿ ನಮ್ಮ ಅಪ್ಪನಿಗೆ ಹೃದಯಾಘಾತವಾಗಿದೆ ಬೇಗ ಮನೆಗೆ ಬಾ, ಅಪ್ಪನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂದು ಹೇಳಿದ್ದಾರೆ. ಅದನ್ನು ನಂಬಿ ನನ್ನ ಮಗ ಆಕೆಯ ಮನೆಗೆ ಹೋಗಿದ್ದಾನೆ.
ಈ ವೇಳೆ ಯುವತಿಯ ತಂದೆ, ತಾಯಿ ಹಾಗೂ ಸಹೋದರ ಸೇರಿ ಆತನನ್ನು ಹಿಗ್ಗಾಮುಗ್ಗಾ ಹೊಡೆದು, ಆತನ ಬಳಿಯಿದ್ದ ಚಿನ್ನದ ಸರ, ಉಂಗುರ, ಮೊಬೈಲ್ ಕಸಿದುಕೊಂಡಿದ್ದಾರೆ. ಜೊತೆಗೆ ಆತನ ಖಾಸಗಿ ಅಂಗವನ್ನೇ ಕತ್ತರಿಸಿದ್ದಾರೆ. ನನ್ನ ಮಗ ಹೇಗೋ ತಪ್ಪಿಸಿಕೊಂಡು ಬಂದು ಘಟನೆಯ ಬಗ್ಗೆ ನಮಗೆ ಹೇಳಿದ್ದಾರೆ ಎಂದು ದೂರಿನಲ್ಲಿ ಯುವಕನ ತಂದೆ ಉಲ್ಲೇಖ ಮಾಡಿದ್ದಾರೆ. ಇನ್ನೂ ಈ ಸಂಬಂಧ ದೂರು ಪಡೆದುಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.