ಆಪಲ್ ಬ್ಯೂಟಿ ಹನ್ಸಿಕಾ ಮೊಟ್ವಾನಿ ದೇಶ ಮುದುರು ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ತೆಲುಗು ಸೇರಿದಂತೆ ಇತರೆ ಭಾಷೆಗಳಲ್ಲೂ ಸಹ ಬ್ಯಾಕ್ ಟು ಬ್ಯಾಕ್ ಆಫರ್ ಗಳನ್ನು ಗಿಟ್ಟಿಸಿಕೊಂಡರು. ಇನ್ನೂ ಸಿನೆಮಾಗಳಲ್ಲಿ ಬ್ಯುಸಿಯಾಗಿ ಸಾಗುತ್ತಿರುವ ಸಮಯದಲ್ಲೇ ಆಕೆ ಮುಂಬೈ ಮೂಲದ ಉದ್ಯಮಿ ಸೊಹೈಲ್ ಕತೂರಿಯಾ ಎಂಬಾತನನ್ನು ಮದುವೆಯಾದರು. ಟೀನೇಜ್ ನಲ್ಲೇ ಗ್ಲಾಮರ್ ಮೂಲಕ ಸದ್ದು ಮಾಡಿದ ಹನ್ಸಿಕಾ ಇದೀಗ ಆಕೆ ತನ್ನ ಕೆರಿಯರ್ ಬಗ್ಗೆ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ದೇಶಮುದುರು ಸಿನೆಮಾದ ಅವಕಾಶ ಬಂದಿದ್ದು, ಪೂರಿ ಜಗನ್ನಾಥ್ ರಿಂದ ಅಲ್ಲ ಎಂದು ಶಾಕ್ ಕೊಟ್ಟಿದ್ದಾರೆ.
ನಟಿ ಹನ್ಸಿಕಾ ದೇಶಮುದುರು ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡು ಈಗಲೂ ಸಹ ಆಕೆ ಹವಾ ಮಾತ್ರ ಕಡಿಮೆಯಾಗಿಲ್ಲ. ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಹನ್ಸಿಕಾ ಅನೇಕ ಯುವಕರ ಕ್ರಷ್ ಆಗಿದ್ದಾರೆ. ಜೊತೆಗೆ ಆಕೆಗಾಗಿ ತಮಿಳುನಾಡಿನಲ್ಲಿ ದೇವಾಲಯವನ್ನು ಸಹ ಕಟ್ಟಿಸಿದ್ದಾರೆ. ತೆಲುಗು ಸಿನಿಮಾ ಸ್ಟಾರ್ ಗಳಾದ ಅಲ್ಲು ಅರ್ಜುನ್, ರವಿತೇಜ, ಜೂನಿಯರ್ ಎನ್.ಟಿ.ಆರ್, ನಿತಿನ್ ಸೇರಿದಂತೆ ಅನೇಕರ ಜೊತೆಗೆ ಬಣ್ಣ ಹಚ್ಚಿದರು. ಬಾಲನಟಿಯಾಗಿ ಎಂಟ್ರಿ ಕೊಟ್ಟ ಈಕೆ ದೇಶಮುದುರು ಸಿನೆಮಾದ ಮೂಲಕ ಓವರ್ ನೈಟ್ ಅನೇಕ ಯುವಕರ ಕನಸಿನ ರಾಣಿಯಾದರು. ಇನ್ನೂ ದೇಶಮುದುರು ಸಿನೆಮಾದ ನಿರ್ದೇಶಕ ಪೂರಿ ಜಗನ್ನಾಥ್ ಹನ್ಸಿಕಾರನ್ನು ಬ್ಯೂಟಿಪುಲ್ ಆಗಿ ಪ್ರೊಜೆಕ್ಟ್ ಮಾಡಿದ್ದರು. ಇನ್ನೂ ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಹನ್ಸಿಕಾ ದೇಶಮುದುರು ಸಿನೆಮಾದ ಬಗ್ಗೆ ಕೆಲವೊಂದು ಇಂಟ್ರಸ್ಟಿಂಗ್ ಅಂಡ್ ಶಾಕಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನನಗೆ ದೇಶಮುದುರು ಸಿನೆಮಾ ಒಳ್ಳೆಯ ಕ್ರೇಜ್ ತಂದುಕೊಟ್ಟಿತ್ತು. ಈ ಸಿನೆಮಾದ ಕಾರಣದಿಂದ ನಾನು ಸ್ವಂತ ಮನೆ ಹಾಗೂ ಕಾರನ್ನು ಖರೀದಿಸಿದೆ. ಆದರೆ ನಾನು ಈ ಸ್ಥಾನಕ್ಕೆ ಬರಲು ಮುಖ್ಯ ಕಾರಣ ಮಾತ್ರ ಪೂರಿಜಗನ್ನಾಥ್ ರವರಲ್ಲ. ನನ್ನನ್ನು ಪೂರಿ ಜಗನ್ನಾಥ್ ರವರ ಕಣ್ಣಿಗೆ ಬೀಳುವಂತೆ ಮಾಡಿದ್ದು, ಮೆಹರ್ ರಮೇಶ್ ರವರು. ಬಾಲನಟಿಯಾಗಿ ನಾನು ಮೆಹರ್ ರಮೇಶ್ ಗೆ ಗೊತ್ತು. ದೇಶ ಮುದುರು ಸಿನೆಮಾಗಾಗಿ ಪೂರಿಜಗನ್ನಾಥ್ ರವರು ಹೊಸ ನಟಿಗಾಗಿ ಹುಡುಕುತ್ತಿದ್ದರು. ಆಗ ಮೆಹರ್ ರಮೇಶ್ ನನ್ನ ಬಗ್ಗೆ ಪೂರಿ ಜಗನ್ನಾಥ್ ರವರಿಗೆ ಹೇಳಿದ್ದರು. ಅದರಿಂದ ಕೂಡಲೇ ಪೂರಿ ಜಗನ್ನಾಥ್ ನನ್ನನ್ನು ದೇಶಮುದುರು ಸಿನೆಮಾಗೆ ಆಯ್ಕೆ ಮಾಡಿಕೊಂಡರು ಎಂದು ಕಾಮೆಂಟ್ಸ್ ಮಾಡಿದ್ದಾರೆ. ಇನ್ನೂ ಹನ್ಸಿಕಾ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇನ್ನೂ ನಟಿ ಹನ್ಸಿಕಾ ಕಳೆದ ವರ್ಷ ಡಿಸೆಂಬರ್ 4 ರಂದು ತನ್ನ ಬ್ಯುಸಿನೆಸ್ ಪಾರ್ಟನರ್ ಸುಹೇಲ್ ಎಂಬಾತನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸದ್ಯ ಪತಿಯೊಂದಿಗೆ ಆಕೆ ಮದುವೆ ಜೀವನವನ್ನು ಎಂಜಾಯ್ ಮಾಡುತ್ತಾ ಸಾಗುತ್ತಿದ್ದಾರೆ. ಮದುವೆ ಬಳಿಕವೂ ಸಹ ಹನ್ಸಿಕಾ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಗಳ ಮೂಲಕ ಸದ್ದು ಮಾಡುತ್ತಿದ್ದಾರೆ.