ಬಾಲಕೃಷ್ಣ ಕಾಮೆಂಟ್ ಗೆ ಪರೋಕ್ಷವಾಗಿ ಕೌಂಟರ್ ಕೊಟ್ಟ ನಾಗಚೈತನ್ಯ ಅಂಡ್ ಅಖಿಲ್….!

ನಂದಮೂರಿ ಬಾಲಕೃಷ್ಣ ಅಭಿನಯದ ವೀರಸಿಂಹಾರೆಡ್ಡಿ ಸಿನೆಮಾದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅಕ್ಕಿನೇನಿ ತೊಕ್ಕಿನೇನಿ ಎಂದು ಹೇಳಿದ್ದು, ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಅಕ್ಕಿನೇನಿ ಫ್ಯಾನ್ಸ್ ಗರಂ ಆಗಿದ್ದು, ಇದೀಗ ಅಕ್ಕಿನೇನಿ ನಾಗಚೈತನ್ಯ ಹಾಗೂ ಅಖಿಲ್ ಸಹ…

ನಂದಮೂರಿ ಬಾಲಕೃಷ್ಣ ಅಭಿನಯದ ವೀರಸಿಂಹಾರೆಡ್ಡಿ ಸಿನೆಮಾದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅಕ್ಕಿನೇನಿ ತೊಕ್ಕಿನೇನಿ ಎಂದು ಹೇಳಿದ್ದು, ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಅಕ್ಕಿನೇನಿ ಫ್ಯಾನ್ಸ್ ಗರಂ ಆಗಿದ್ದು, ಇದೀಗ ಅಕ್ಕಿನೇನಿ ನಾಗಚೈತನ್ಯ ಹಾಗೂ ಅಖಿಲ್ ಸಹ ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮೂಲಕ ಪರೋಕ್ಷವಾಗಿ ಕೌಂಟರ್‍ ನೀಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ನಾಗಚೈತನ್ಯ ಹಾಗೂ ಅಖಿಲ್ ಹಂಚಿಕೊಂಡ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ವೀರಸಿಂಹಾರೆಡ್ಡಿ ಸಿನೆಮಾದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಬಾಲಕೃಷ್ಣ ಜೋರಾಗಿಯೇ ಮಾತನಾಡಿದ್ದಾರೆ. ಇನ್ನೂ ವೀರಸಿಂಹಾರೆಡ್ಡಿ ಶೂಟಿಂಗ್ ವೇಳೆ ನಡೆದ ಕೆಲವೊಂದು ಸನ್ನಿವೇಶಗಳ ಬಗ್ಗೆ ಮಾತನಾಡಿದ್ದಾರೆ. ಶೂಟಿಂಗ್ ನಲ್ಲಿ ಒಬ್ಬ ಕಲಾವಿದರೊಂದಿಗೆ ಅನೇಕ ಹಳೆಯ ವಿಚಾರಗಳನ್ನು ಮಾತನಾಡಿಕೊಳ್ಳುತ್ತಿದ್ದೆವು. ವೇದ ಶಾಸ್ತ್ರಗಳು, ತಂದೆಯ ಡೈಲಾಗ್ ಗಳು, ಆ ರಂಗಾರಾವು, ಅಕ್ಕಿನೇನಿ ತೊಕ್ಕಿನೇನಿ ಎಂಬ ವಿಚಾರಗಳನ್ನು ಮಾತಾನಾಡಿಕೊಳ್ಳುತ್ತಿದ್ದೆವು ಎಂದು ಬಾಲಯ್ಯ ಹೇಳಿದ್ದರು. ಈ ಹೇಳಿಕೆ ತುಂಬಾನೆ ವಿವಾದ ಸೃಷ್ಟಿ ಮಾಡಿತ್ತು. ಇನ್ನೂ ಬಾಲಕೃಷ್ಣ ಅಕ್ಕಿನೇನಿ ತೊಕ್ಕಿನೇನಿ ಎಂದು ಹೇಳಿದ್ದು, ಈ ಹೇಳಿಕೆ ವಿರುದ್ದ ಅಕ್ಕಿನೇನಿ ಅಭಿಮಾನಿಗಳು ತೀವ್ರವಾಗಿ ಅಸಮಧಾನ ಹೊರಹಾಕಿದ್ದಾರೆ. ಬಾಯಿಗೆ ಬಂದಂತೆ ಹೇಳುವುದು ಸರಿಯೇ ಎಂದು ವಿಮರ್ಶೆಗಳನ್ನು ಸಹ ಮಾಡುತ್ತಿದ್ದಾರೆ. ಸದಾ ತಂದೆಯ ಬಗ್ಗೆ ಮಾತನಾಡುವ ಬಾಲಕೃಷ್ಣ, ಇತರೆ ಲೆಜೆಂಡ್ ನಟರಿಗೂ ಸಹ ಗೌರವ ಕೊಡುವುದನ್ನು ಕಲಿಯಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಇದೀಗ ಈ ವಾಖ್ಯೆಗಳಿಗೆ ಅಕ್ಕಿನೇನಿ ಕುಟುಂಬದ ನಾಗಚೈತನ್ಯ ಹಾಗೂ ಅಖಿಲ್ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಒಂದರ ಮೂಲಕ ಟಾಂಗ್ ನೀಡಿದ್ದಾರೆ. ಅವರು ಹಂಚಿಕೊಂಡ ಪೋಸ್ಟ್ ನಲ್ಲಿರುವಂತೆ ನಂದಮೂರಿ ತಾರಕ ರಾಮಾರಾವು, ಅಕ್ಕಿನೇನಿ ನಾಗೇಶ್ವರ್‍ ರಾವು, ಎಸ್.ಪಿ ರಂಗರಾವು ರವರು ತೆಲುಗು ಮಾತೆಯ ಮುದ್ದಿನ ಮಕ್ಕಳು, ಅವರನ್ನು ಅಗೌರವದಿಂದ ಕಾಣುವುದು ನಮ್ಮನ್ನು ನಾವು ಕಡಿಮೆ ಮಾಡಿಕೊಂಡಂತೆ ಎಂದು ಪೋಸ್ಟ ಒಂದನ್ನು ಹಂಚಿಕೊಂಡಿದ್ದಾರೆ. ಇನ್ನೂ ಒಂದೇ ಪೋಸ್ಟ್ ಅನ್ನು ನಾಗಚೈತನ್ಯ ಹಾಗೂ ಅಖಿಲ್ ಇಬ್ಬರೂ ಹಂಚಿಕೊಂಡಿದ್ದಾರೆ. ಇದೀಗ ಅವರ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಈ ವಿವಾದ ಹಾಟ್ ಟಾಪಿಕ್ ಆಗಿದೆ. ಇನ್ನೂ ಈ ಬಗ್ಗೆ ಬಾಲಕೃಷ್ಣ ಯಾವ ರೀತಿಯಲ್ಲಿ ರಿಯಾಕ್ಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನೂ ಈ ಬಗ್ಗೆ ಅಕ್ಕಿನೇನಿ ನಾಗಾರ್ಜುನ ಇನ್ನೂ ರಿಯಾಕ್ಟ್ ಆಗಿಲ್ಲ. ಜೊತೆಗೆ ಅಕ್ಕಿನೇನಿ ನಾಗಾರ್ಜುನ ಹಾಗೂ ಬಾಲಕೃಷ್ಣ ನಡುವೆ ಎಲ್ಲವೂ ಸರಿಯಿಲ್ಲ ಎಂದು ಅನೇಕ ವಿವಾದಗಳು ನಡೆಯುತ್ತಿರುತ್ತದೆ ಎಂದು ಸುದ್ದಿಗಳು ಕೇಳಿಬರುತ್ತಲೇ ಇರುತ್ತದೆ. ಇದೀಗ ಬಾಲಕೃಷ್ಣ ನೀಡಿದ ಹೇಳಿಕೆಗಳು ಈ ಸುದ್ದಿಗಳಿಗೆ ಮತಷ್ಟು ಬಲ ತಂದುಕೊಟ್ಟಿದೆ ಎನ್ನಲಾಗುತ್ತಿದೆ. ಇನ್ನೂ ಈ ವಿವಾದ ಎಲ್ಲಿಯವರೆಗೆ ಸಾಗುತ್ತದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.