ಕನ್ನಡದ ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಸ್ಟಾರ್ ನಟಿಯಾಗಿ ಸದ್ಯ ಸೌತ್ ಅಂಡ್ ಬಾಲಿವುಡ್ ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಇತ್ತೀಚಿಗೆ ಪ್ರತಿಯೊಂದು ವಿಚಾರಕ್ಕೂ ಸುದ್ದಿಯಾಗುತ್ತಿರುತ್ತಾರೆ ಜೊತೆಗೆ ಟ್ರೋಲ್ ಗಳಿಗೆ ಸಹ ಗುರಿಯಾಗುತ್ತಿರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ಆಕೆ ತನಗೆ ಲೈಫ್ ನೀಡಿದಂತಹ ಪ್ರೊಡಕ್ಷನ್ ಹೌಸ್ ಹೆಸರು ಹೇಳುವ ಬದಲಿಗೆ ಸನ್ನೆ ಮೂಲಕ ಹೇಳಿದ ಕಾರಣದ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗಿದ್ದರು. ಜೊತೆಗೆ ಆಕೆಯನ್ನು ಬ್ಯಾನ್ ಮಾಡಬೇಕು ಎಂದು ಸಹ ಅಭಿಯಾನ ಶುರುವಾಗಿತ್ತು. ಇದೀಗ ಆಕೆ ರಕ್ಷಿತ್ ಹಾಗೂ ರಿಷಭ್ ಬಗ್ಗೆ ಕಾಮೆಂಟ್ ಮಾಡಿದ್ದು ವೈರಲ್ ಆಗುತ್ತಿದೆ.
ಬಹುಬೇಡಿಕೆಯುಳ್ಳ ರಶ್ಮಿಕಾ ಇದೀಗ ಏನೆ ಮಾಡಿದರೂ ಸಹ ವೈರಲ್ ಆಗುತ್ತಿರುತ್ತಾರೆ ಜೊತೆಗೆ ಟ್ರೋಲ್ ಸಹ ಆಗುತ್ತಿರುತ್ತಾರೆ. ಇನ್ನೂ ಆಕೆಯ ವಿರುದ್ದ ಎಷ್ಟೇ ಟ್ರೋಲ್ ಗಳು ಎದರುದಾದರೂ ಸಹ ಆಕೆ ವೃತ್ತಿ ಜೀವನದಲ್ಲಿ ಮುಂದೆ ಸಾಗುತ್ತಿದ್ದಾರೆ. ಇನ್ನೂ ಕನ್ನಡದ ಸಿನೆಮಾದ ಮೂಲಕ ಖ್ಯಾತಿ ಪಡೆದುಕೊಂಡ ರಶ್ಮಿಕಾ ಬಳಿಕ ಪರಭಾಷೆಗಳ ಸಿನೆಮಾಗಳಲ್ಲಿ ಬ್ಯುಸಿಯಾದರು. ಬಳಿಕ ಕನ್ನಡವನ್ನು ಮರೆತರು, ಸಿನಿರಂಗಕ್ಕೆ ಆಕೆಯನ್ನು ಪರಿಚಯಿಸಿದವರನ್ನೇ ಮರೆತಿದ್ದಾರೆ ಎಂದು ಅನೇಕ ಕನ್ನಡಿಗರು ಆಕೆಯ ವಿರುದ್ದ ಇಂದಿಗೂ ಸಹ ಆಕ್ರೋಷ, ಅಸಮಧಾನ ಹೊರಹಾಕುತ್ತಲೇ ಇರುತ್ತಾರೆ. ಅಷ್ಟೇಅಲ್ಲದೇ ರಶ್ಮಿಕಾ ನಾನು ಕಾಂತಾರಾ ಸಿನೆಮಾ ಇನ್ನೂ ನೋಡಿಲ್ಲ ಎಂದು ಹೇಳಿ ಟ್ರೋಲ್ ಆಗಿದ್ದರು. ಬಳಿಕ ಸಿನಿಮಾ ರಂಗಕ್ಕೆ ತನ್ನನ್ನು ಪರಿಚಯಿಸಿದ ಪ್ರೊಡಕ್ಷನ್ ಹೌಸ್ ಹೆಸರನ್ನು ಹೇಳದೇ ಸನ್ನೆ ಮೂಲಕ ತಿಳಿಸಿದ್ದರು. ಈ ಕಾರಣಗಳಿಂದ ಆಕೆಯನ್ನು ಮತಷ್ಟು ಟ್ರೋಲ್ ಮಾಡಿದರು. ಇನ್ನೂ ರಿಷಭ್ ಸಹ ಆಕೆಯ ಪ್ರತಿಕ್ರಿಯೆಗೆ ಆತನದ್ದೆ ಸ್ಟೈಲ್ ನಲ್ಲಿ ಕೌಂಟರ್ ಕೊಟ್ಟಿದ್ದರು. ಇದೀಗ ರಶ್ಮಿಕಾ ರಿಷಭ್ ಹಾಗೂ ರಕ್ಷಿತ್ ಬಗ್ಗೆ ಮಾತನಾಡಿದ್ದಾರೆ.
ಇನ್ನೂ ಇತ್ತೀಚಿಗೆ ಸಂದರ್ಶನವೊಂದರಲ್ಲಿ ರಶ್ಮಿಕಾ ಮಾತನಾಡಿದ್ದಾರೆ. ಸಿನಿರಂಗಕ್ಕೆ ನಿಮ್ಮನ್ನು ಪರಿಚಯಿಸಿದವರು ಯಾರು ಎಂಬ ಪ್ರಶ್ನೆ ರಶ್ಮಿಕಾಗೆ ಎದುರಾಗಿದೆ. ಅದಕ್ಕೆ ಉತ್ತರಿಸಿದ ರಶ್ಮಿಕಾ ರಕ್ಷಿತ್ ಹಾಗೂ ರಿಷಭ್ ರವರಿಂದಲೇ ನಾನು ಸಿನಿರಂಗಕ್ಕೆ ಎಂಟ್ರಿ ಕೊಟ್ಟೆ. ನನಗೆ ಅವಕಾಶ ಕೊಟ್ಟಿದ್ದು ಅವರೇ. ಇನ್ನೂ ನಾನು ವೃತ್ತಿ ಜೀವನದಲ್ಲಿ ಅತ್ಯಂತ ಉತ್ತಮ ವ್ಯಕ್ತಿಗಳ ಜೊತೆಗೆ ಕೆಲಸ ಮಾಡುತ್ತಿದ್ದೇನೆ ಎಂದು ರಶ್ಮಿಕಾ ಹೇಳಿದ್ದಾರೆ. ಇನ್ನೂ ರಶ್ಮಿಕಾ ಸಡನ್ ಆಗಿ ನೀಡಿದ ಈ ಹೇಳಿಕೆ ಕನ್ನಡಿಗರಿಗೆ ಆಶ್ಚರ್ಯ ಮೂಡಿಸಿದೆ. ರಶ್ಮಿಕಾ ರವರಲ್ಲಿ ಇಂತಹ ಬದಲಾವಣೆ ದಿಡೀರ್ ನೆ ಬರಲು ಕಾರಣ ಏನು, ಕಾಂತಾರ ಸಕ್ಸಸ್ ಆಗಿದ್ದು, ಇದೀಗ ರಿಷಭ್ ಬೆಲೆ ರಶ್ಮಿಕಾಗೆ ತಿಳಿದುಬಂದಿದೆ ಎಂಬೆಲ್ಲಾ ಕಾಮೆಂಟ್ ಗಳು ಹರಿದು ಬರುತ್ತಿದೆ. ಇನ್ನೂ ಇದೇ ಸಂದರ್ಶನದಲ್ಲಿ ಆಕೆ ಪುನೀತ್ ರಾಜ್ ಕುಮಾರ್ ರವರ ಬಗ್ಗೆ ಸಹ ಮಾತನಾಡಿದ್ದಾರೆ. ಪುನೀತ್ ರಾಜ್ ಕುಮಾರ್ ರವರ ಜೊತೆಗೆ ನಾನು ಅಂಜನಿಪುತ್ರ ಸಿನೆಮಾದಲ್ಲಿ ನಟಿಸಿದ್ದೆ. ಅದು ನನ್ನ ಪುಣ್ಯ ಎಂದು ಹೇಳಿದ್ದಾರೆ.
ಇನ್ನೂ ನಟಿ ರಶ್ಮಿಕಾ ಸದ್ಯ ಬಾಲಿವುಡ್ ಹಾಗೂ ಸೌತ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಆಕೆ ಮಿಷನ್ ಮಜ್ನು ಎಂಬ ಹಿಂದಿ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಕಾಲಿವುಡ್ ಸ್ಟಾರ್ ನಟ ವಿಜಯ್ ಜೊತೆಗೆ ವಾರಿಸು ಸಿನೆಮಾದಲ್ಲೂ ಸಹ ರಶ್ಮಿಕಾ ನಟಿಸಿದ್ದು, ಈ ಸಿನೆಮಾ ಸಂಕ್ರಾಂತಿ ಹಬ್ಬದ ಅಂಗವಾಗಿ ಬಿಡುಗಡೆಯಾಗಿದ್ದು, ಒಳ್ಳೆಯ ಕಲೆಕ್ಷನ್ ಸಹ ಮಾಡಿದೆ. ಇನ್ನೂ ಪುಷ್ಪಾ-2 ಸಿನೆಮಾದ ಶೂಟಿಂಗ್ ನಲ್ಲೂ ಸಹ ಆಕೆ ಬ್ಯುಸಿಯಾಗಲಿದ್ದಾರೆ.
Good Bye, Kannada actress, Kantara, Mission Majnu, National Crush Rashmika, Pushpa 2, rakshith shetty, Rashmika Ban, Rashmika Mandanna, Rashmika rumurs, rishab shetty, Viral Comments, Vishal
ಕನ್ನಡದ ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಸ್ಟಾರ್ ನಟಿಯಾಗಿ ಸದ್ಯ ಸೌತ್ ಅಂಡ್ ಬಾಲಿವುಡ್ ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಇತ್ತೀಚಿಗೆ ಪ್ರತಿಯೊಂದು ವಿಚಾರಕ್ಕೂ ಸುದ್ದಿಯಾಗುತ್ತಿರುತ್ತಾರೆ ಜೊತೆಗೆ ಟ್ರೋಲ್ ಗಳಿಗೆ ಸಹ ಗುರಿಯಾಗುತ್ತಿರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ಆಕೆ ತನಗೆ ಲೈಫ್ ನೀಡಿದಂತಹ ಪ್ರೊಡಕ್ಷನ್ ಹೌಸ್ ಹೆಸರು ಹೇಳುವ ಬದಲಿಗೆ ಸನ್ನೆ ಮೂಲಕ ಹೇಳಿದ ಕಾರಣದ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗಿದ್ದರು. ಜೊತೆಗೆ ಆಕೆಯನ್ನು ಬ್ಯಾನ್ ಮಾಡಬೇಕು ಎಂದು ಸಹ ಅಭಿಯಾನ ಶುರುವಾಗಿತ್ತು. ಇದೀಗ ಆಕೆ ರಕ್ಷಿತ್ ಹಾಗೂ ರಿಷಭ್ ಬಗ್ಗೆ ಕಾಮೆಂಟ್ ಮಾಡಿದ್ದು ವೈರಲ್ ಆಗುತ್ತಿದೆ.
ಬಹುಬೇಡಿಕೆಯುಳ್ಳ ರಶ್ಮಿಕಾ ಇದೀಗ ಏನೆ ಮಾಡಿದರೂ ಸಹ ವೈರಲ್ ಆಗುತ್ತಿರುತ್ತಾರೆ ಜೊತೆಗೆ ಟ್ರೋಲ್ ಸಹ ಆಗುತ್ತಿರುತ್ತಾರೆ. ಇನ್ನೂ ಆಕೆಯ ವಿರುದ್ದ ಎಷ್ಟೇ ಟ್ರೋಲ್ ಗಳು ಎದರುದಾದರೂ ಸಹ ಆಕೆ ವೃತ್ತಿ ಜೀವನದಲ್ಲಿ ಮುಂದೆ ಸಾಗುತ್ತಿದ್ದಾರೆ. ಇನ್ನೂ ಕನ್ನಡದ ಸಿನೆಮಾದ ಮೂಲಕ ಖ್ಯಾತಿ ಪಡೆದುಕೊಂಡ ರಶ್ಮಿಕಾ ಬಳಿಕ ಪರಭಾಷೆಗಳ ಸಿನೆಮಾಗಳಲ್ಲಿ ಬ್ಯುಸಿಯಾದರು. ಬಳಿಕ ಕನ್ನಡವನ್ನು ಮರೆತರು, ಸಿನಿರಂಗಕ್ಕೆ ಆಕೆಯನ್ನು ಪರಿಚಯಿಸಿದವರನ್ನೇ ಮರೆತಿದ್ದಾರೆ ಎಂದು ಅನೇಕ ಕನ್ನಡಿಗರು ಆಕೆಯ ವಿರುದ್ದ ಇಂದಿಗೂ ಸಹ ಆಕ್ರೋಷ, ಅಸಮಧಾನ ಹೊರಹಾಕುತ್ತಲೇ ಇರುತ್ತಾರೆ. ಅಷ್ಟೇಅಲ್ಲದೇ ರಶ್ಮಿಕಾ ನಾನು ಕಾಂತಾರಾ ಸಿನೆಮಾ ಇನ್ನೂ ನೋಡಿಲ್ಲ ಎಂದು ಹೇಳಿ ಟ್ರೋಲ್ ಆಗಿದ್ದರು. ಬಳಿಕ ಸಿನಿಮಾ ರಂಗಕ್ಕೆ ತನ್ನನ್ನು ಪರಿಚಯಿಸಿದ ಪ್ರೊಡಕ್ಷನ್ ಹೌಸ್ ಹೆಸರನ್ನು ಹೇಳದೇ ಸನ್ನೆ ಮೂಲಕ ತಿಳಿಸಿದ್ದರು. ಈ ಕಾರಣಗಳಿಂದ ಆಕೆಯನ್ನು ಮತಷ್ಟು ಟ್ರೋಲ್ ಮಾಡಿದರು. ಇನ್ನೂ ರಿಷಭ್ ಸಹ ಆಕೆಯ ಪ್ರತಿಕ್ರಿಯೆಗೆ ಆತನದ್ದೆ ಸ್ಟೈಲ್ ನಲ್ಲಿ ಕೌಂಟರ್ ಕೊಟ್ಟಿದ್ದರು. ಇದೀಗ ರಶ್ಮಿಕಾ ರಿಷಭ್ ಹಾಗೂ ರಕ್ಷಿತ್ ಬಗ್ಗೆ ಮಾತನಾಡಿದ್ದಾರೆ.
ಇನ್ನೂ ಇತ್ತೀಚಿಗೆ ಸಂದರ್ಶನವೊಂದರಲ್ಲಿ ರಶ್ಮಿಕಾ ಮಾತನಾಡಿದ್ದಾರೆ. ಸಿನಿರಂಗಕ್ಕೆ ನಿಮ್ಮನ್ನು ಪರಿಚಯಿಸಿದವರು ಯಾರು ಎಂಬ ಪ್ರಶ್ನೆ ರಶ್ಮಿಕಾಗೆ ಎದುರಾಗಿದೆ. ಅದಕ್ಕೆ ಉತ್ತರಿಸಿದ ರಶ್ಮಿಕಾ ರಕ್ಷಿತ್ ಹಾಗೂ ರಿಷಭ್ ರವರಿಂದಲೇ ನಾನು ಸಿನಿರಂಗಕ್ಕೆ ಎಂಟ್ರಿ ಕೊಟ್ಟೆ. ನನಗೆ ಅವಕಾಶ ಕೊಟ್ಟಿದ್ದು ಅವರೇ. ಇನ್ನೂ ನಾನು ವೃತ್ತಿ ಜೀವನದಲ್ಲಿ ಅತ್ಯಂತ ಉತ್ತಮ ವ್ಯಕ್ತಿಗಳ ಜೊತೆಗೆ ಕೆಲಸ ಮಾಡುತ್ತಿದ್ದೇನೆ ಎಂದು ರಶ್ಮಿಕಾ ಹೇಳಿದ್ದಾರೆ. ಇನ್ನೂ ರಶ್ಮಿಕಾ ಸಡನ್ ಆಗಿ ನೀಡಿದ ಈ ಹೇಳಿಕೆ ಕನ್ನಡಿಗರಿಗೆ ಆಶ್ಚರ್ಯ ಮೂಡಿಸಿದೆ. ರಶ್ಮಿಕಾ ರವರಲ್ಲಿ ಇಂತಹ ಬದಲಾವಣೆ ದಿಡೀರ್ ನೆ ಬರಲು ಕಾರಣ ಏನು, ಕಾಂತಾರ ಸಕ್ಸಸ್ ಆಗಿದ್ದು, ಇದೀಗ ರಿಷಭ್ ಬೆಲೆ ರಶ್ಮಿಕಾಗೆ ತಿಳಿದುಬಂದಿದೆ ಎಂಬೆಲ್ಲಾ ಕಾಮೆಂಟ್ ಗಳು ಹರಿದು ಬರುತ್ತಿದೆ. ಇನ್ನೂ ಇದೇ ಸಂದರ್ಶನದಲ್ಲಿ ಆಕೆ ಪುನೀತ್ ರಾಜ್ ಕುಮಾರ್ ರವರ ಬಗ್ಗೆ ಸಹ ಮಾತನಾಡಿದ್ದಾರೆ. ಪುನೀತ್ ರಾಜ್ ಕುಮಾರ್ ರವರ ಜೊತೆಗೆ ನಾನು ಅಂಜನಿಪುತ್ರ ಸಿನೆಮಾದಲ್ಲಿ ನಟಿಸಿದ್ದೆ. ಅದು ನನ್ನ ಪುಣ್ಯ ಎಂದು ಹೇಳಿದ್ದಾರೆ.
ಇನ್ನೂ ನಟಿ ರಶ್ಮಿಕಾ ಸದ್ಯ ಬಾಲಿವುಡ್ ಹಾಗೂ ಸೌತ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಆಕೆ ಮಿಷನ್ ಮಜ್ನು ಎಂಬ ಹಿಂದಿ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಕಾಲಿವುಡ್ ಸ್ಟಾರ್ ನಟ ವಿಜಯ್ ಜೊತೆಗೆ ವಾರಿಸು ಸಿನೆಮಾದಲ್ಲೂ ಸಹ ರಶ್ಮಿಕಾ ನಟಿಸಿದ್ದು, ಈ ಸಿನೆಮಾ ಸಂಕ್ರಾಂತಿ ಹಬ್ಬದ ಅಂಗವಾಗಿ ಬಿಡುಗಡೆಯಾಗಿದ್ದು, ಒಳ್ಳೆಯ ಕಲೆಕ್ಷನ್ ಸಹ ಮಾಡಿದೆ. ಇನ್ನೂ ಪುಷ್ಪಾ-2 ಸಿನೆಮಾದ ಶೂಟಿಂಗ್ ನಲ್ಲೂ ಸಹ ಆಕೆ ಬ್ಯುಸಿಯಾಗಲಿದ್ದಾರೆ.
Recommended for you