Film News

ಕನ್ನಡಕ್ಕೆ ನನ್ನ ಮೊದಲ ಆದ್ಯತೆ ಎಂದ ಸಪ್ತಮಿ ಗೌಡ, ಬೇರೆ ಭಾಷೆಗಳಲ್ಲಿ ನಟಿಸಿದರು ಕನ್ನಡಕ್ಕೆ ನನ್ನ ಆದ್ಯತೆ…!

ಕನ್ನಡದ ಕಾಂತಾರ ಸಿನೆಮಾ ಇಡೀ ದೇಶದಲ್ಲೇ ಸಂಚಲನ ಸೃಷ್ಟಿಸಿದ ಸಿನೆಮಾ ಆಗಿದೆ. ಮೊದಲಿಗೆ ಕನ್ನಡದಲ್ಲಿ ಮಾತ್ರ ಬಿಡುಗಡೆಯಾದ ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿದೆ. ಈ ಸಿನೆಮಾದಲ್ಲಿ ಕಾಣಿಸಿಕೊಂಡ ಕಲಾವಿದರು ಸಹ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರ್ತಿಸಿಕೊಂಡಿದ್ದಾರೆ. ಈ ಸಿನೆಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಸಪ್ತಮಿ ಗೌಡ ಇದೀಗ ಬಾಲಿವುಡ್ ನಲ್ಲಿ ಸಿನೆಮಾ ಮಾಡುತ್ತಿದ್ದಾರೆ. ಇತ್ತಿಚಿಗೆ ನಡೆದ ಸಂದರ್ಶನದಲ್ಲಿ ಆಕೆ ನಾನು ಯಾವುದೇ ಭಾಷೆಯಲ್ಲಿ ನಟಿಸದರೂ ಕೂಡ ನನ್ನ ಮೊದಲ ಆದ್ಯತೆ ಕನ್ನಡ ಭಾಷೆಗೆ ಎಂದು ಹೇಳಿದ್ದು, ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನಟಿ ಸಪ್ತಮಿ ಗೌಡ ಕಾಶ್ಮೀರಿ ಫೈಲ್ಸ್ ಫೇಂ ನ ವಿವೇಕ್ ಅಗ್ನಿಹೋತ್ರಿರವರ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇತ್ತಿಚಿಗಷ್ಟೆ ಆಕೆ ಚಿತ್ರತಂಡವನ್ನು ಸಹ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ವಾಕ್ಸಿನ್ ವಾರ್‍ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ವಿವೇಕ್ ಅಗ್ನಿಹೋತ್ರಿ ಕಾಂತಾರ ಸಿನೆಮಾ ನೋಡಿ ಅದರಲ್ಲಿ ಸಪ್ತಮಿ ಗೌಡ ನಟನೆಯನ್ನು ಮೆಚ್ಚಿದ್ದಾರೆ ಜೊತೆಗೆ ಅವರ ಸಿನೆಮಾಗೆ ಆಕೆ ಸ್ಯೂಟ್ ಆಗುತ್ತಾರೆ ಎಂದು ಆಕೆಯನ್ನು ಸಿನೆಮಾಗಾಗಿ ಆಯ್ಕೆ ಮಾಡಿದ್ದಾರೆ ಇನ್ನೂ ಈ ಬಗ್ಗೆ ಸಪ್ತಮಿ ಗೌಡ ಇತ್ತಿಚಿಗೆ ನಡೆದ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇನ್ನೂ ನಟಿ ಸಪ್ತಮಿ ಗೌಡ ತಾನು ದಿ ವಾಕ್ಸಿನ್ ವಾರ್‍ ಸಿನೆಮಾಗೆ ಹೇಗೆ ಆಯ್ಕೆಯಾದೆ ಎಂಬುದರ ಬಗ್ಗೆ ತಿಳಿಸುತ್ತಾ, ಕಾಂತಾರ ಸಿನೆಮಾ ನೋಡಿ ವಿವೇಕ್ ಅಗ್ನಿಹೋತ್ರಿ ರವರು ರಿಷಭ್ ಶೆಟ್ಟಿಗೆ ಕರೆ ಮಾಡಿದ್ದರು. ನನ್ನ ಸಿನೆಮಾದಲ್ಲಿನ ಪಾತ್ರಕ್ಕೆ ಸಪ್ತಮಿ ಸೂಕ್ತವಾಗಿದ್ದಾರೆ ಎಂದು ನನ್ನ ಪೋನ್ ನಂಬರ್‍ ರಿಷಭ್ ರಿಂದ ಪಡೆದುಕೊಂಡಿದ್ದಾರೆ. ಬಳಿಕ ನನಗೆ ಕರೆ ಮಾಡಿ ಆ ಪಾತ್ರದಲ್ಲಿ ನಾನು ನಟಿಸುವಂತೆ ಕೇಳಿದರು. ನಾನು ಸಹ ತಕ್ಷಣ ಒಪ್ಪಿಕೊಂಡೆ. ಬಳಿಕ ಸಿನೆಮಾದ ಸ್ಕ್ರಿಪ್ಟ್ ನನಗೆ ಕಳುಹಿಸಿದ್ದಾರೆ. ನನಗೆ ನನ್ನ ಪಾತ್ರ ತುಂಬಾನೆ ಇಷ್ಟವಾಯಿತು. ಬಳಿಕ ನಾನು ಈ ಸಿನೆಮಾದಲ್ಲಿ ಒಂದು ಭಾಗವಾಗಿದ್ದೇನೆ ಎಂದ ಅವರಿಗೆ ಮತ್ತೊಂದು ಪ್ರಶ್ನೆ ಸಹ ಎದುರಾಗಿದೆ. ಈ ಸಿನೆಮಾದ ಬಳಿಕ ಬಾಲಿವುಡ್ ನಲ್ಲಿ ಮತ್ತೆ ಆಫರ್‍ ಬಂದರೇ ನಟಿಸುತ್ತೀರಾ ಎಂದು ಕೇಳಿದ್ದಾರೆ ಅದಕ್ಕೆ ಉತ್ತರಿಸಿದ ಸಪ್ತಮಿ ಗೌಡ, ಕಥೆ ಚೆನ್ನಾಗಿದ್ದರೇ ಖಂಡಿತವಾಗಿ ನಟಿಸುತ್ತೇನೆ. ಆದರೆ ನನ್ನ ಆದ್ಯತೆ ಮಾತ್ರ ಕನ್ನಡ ಸಿನೆಮಾಗಳಿಗೆ. ಕನ್ನಡ ಸಿನೆಮಾಗಳ ಆಫರ್‍ ಗಳಿಗಾಗಿ ಎದುರು ನೋಡುತ್ತಿರುತ್ತೇನೆ ಎಂದು ಕನ್ನಡ ಪ್ರೇಮ ಸಾರಿದ್ದಾರೆ.

ಜೊತೆಗೆ ಸಿನೆಮಾದ ಬಗ್ಗೆ ಮತಷ್ಟು ವಿಚಾರಗಳನ್ನು ಆಕೆ ಹಂಚಿಕೊಂಡಿದ್ದಾರೆ. ಈ ಸಿನೆಮಾದಲ್ಲಿ ನಾಯಕ ಅಥವಾ ನಾಯಕಿ ಎಂಬುದು ಇರುವುದಿಲ್ಲ. ಸಿನೆಮಾದಲ್ಲಿನ ಎಲ್ಲಾ ಪಾತ್ರಗಲೂ ಪ್ರಾಮುಖ್ಯತೆ ಹೊಂದಿದೆ. ನನ್ನ ಪಾತ್ರವಂತೂ ತುಂಬಾನೆ ಕಷ್ಟಕರವಾಗಿದೆ. ಸಿನಿರಂಗದಲ್ಲಿ ಸುಲಭದ ಪಾತ್ರ ಇದ್ದರೇ ಮಜಾ ಇರುವುದಿಲ್ಲ. ಇನ್ನೂ ಈ ಪಾತ್ರದಲ್ಲಿ ನಟಿಸಲು ನನಗೆ ನಿರ್ದೇಶಕ ವಿವೇಕ್ ತುಂಬಾ ಬೆಂಬಲ ನೀಡಿದ್ದಾರೆ ಎಂದಿದ್ದಾರೆ. ಇನ್ನೂ ಸಪ್ತಮಿ ಗೌಡ ರವರ ಕನ್ನಡ ಪ್ರೇಮಕ್ಕೆ ಕನ್ನಡಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Most Popular

To Top