Film News

ಆ ವರ್ಷ ನನ್ನ ಜೀವನ ತುಂಬಾ ಕಷ್ಟಕರವಾಗಿತ್ತು ಎಂದು ಕಾಮೆಂಟ್ಸ್ ಹಂಚಿಕೊಂಡ ಶ್ರುತಿ ಹಾಸನ್…!

ಸೌತ್ ಇಂಡಿಯನ್ ಸ್ಟಾರ್‍ ಶ್ರುತಿ ಹಾಸನ್ ಕಾಲಿವುಡ್ ಸಿನಿರಂಗದ ಲೋಕನಾಯಕ ಎಂದೇ ಕರೆಯಲಾಗುವ ಕಮಲ್ ಹಾಸನ್ ಪುತ್ರಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ತಮ್ಮ ಸ್ವಂತ ಬಲದಿಂದ ದೊಡ್ಡ ಸ್ಟಾರ್‍ ಡಮ್ ದಕ್ಕಿಸಿಕೊಂಡರು. ದಕ್ಷಿಣ ಭಾರತದ ಬಹುಬೇಡಿಕೆ ನಟಿ ಶ್ರುತಿ ಹಾಸನ್ ಗ್ಲಾಮರ್‍ ಜೊತೆಗೆ ನಟನೆ, ಗಾಯನ, ಡ್ಯಾನ್ಸ್ ಮೂಲಕ ಅಭಿಮಾನಿಗಳ ಮನದಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಇನ್ನೂ ಸಾಮಾಜಿಕ ಜಾಲತಾಣಗಳಲ್ಲೂ ಸಹ ಸಕ್ರೀಯರಾಗಿರುವ ನಟಿ ಶ್ರುತಿ ಆಗಾಗಾ ತಮ್ಮ ವೈಯುಕ್ತಕ ವಿಚಾರಗಳ ಸಂಬಂಧ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಕಾಮೆಂಟ್ಸ್ ವೈರಲ್ ಆಗುತ್ತಿವೆ.

ನಟಿ ಶ್ರುತಿ ಹಾಸನ್ ಅನಗನಗಾ ಒಕ ಧೀರುಡು ಎಂಬ ಸಿನೆಮಾದ ಮೂಲಕ ನಟಿಯಾಗಿ ಎಂಟ್ರಿ ಕೊಟ್ಟರು. ಇದಕ್ಕೂ ಮುಂಚೆಯೇ ಆಕೆ ಬಾಲನಟಿಯಾಗಿ ಸಿನೆಮಾಗಳಲ್ಲಿ ಕಾಣಿಸಿಕೊಂಡರು. ಬಳಿಕ ತನ್ನ ಸ್ವಂತ ಪ್ರತಿಭೆಯಿಂದ ಅನೇಕ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಸಹ ಪಡೆದುಕೊಂಡರು. ಸೌತ್ ನಲ್ಲಿ ಸ್ಟಾರ್‍ ನಟಿಯಾಗಿ ಫೇಂ ಸಹ ಪಡೆದುಕೊಂಡರು. ಇನ್ನೂ ಕೆಲವು ದಿನಗಳ ಕಾಲ ಕೆಲವೊಂದು ಸಮಸ್ಯೆಗಳ ನಿಮಿತ್ತ ಆಕೆ ಸಿನೆಮಾಗಳಿಂದ ದೂರವುಳಿದರು. ಬಳಿಕ ಆಕೆ ರವಿತೇಜ ಅಭಿನಯದ ಕ್ರಾಕ್ ಸಿನೆಮಾದ ಮೂಲಕ ಮತ್ತೆ ರೀ ಎಂಟ್ರಿ ಕೊಟ್ಟರು. ಈ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದ ಕಾರಣದಿಂದ ಆಕೆ ಮತ್ತೆ ಮೊದಲಿನ ಕ್ರೇಜ್ ಪಡೆದುಕೊಂಡರು. ಪ್ರಸಕ್ತ ವರ್ಷದಲ್ಲಿ ಆಕೆ ಒಳ್ಳೆಯ ಒಪೆನಿಂಗ್ ಪಡೆದುಕೊಂಡಿದ್ದಾರೆ. ಕಳೆದ ಜನವರಿ ಮಾಹೆಯಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಬಿಡುಗಡೆಯಾದ ವೀರಸಿಂಹಾರೆಡ್ಡಿ ಹಾಗೂ ವಾಲ್ತೇರು ವೀರಯ್ಯ ಸಿನೆಮಾಗಳು ಒಳ್ಳೆಯ ಸಕ್ಸಸ್ ಕಂಡುಕೊಂಡಿತ್ತು. ಈ ಸಿನೆಮಾಗಳ ಮೂಲಕ ವರ್ಷದ ಆರಂಭದಲ್ಲೇ ಶ್ರುತಿ ಹಾಸನ್ ಒಳ್ಳೆಯ ಸಕ್ಸಸ್ ಕಂಡುಕೊಂಡರು.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಶ್ರುತಿ ಹಾಸನ್ ತನ್ನ ವೈಯುಕ್ತಿಕ ವಿಚಾರಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ.  ಈ ಹಾದಿಯಲ್ಲೇ ನಟಿ ಶ್ರುತಿ ಹಾಸನ್ ತನ್ನ ಜೀವನದಲ್ಲಿ ನಡೆದಂತಹ ಕೆಟ್ಟ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ತಮ್ಮ ಜೀವನದಲ್ಲಿ ಎದುರಿಸಿದಂತಹ ಕಹಿ ಅನುಭವಗಳನ್ನು ಎಮೋಷನಲ್ ಪೋಸ್ಟ್ ಮೂಲಕ ಶೇರ್‍ ಮಾಡಿದ್ದಾರೆ. 2012 ರಲ್ಲಿ ಆಕೆಗೆ ಎದುರಾದ ಕಹಿ ಅನುಭವಗಳನ್ನು ನೆನಪಿಸಿಕೊಳ್ಳಿತ್ತಾ ಪೊಟೋ ಒಂದನ್ನು ಸಹ ಹಂಚಿಕೊಂಡಿದ್ದಾರೆ. ಆಕೆಯ ಪೋಸ್ಟ್ ನಲ್ಲಿರುವಂತೆ ಈ ಪೊಟೋ 2012 ರಂದು ತೆಗೆದಿದ್ದು, ಆ ವರ್ಷ ನನಗೆ ಯಾವುದೇ ರೀತಿಯಲ್ಲೂ ಒಳ್ಳೆಯದು ಆಗಿಲ್ಲ. ವೃತ್ತಿ ಪರವಾಗಿಯೂ ಸಹ ಅನೇಕ ಬದಲಾವಣೆಗಳು ಆದವು. ಅಂದು ನನ್ನ ಜೀವನ ನೆಗೆಟೀವ್ ನತ್ತ ಸಾಗಿತ್ತು. ಭವಿಷ್ಯತ್ ಗಾಗಿ ಸದಾ ಏನೋ ಒಂದನ್ನು ಹುಡುಕುತ್ತಾ, ಇನ್ನೂ ಏನೋ ಕಲಿಯಬೇಕು ಎಂದು ಕನಸುಗಳನ್ನು ಸಹ ಕಾಣುತ್ತಿದ್ದೆ. ಜೀವನ ನಿಶ್ಯಬ್ದ ಎಂಬುದು ತುಂಬಾ ಹಿಂಸಾತ್ಮಕವಾಗಿರುತ್ತದೆ ಎಂದು ಎಮೋಷನಲ್ ಪೋಸ್ಟ್ ಮಾಡಿದ್ದಾರೆ.

ಇನ್ನೂ ಶ್ರುತಿ ಹಾಸನ್ ಹಂಚಿಕೊಂಡ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಸದ್ಯ ಶ್ರುತಿ ಹಾಸನ್ ಬಹುನಿರೀಕ್ಷಿತ ಸಲಾರ್‍ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿದ್ದು, ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿದೆ. ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿತ್ತು. ಈ ಸಿನೆಮಾದ ಮೇಲೆ ಶ್ರುತಿ ಹಾಸನ್ ತುಂಬಾನೆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎಂದು ಸಹ ಹೇಳಲಾಗುತ್ತಿದೆ.

Most Popular

To Top