ಸ್ಯಾಂಡಲ್ ವುಡ್ ಸ್ಟಾರ್ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಸ್ಟಾರ್ ನಟಿ ಮಾಲಾಶ್ರೀ ರಾಮಾಚಾರಿ ಸಿನೆಮಾದ ಮೂಲಕ ಎಲ್ಲರ ಮನೆಮಾತಾಗಿದ್ದರು. ಈ ಸಿನೆಮಾ ತೆರೆಕಂಡು ಸುಮಾರು 30 ವರ್ಷ ಕಳೆದಿದೆ. ಆದರೂ ಸಹ ಈ ಸಿನೆಮಾದ ಕ್ರೇಜ್ ಕಡಿಮೆಯಾಗಿಲ್ಲ. ಈ ಸಿನೆಮಾದ ಹಾಡುಗಳು ಸಹ ಸೂಪರ್ ಹಿಟ್ ಆಗಿದ್ದವು. ಇದೀಗ 30 ವರ್ಷಗಳ ಬಳಿಕ ರವಿಚಂದ್ರನ್ ಹಾಗೂ ಮಾಲಾಶ್ರೀ ಕೈಕೈ ಹಿಡಿದುಕೊಂಡು ರಾಮಾಚಾರಿ ಸಿನೆಮಾದ ಹಾಡಿಗೆ ನೃತ್ಯ ಮಾಡಿದ್ದಾರೆ.
ಸೂಪರ್ ಹಿಟ್ ಆದ ರಾಮಾಚಾರಿ ಸಿನೆಮಾದಲ್ಲಿನ ಆಕಾಶದಾಗೆ ಯಾರೋ ಒಬ್ಬ ಮಾಯಗಾರನು ಚಿತ್ತಾರ ಮಾಡಿ ಹೋಗೋನೆ, ಈ ಭೂಮಿ ಮ್ಯಾಗೆ ಯಾರೋ ತೋಟಗಾರನು ಮಲೆನಾಡ ಮಾಡಿ ಹೋಗೋನೆ ಎಂಬ ಹಾಡು ತುಂಬಾನೆ ಫೇಮಸ್ ಆಗಿತ್ತು. ಈಗಲೂ ಸಹ ಈ ಸಿನೆಮಾದ ಹಾಡುಗಳು ಪ್ರಚಲಿತದಲ್ಲೇ ಇದೆ. ಇದೀಗ 30 ವರ್ಷಗಳ ಬಳಿಕ ರವಿಚಂದ್ರನ್ ಹಾಗೂ ಮಾಲಾಶ್ರೀ ಕೈ ಕೈ ಹಿಡಿದುಕೊಂಡು ನೃತ್ಯ ಮಾಡಿದ್ದಾರೆ. ಬೆಂಗಳೂರಿನ ಬಿಬಿಎಂಪಿ ಕೇಂದ್ರ ಕಚೇರಿಯ ಡಾ.ರಾಜ್ ಕುಮಾರ್ ಸಭಾಂಗಣದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ರವಿಚಂದ್ರನ್ ಹಾಗೂ ಮಾಲಾಶ್ರೀ ಇಬ್ಬರೂ ರಾಮಾಚಾರಿ ಹಾಡಿಗೆ ಬ್ಯೂಟಿಪುಲ್ ಆಗಿ ನೃಥ್ಯ ಮಾಡಿದ್ದಾರೆ. ಈ ದೃಶ್ಯಗಳು ಅಲ್ಲಿದ್ದ ಎಲ್ಲರನ್ನೂ ರಂಜಿಸಿದೆ.
ಈ ವೇಳೆ ಮಾತನಾಡಿದ ರವಿಚಂದ್ರನ್ ರವರು ಶೀಘ್ರದಲ್ಲೇ ಪ್ರೇಮಲೋಕ ಭಾಗ-2 ಸಿನೆಮಾದ ಶೂಟಿಂಗ್ ಆರಂಭವಾಗಲಿದೆ. ಡಾ.ರಾಜ್ ಕುಮಾರ್, ಅಂಬರೀಶ್, ಶಿವಣ್ಣ, ಪುನೀತ್ ರಾಜ್ ಕುಮಾರ್ ರವರ ಒಡನಾಟದಿಂದ ನಾನು ಚಿತ್ರರಂಗದಲ್ಲಿ ಬೆಳೆಯಲು ಸಹಕಾರಿಯಾಗಿತ್ತು. ನಾವು ಎಷ್ಟೇ ದೊಡ್ಡದವರಾಗಿದ್ದರೂ, ನಮ್ಮ ತಾಯಿಗೆ ನಾವು ಚಿಕ್ಕಮಕ್ಕಳಾಗಿರುತ್ತೇವೆ. ನಾವು ಮನೆಯಿಂದ ಹೊರಗೆ ಹೋಗುವಾಗ ಹೆಂಡತಿ ಅಥವಾ ಮಗಳ ಮುಖ ನೋಡಿ ಹೋಗುತ್ತೇವೆ. ಆದರೆ ಮಹಿಳೆ ಮಾತ್ರ ತಮ್ಮ ದುಖಃ ಹಂಚಿಕೊಳ್ಳುವುದಿಲ್ಲ, ನಗುವಿನಿಂದಲೇ ಎಲ್ಲರ ಮನಸ್ಸು ಗೆಲ್ಲುತ್ತಾರೆ ಎಂದಿದ್ದಾರೆ. ಇದೇ ಸಮಯದಲ್ಲಿ ನಟಿ ಮಾಲಾಶ್ರೀ ಮಾತನಾಡಿದ್ದಾರೆ. ಮಹಿಳೆಯರು ಮನಸ್ಸು ಮಾಡಿದರೇ ಏನು ಬೇಕಾದರೂ ಸಾಧನೆ ಮಾಡುತ್ತಾರೆ. ಮಹಿಳೆಯರು ಸಮಾಜದ ಕಣ್ಣಾಗಿದ್ದು, ಮಹಿಳೆಯರಿಗೆ ಗೌರವ ಕೊಟ್ಟರೇ ದೇವರು ಒಲಿಯುತ್ತಾನೆ ಎಂದಿದ್ದಾರೆ.
ಇನ್ನೂ ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹಿಳೆಯರಿಗೆ ಬಿಬಿಎಂಪಿ ಹಾಗೂ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ದಿಟ್ಟ ಮಹಿಳಾ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. ಸಹಾಯಕ ಪೊಲೀಸ್ ಆಯುಕ್ತೆ ಎಂ.ಸಿ.ಕವಿತಾ, ನಿರ್ದೇಶಕಿ ಶೀತಲ್ ಶೆಟ್ಟಿ, ಹಿರಿಯ ವಕೀಲೆ ಶೀದೇವಿ ಪಾಟೀಲ್, ನಟಿ ವಿನಯಪ್ರಸಾದ್, ಟಿವಿ-9 ನಿರೂಪಕಿ ಶುಭಶ್ರೀ ಜೈನ್, ಹಿರಿಯ ಪತ್ರಕರ್ತೆ ಮಮತಾ ಮಾರ್ದಾಳ್, ಖ್ಯಾತ ಹಿನ್ನಲೆ ಗಾಯಕಿ ಎಂ.ಡಿ.ಪಲ್ಲವಿ ಸೇರಿದಂತೆ ಅನೇಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.