Film News

ಮಗಳ ಮಾತುಗಳಿಗೆ ಕಣ್ಣೀರಾಕಿದ ಸೂಪರ್ ಸ್ಟಾರ್ ರಜನಿಕಾಂತ್, ಎಮೋಷನಲ್ ಕಾಮೆಂಟ್ಸ್ ಮಾಡಿದ ಐಶ್ವರ್ಯ……!

ಸೂಪರ್‍ ಸ್ಟಾರ್‍ ರಜನಿಕಾಂತ್ ಅವರ ಪುತ್ರಿ ಐಶ್ವರ್ಯ ರಜನಿಕಾಂತ್ ನಿರ್ದೇಶನದಲ್ಲಿ ಲಾಲ್ ಸಲಾಂ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಶ್ರೀಘ್ರದಲ್ಲೇ ತೆರೆಕಾಣಲಿದೆ. ಈ ಸಿನೆಮಾದಲ್ಲಿ ಸೂಪರ್‍ ಸ್ಟಾರ್‍ ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾದ ಮೇಲೆ ಸೂಪರ್‍ ಸ್ಟಾರ್‍ ಫ್ಯಾನ್ಸ್ ಸಹ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನೆಮಾ ಫೆಬ್ರವರಿ ಮಾಹೆಯಲ್ಲಿ ರಿಲೀಸ್ ಆಗಲಿದ್ದು, ಈ ಸಂಬಂಧ ಪ್ರಮೋಷನ್ ಕಾರ್ಯಕ್ರಮಗಳನ್ನು ಸಹ ಚಿತ್ರತಂಡ ಭರದಿಂದ ನಡೆಸುತ್ತಿದೆ.

ಲಾಲ್ ಸಲಾಂ ಚಿತ್ರತಂಡ ಚೆನೈನಲ್ಲಿ ‌ಪ್ರಿ ರಿಲೀಸ್ ಈವೆಂಟ್ ಅದ್ದೂರಿಯಾಗಿ ನಿರ್ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸೂಪರ್‍ ಸ್ಟಾರ್‍ ರಜನಿಕಾಂತ್ ರವರೂ ಸಹ ಹಾಜರಾಗಿದ್ದರು. ಈ ಸಮಯದಲ್ಲಿ ಐಶ್ವರ್ಯ ಮಾತನಾಡಿದ್ದು, ಆಕೆಯ ಮಾತುಗಳನ್ನು ಕೇಳಿದ ರಜನಿಕಾಂತ್ ಭಾವುಕರಾಗಿದ್ದಾರೆ. ಇತ್ತೀಚಿಗೆ ರಜನಿಕಾಂತ್ ಹಾಗೂ ಅವರು ಕುಟುಂಬದ ಮೇಲೆ ಎದುರಾದಂತಹ ಟ್ರೋಲ್ ಗಳ ಬಗ್ಗೆ ಆಕೆ ರಿಯಾಕ್ಟ್ ಆಗಿ ಎಮೋಷನಲ್ ಆಗಿದ್ದಾರೆ. ಮಗಳಿಗೆ ಕಷ್ಟ ಬಂದರೇ ತಂದೆ ಹಣ ಕೊಡುತ್ತಾರೆ. ಆದರೆ ನಮ್ಮ ತಂದೆ ಮಾತ್ರ ನನಗೆ ಸಿನೆಮಾ ಕೊಟ್ಟರು. ಸೋಷಿಯಲ್ ಮಿಡಿಯಾದಲ್ಲಿ ನಾನು ಅಷ್ಟೊಂದು ಆಕ್ಟೀವ್ ಆಗಿರೊಲ್ಲ. ಆದರೆ ನನ್ನ ಟೀಂ ಬಂದು ಸೋಷಿಯಲ್ ಮಿಡಿಯಾದಲ್ಲಿ ಬಂದಂತಹ ನೆಗೆಟಿವಿಟಿ ಬಗ್ಗೆ ಹೇಳಿದರು. ಆ ಸಮಯದಲ್ಲಿ ತುಂಬಾನೆ ನೋವಾಯ್ತು ಹಾಗೂ ಕೆಲವೊಂದು ಸಂದರ್ಭದಲ್ಲಿ ಕೋಪ ಸಹ ಬಂತು. ಯಾಕಂದ್ರೆ ನಾವು ಸಹ ಮನುಷ್ಯರೇ, ನಮಗೂ ಸಹ ಭಾವನೆಗಳು ಇರುತ್ತವೆ ಅಲ್ಲವೇ ಎಂದಿದ್ದಾರೆ.

ಇತ್ತೀಚಿಗೆ ನನ್ನ ತಂದೆಯನ್ನು ಸಂಘಿ ಎಂದು ಕರೆಯುತ್ತಾರೆ. ಪೊಲಿಟಿಕಲ್ ಪಾರ್ಟಿಗೆ ಬೆಂಬಲ ಕೊಡುವವರು ಎಂದು ಕರೆಯುತ್ತಿದ್ದಾರೆ ಎಂದು ತಿಳಿದುಬಂತು. ಅವರು ಸಂಘಿ ಅಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಆತ ಸಂಘಿ ಎಂದಾದರೇ ಲಾಲ್ ಸಲಾಮ್ ಸಿನೆಮಾದಲ್ಲಿ ಮುಸ್ಲೀಂ ಪಾತ್ರದಲ್ಲಿ ನಟಿಸುವಂತಹವರು ಅಲ್ಲವೇ ಅಲ್ಲ. ಅವರು ಮಾನವತವಾದಿ ಮಾತ್ರ ಎಂದು ತನ್ನ ಮನಸ್ಸಿನ ಮಾತನ್ನು ಹೊರಹಾಕಿದ್ದಾರೆ. ಇನ್ನೂ ಮಾತುಗಳನ್ನು ಕೇಳಿದ ರಜನಿಕಾಂತ್ ರವರು ಎಮೋಷನಲ್ ಆಗಿದ್ದಾರೆ. ಇದೀಗ ರಜನಿಕಾಂತ್ ರವರ ಪುತ್ರಿ ಐಶ್ವರ್ಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಸಿನೆಮಾ ಫೆ.9 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

Most Popular

To Top