ಬೀಚ್ ನಲ್ಲಿ ಸಖತ್ ಎಂಜಾಯ್ ಮಾಡುತ್ತಿರುವ ರೇಣು ದೇಸಾಯಿ, ವೈರಲ್ ಆದ ವಿಡಿಯೋ…!

Follow Us :

ಪವನ್ ಕಲ್ಯಾನ್ ಮಾಜಿ ಪತ್ನಿ ರೇಣು ದೇಸಾಯಿ ಪವನ್ ರವರೊಂದಿಗೆ ಬೇರೆಯಾದ ಬಳಿಕ ಒಂಟಿಯಾಗಿಯೇ ಪುಣೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸಿನೆಮಾಗಳಿಂದ ದೂರವಾದರೂ ಸಹ ಆಕೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಅಭಿಮಾನಿಗಳಿಗೆ ಹತ್ತಿರವಾಗಿರುತ್ತಾರೆ. ಸೋಷಿಯಲ್ ಮಿಡಿಯಾ ಮೂಲಕ ವೈಯುಕ್ತಿಕ ವಿಚಾರಗಳ ಜೊತೆಗೆ ಪ್ರೋಫೆಷನಲ್ ಲೈಫ್ ಬಗ್ಗೆ ಸಹ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಬೀಚ್ ನಲ್ಲಿ ಜಳಕ ಆಡುತ್ತಾ ಎಂಜಾಯ್ ಮಾಡಿದ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ರೇಣು ದೇಸಾಯಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ತನ್ನ ಮಕ್ಕಳೊಂದಿಗೆ ವಿವಿಧ ಕಡೆ ವೆಕೇಷನ್ ಗೆ ಹಾರುತ್ತಾ ಎಂಜಾಯ್ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಕಡಲ ತೀರದಲ್ಲಿ ಮಕ್ಕಳೊಂದಿಗೆ ಎಂಜಾಯ್ ಮಾಡಿದ್ದಾರೆ. ಆಕೆ ಸಮುದ್ರದಲ್ಲಿ ಎಂಜಾಯ್ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇನ್ನೂ ಈ ವಿಡಿಯೋ ದಲ್ಲಿ ಆಕೆ ವಿಡಿಯೋ ತೆಗೆಯಬೇಡ ಎಂದು ಹೇಳುತ್ತಿರುತ್ತಾರೆ. ಆಕೆಯ ಈ ವಿಡಿಯೋ ಶೂಟ್ ಮಾಡಿದ್ದು ಬೇರೆ ಯಾರೂ ಅಲ್ಲ ಆಕೆಯ ಪುತ್ರಿ ಆದ್ಯ. ರೇಣು ವಿಡಿಯೋ ತೆಗೆಯಬೇಡ ಎಂದು ಹೇಳುತ್ತಿದ್ದರು ಆದ್ಯ ಅದನ್ನು ಕೇಳದೆ ವಿಡಿಯೋ ಮಾಡಿದ್ದಾಳೆ. ಇನ್ನೂ ಈ ವಿಡಿಯೋ ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಆಕೆಯ ಅಭಿಮಾನಿಗಳು ಸಹ ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ನಟಿ ರೇಣು ದೇಸಾಯಿ ಸೋಷಿಯಲ್ ಮಿಡಿಯಾ ವೇದಿಕೆಯಾಗಿ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆಕೆ ಹಂಚಿಕೊಳ್ಳುವ ಪೋಸ್ಟ್ ಗಳಲ್ಲಿ ತುಂಬಾನೆ ಅರ್ಥಗಳು ಅಡಗಿರುತ್ತವೆ. ಈ ಹಾದಿಯಲ್ಲೇ ಆಕೆ ಹಂಚಿಕೊಂಡ ಲೇಟೆಸ್ಟ್ ಪೋಸ್ಟ್ ಒಂದು ಸಖತ್ ವೈರಲ್ ಆಗುತ್ತಿರುತ್ತವೆ. ವಿಚ್ಚೇದನದ ಬಳಿಕ ಪವನ್ ನನಗೆ ಒಂದು ರೂಪಾಯಿ ಸಹ ನೀಡಿಲ್ಲ. ನನ್ನ ಸಂಪಾದನೆ ಹಾಗೂ ನನ್ನ ಉಳಿತಾಯದಿಂದ ನನ್ನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದೇ ಎಂದಿದ್ದರು. ಈ ಹೇಳಿಕೆಗಳಿಂದ ಪವನ್ ಕಲ್ಯಾಣ್ ಅಭಿಮಾನಿಗಳ ದೃಷ್ಟಿಯಲ್ಲಿ ರೇಣು ವಿರುದ್ದ ಆಕ್ರೋಷಗಳು ಹುಟ್ಟಿಕೊಂಡವು. ಈ ಹಿಂದೆ ರೇಣು ದೇಸಾಯಿ ಎರಡನೇ ಮದುವೆಯ ಬಗ್ಗೆ ಸಹ ಪವನ್ ಅಭಿಮಾನಿಗಳು ಆಕ್ರೋಷ ಹೊರಹಾಕಿದ್ದರು.ಇತ್ತಿಚಿಗೆ ಪವನ್ ಅಭಿಮಾನಿ ಒಬ್ಬರು ನಮ್ಮ ಅಣ್ಣ ಪವನ್ ಕಲ್ಯಾಣ್ ಮಗ ಎಂದು ಅಕಿರಾ ರನ್ನು ಉದ್ದೇಶಿಸಿ ಕಾಮೆಂಟ್ ಮಾಡಿದ್ದರು. ಮೇಡಂ ಅಕಿರಾ ನಮ್ಮ ಅಣ್ಣ ಪವನ್ ಕಲ್ಯಾಣ್ ರವರ ಪುತ್ರ ನಮಗೆ ಅವರನ್ನು ತೋರಿಸುತ್ತಾ ಇರಿ ಎಂದು ರಿಕ್ವೆಸ್ಟ್ ಮಾಡಿದ್ದರು.

ಈ ಪೊಸ್ಟ್ ರೇಣು ರವರನ್ನು ಆಕ್ರೋಷಕ್ಕೆ ಗುರಿ ಮಾಡಿತ್ತು. ಅಕಿರಾ ನನ್ನ ಮಗ, ನಿಮ್ಮ ಅಣ್ಣನ ಮಗ ಅಲ್ಲ ಎಂದು ಫೈರ್‍ ಆಗಿದ್ದರು. ಇಲ್ಲಿಂದ ಸೋಷಿಯಲ್ ಮಿಡಿಯಾದಲ್ಲಿ ಪವನ್ ಕಲ್ಯಾಣ್ ಅಭಿಮಾನಿಗಳು ಹಾಗೂ ರೇಣು ದೇಸಾಯಿ ನಡುವೆ ವಾರ್‍ ಶುರುವಾಗಿತ್ತು. ಬಳಿಕ ಕೆಲ ಪವನ್ ಅಭಿಮಾನಿಗಳು ಪವನ್ ಕಲ್ಯಾಣ್ ರವರ ಇಮೇಜ್ ಡ್ಯಾಮೆಜ್ ಮಾಡಲು ಕೆಲ ನಕಲಿ ಅಭಿಮಾನಿಗಳು ಇಂತಹ ತಪ್ಪು ಸಂದೇಶಗಳನ್ನು ಮಾಡುತ್ತಾರೆ. ನೀವು ನಿಮ್ಮ ಇನ್ಸ್ಟಾದಲ್ಲಿ ಕಾಮೆಂಟ್ಸ್ ಬಾಕ್ಸ್ ಆಫ್ ಮಾಡಿ ಎಂದು ಸಲಹೆ ನೀಡಿದ್ದರು. ಈ ಸಲಹೆಯ ವಿರುದ್ದ ರೇಣು ಸಂಚಲನಾತ್ಮಕ ಪೋಸ್ಟ್ ಮಾಡಿದ್ದಾರೆ. ಸಮಾಜದೊಂದಿಗೆ ಇದೇ ಸಮಸ್ಯೆ. ಬೇರೆಯವರಿಗಾಗಿ ನಾನು ಬದಲಾಗಬೇಕೆ. ನೀವು ಹೇಳಿದಂತೆ ನಾನು ಜೀವನ ಸಾಗಿಸಲು ನಾನು ಏನು ತಪ್ಪು ಮಾಡಿದ್ದೇನೆ. ಸಲಹೆ ನೀಡುವುದು ತುಂಬಾ ಸುಲಭ. ನೋವು ಅನುಭವಿಸುವವರಿಗೆ ತಿಳಿಯುತ್ತದೆ ಎಂದು ಕಾಮೆಂಟ್ ಮಾಡಿದ್ದರು.