ಸೌತ್ ಸ್ಟಾರ್ ಹಿರೋಯಿನ್ ಪೂಜಾ ಹೆಗ್ಡೆ ಅನೇಕ ಸಿನೆಮಾಗಳ ಮೂಲಕ ದೊಡ್ಡ ಪ್ರಮಾಣದ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡಿದ್ದಾರೆ. ಸೋಲು ಗೆಲುವಿಗೆ ಸಂಬಂಧವಿಲ್ಲದಂತೆ ಸಿನಿರಂಗದಲ್ಲಿ ಮುನ್ನುಗ್ಗುತ್ತಿದ್ದಾರೆ. ಇನ್ನೂ ಕಳೆದ ಏ.21 ರಂದು ಬಾಲಿವುಡ್ ಸ್ಟಾರ್ ಹಿರೋ ಸಲ್ಮಾನ್ ಖಾನ್ ಜೊತೆಗೆ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಅಷ್ಟೊಂದು ಸಕ್ಸಸ್ ಕಾಣಲಿಲ್ಲ ಎನ್ನಲಾಗುತ್ತಿದೆ. ಇದೀಗ ಆಕೆ ವೆಕೇಷನ್ ಗೆ ಹಾರಿದ್ದು, ಅಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಪುಲ್ ಚಿಲ್ ಆಗಿ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡಿದ್ದಾರೆ.
ಕಳೆದ ವರ್ಷ ಪೂಜಾ ಹೆಗ್ಡೆ ನಟಿಸಿದ ಎಲ್ಲಾ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಸುಮಾರು ವರ್ಷಗಳ ಬಳಿಕ ಆಕೆ ಬಾಲಿವುಡ್ ನ ಕಿಸಿ ಕಾ ಭಾಯ್ ಕಿಸಿ ಕಾ ಜಾನ್ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದ ಸಹ ಅಷ್ಟೊಂದು ಸಕ್ಸಸ್ ಕಾಣಲಿಲ್ಲ. ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದೆ. ಕಳೆದ 2022 ರಲ್ಲಿ ಆಕೆ ರಾಧೆಶ್ಯಾಮ್, ಆಚಾರ್ಯ, ಸರ್ಕರ್ ಸೇರಿದಂತೆ ಕೆಲವೊಂದು ಸಿನೆಮಾಗಳು ಡಿಜಾಸ್ಟರ್ ಆಗಿ ಉಳಿದಿದೆ. ಇನ್ನೂ ಈ ಕಾರಣದಿಂದ ಆಕೆಯನ್ನು ಐರನ್ ಲೆಗ್ ಎಂದು ಹೇಳಲು ಶುರು ಮಾಡಿದರು. ಆಕೆಗೆ ಮತ್ತೆ ಬಿಗ್ ಹಿಟ್ ಸಿನೆಮಾ ಸಿಗದಿದ್ದರೇ ಆಕೆ ಪಕ್ಕಾ ಫೇಡ್ ಔಟ್ ಆಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆಕೆ ಕ್ರೇಜಿ ಆಫರ್ ಗಳನ್ನು ಪಡೆದುಕೊಂಡರು ಈ ಹಾದಿಯಲ್ಲೇ ಆಕೆ ಸಲ್ಮಾನ್ ಖಾನ್ ಜೊತೆಗೆ ಕಿಸಿ ಕಾ ಭಾಯ್ ಕಿಸಿ ಕಾ ಜಾನ್ ಎಂಬ ಸಿನೆಮಾದಲ್ಲಿ ನಟಿಸಿದ್ದು ಈ ಸಿನೆಮಾ ಸಹ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.
ಇನ್ನೂ ಪೂಜಾ ಹೆಗ್ಡೆ ಸೋತರು ಗೆದ್ದರೂ ಸಹ ಬಹುಬೇಡಿಕೆ ಹೊಂದಿರುವ ನಟಿಯಾಗಿದ್ದಾರೆ. ಇನ್ನೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಸದ್ದು ಮಾಡುತ್ತಲೇ ಇರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿರುತ್ತಾರೆ. ಈ ಹಾದಿಯಲ್ಲೇ ಇದೀಗ ಆಕೆ ಸಮ್ಮರ್ ವೇಕೇಷನ್ ಎಂಜಾಯ್ ಮಾಡಲು ಶ್ರೀಲಂಕಾಗೆ ತೆರಳಿದ್ದಾರೆ. ಶ್ರೀಲಂಕಾದ ಸುಂದರ ತಾಣಗಳಲ್ಲಿ ಆಕೆ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿನ ಕೆಲವೊಂದು ಪೊಟೋಗಳನ್ನು ತನ್ನ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಸದ್ಯ ಈ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಆಕೆಯ ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಮತಷ್ಟು ವೈರಲ್ ಮಾಡುತ್ತಿದ್ದಾರೆ.
ಇನ್ನೂ ಪೂಜಾ ಹೆಗ್ಡೆ ಗೆ ಸಕ್ಸಸ್ ನೀಡಲು ತ್ರಿವಿಕ್ರಮ್ ಶ್ರೀನಿವಾಸ್ ಮುಂದೆ ಬಂದಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ನಲ್ಲಿ ತೆರೆಕಾಣಲಿರುವಂತಹ SSMB28 ಸಿನೆಮಾದಲ್ಲಿ ಹಿರೋಯಿನ್ ಆಗಿ ನಟಿಸುತ್ತಿದ್ದಾರೆ. ಈ ಸಿನೆಮಾದ ಮೇಲೆ ಪೂಜಾ ಹೆಗ್ಡೆ ಸಹ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ತ್ರಿವಿಕ್ರಮ್ ರವರ ಜೊತೆಗೆ ಅರವಿಂದ ಸಮೇತ, ಅಲಾ ವೈಕುಂಠಪುರಂಲೋ ಸಿನೆಮಾಗಳ ಮೂಲಕ ಪೂಜಾ ಭಾರಿ ಸಕ್ಸಸ್ ಕಂಡಿದ್ದರು. ಇದೀಗ ಈ ಸಿನೆಮಾದ ಮೇಲೆ ಪೂಜಾ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎನ್ನಬಹುದಾಗಿದೆ.