News

ಶಾಲೆಯ ಬಸ್ ಡ್ರೈವರ್ ಜೊತೆಗೆ ಪ್ರೇಮಪಾಶಕ್ಕೆ ಸಿಲುಕಿ ಬಲಿಯಾದ 8ನೇ ತರಗತಿ ಹುಡುಗಿ, ಹೊಸ ವರ್ಷದಂದು ವಿಷಾದ….!

ಅಪ್ರಾಪ್ತ ವಯಸ್ಸಿನಲ್ಲಿ ಏರ್ಪಡುವಂತಹ ಪ್ರೀತಿಯಿಂದಾಗಿ ಅನೇಕ ಅಪ್ರಾಪ್ತರು ಮೃತಪಟ್ಟಿದ್ದಾರೆ. ಶಾಲಾ ಬಸ್ ಡ್ರೈವರ್‍ ಓರ್ವ ತನ್ನ ಮಗಳ ವಯಸ್ಸಿನ 8ನೇ ತರಗತಿ ವಿದ್ಯಾರ್ಥಿನಿಯನ್ನು ತನ್ನ ಪ್ರೇಮ ಪಾಶಕ್ಕೆ ಸಿಲುಕುವಂತೆ ಮಾಡಿದ್ದಾನೆ. ಆ ಅಪ್ರಾಪ್ತೆಯನ್ನು ಮನೆಯಿಂದ ಕರೆದುಕೊಂಡು ಹೋಗಿ ರೈಲಿಗೆ ಅಡ್ಡನಿಂತು ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಹೊಸ ವರ್ಷದಂದು ಚಿಕ್ಕಮಗಳೂರಿನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ಚಿಕ್ಕಮಗಳೂರಿನ ಗಿರಿಯಾಪುರ ಗ್ರಾಮದ ಖಾಸಗಿ ಶಾಲೆಯಲ್ಲಿ ಶಾಲಾ ಬಸ್  ಡ್ರೈವರ್‍ ಆಗಿದ್ದ ಸಂತೋಷ್ (38) ಎಂಬಾತ ಅದೇ ಶಾಲೆಯ ಜಾನವಿ (14) ವರ್ಷದ ಅಪ್ರಾಪ್ತೆಯನ್ನು ತನ್ನ ಪ್ರೇಮ ಪಾಶಕ್ಕೆ ಬೀಳಿಸಿಕೊಂಡಿದ್ದಾನೆ. ಈ ಪ್ರೇಮದಾಟದಲ್ಲಿ ವಿದ್ಯಾರ್ಥಿನಿ ಬಲಿಯಾಗಿದ್ದಾಳೆ. ಬದುಕಿ ಬಾಳಬೇಕಾಗಿದ್ದ ಬಾಲಕಿ ಇದೀಗ ಮೃತಪಟ್ಟಿದ್ದಾಳೆ. 8ನೇ ತರಗತಿಯಲ್ಲಿ ವ್ಯಾಸಂಗ ಮಾಡು‌ತ್ತಿರುವ ಜಾನವಿಯನ್ನು ಅದೇ ಶಾಲೆಯ ಬಸ್ ಡ್ರೈವರ್‍ ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿತ್ತು. ಈ ಕುರಿತು ವಿದ್ಯಾರ್ಥಿನಿ ಪೋಷಕರೊಂದಿಗೆ ಸಹ ಹೇಳಿಕೊಂಡಿದ್ದಳಂತೆ. ಬಳಿಕ ಬಾಲಕಿಯ ಪೋಷಕರು ಡ್ರೈವರ್‍ ಕಿರುಕುಳದ ಬಗ್ಗೆ ಶಾಲಾ ಮುಖ್ಯಸ್ಥರಿಗೆ ದೂರು ಸಹ ನೀಡಿದ್ದರು ಎನ್ನಲಾಗಿದೆ. ಬಳಿಕ ಆತನಿಗೆ ಪೋಷಕರಿಂದ ಎಚ್ಚರಿಕೆ ಪಡೆದುಕೊಂಡ ಬಳಿಕವೂ ತನ್ನ ವರಸೆಯನ್ನು ಬದಲಿಸಿಕೊಂಡಿರಲಿಲ್ಲ. ಸ್ನೇಹ ಎಂದೆ ಆಕೆಯನ್ನು ಪುಸಲಾಯಿಸಿ ಆತ್ಮೀಯತೆ ಬೆಳೆಸಿಕೊಂಡಿದ್ದಾನೆ.

ಇನ್ನೂ ಆತನ ಮಾತುಗಳನ್ನು ಜಾನ್ವಿ ನಂಬಿದ್ದಾಳೆ. ಡಿ.31 ರಂದು ಸ್ನೇಹಿತರ ಜೊತೆಗೆ ಹೊಸ ವರ್ಷದ ಪಾರ್ಟಿ ಮಾಡಲು ಹೋಗುವುದಾಗಿ ಜಾನ್ವಿ ಮನೆಯಿಂದ ಹೊರಗೆ ಬಂದಿದ್ದಾಳೆ. ಬಳಿಕ ಆಕೆಯನ್ನು ಡ್ರೈವರ್‍ ಸಂತೋಷ್ ಸುತ್ತಾಡಿದ್ದಾನೆ. ಜಾನ್ವಿಯನ್ನು ಕರೆದುಕೊಂಡ ಹೋದ ಸಂತೋಷ್ ಮಧ್ಯರಾತ್ರಿ ರೈಲಿಗೆ ಅಡ್ಡ ನಿಂತು ಸಾವಿಗೀಡಾಗಿದ್ದಾರೆ. ಬದುಕಿ ಬಾಳಬೇಕಿದ್ದ ಮಗು ಇದೀಗ ಇಹ ಲೋಕ ತ್ಯೆಜಿಸಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.  ರೈಲ್ವೇ ಟ್ರ್‍ಯಾಕ್ ಬಳಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನೂ ಶಾಲೆಯ ಬಸ್ ಡ್ರೈವರ್ ಕಿರುಕುಳದ ಬಗ್ಗೆ  ದೂರು ನೀಡಿದರೂ ಸಹ ಕ್ರಮ ಕೈಗೊಳ್ಳದ ಖಾಸಗಿ ಶಾಲೆಯ ಮುಖ್ಯಸ್ಥರ ವಿರುದ್ದ ಪೋಷಕರು ಆಕ್ರೋಷ ಹೊರಹಾಕಿದ್ದಾರೆ.

Most Popular

To Top