Film News

ಮೇಜರಿ ಸರ್ಜರಿ ಮಾಡಿಸಿಕೊಂಡ ಪೂಜಾ, ಸರ್ಜರಿಯ ಕಾರಣದಿಂದ ಪೂಜಾ ಹೆಗ್ಡೆ ಸಿನೆಮಾಗಳಿಂದ ದೂರವುಳಿದರೇ..….!

ಸೌತ್ ಸಿನಿರಂಗದಲ್ಲಿ ಬಹುಬೇಡಿಕೆಯುಳ್ಳ ನಟಿಯರ ಸಾಲಿನಲ್ಲಿ ಬುಟ್ಟಬೊಮ್ಮ ಪೂಜಾ ಹೆಗ್ಡೆ ಒಬ್ಬರಾಗಿದ್ದಾರೆ. ಕೊನೆಯದಾಗಿ ಆಕೆ ಕಿಸಿ ಕಾ ಭಾಯ್ ಕಿಸಿ ಕಾ ಜಾನ್ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಬಿಡುಗಡೆಯಾಗಿ ನಾಲ್ಕು ತಿಂಗಳುಗಳು ಕಳೆದರೂ ಸಹ ಆಕೆಯ ಮತ್ತೊಂದು ಸಿನೆಮಾ ಬಗ್ಗೆ ಪ್ರಕಟಣೆ ಇಲ್ಲ. ಕೆಲವೊಂದು ಸಿನೆಮಾಗಳಲ್ಲಿ ನಟಿಸುವ ಬಗ್ಗೆ ಘೋಷಣೆಯಾದರೂ ಅವುಗಳಿಂದ ಸಹ ಆಕೆ ಹೊರಬಂದರು. ಇದೀಗ ಆಕೆ ಸಿನೆಮಾಗಳನ್ನು ಮಾಡದೇ ಇರಲು ಸರ್ಜರಿ ಕಾರಣವಂತೆ.

ಕಳೆದ ವರ್ಷದಿಂದ ಪೂಜಾ ಹೆಗ್ಡೆ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಕಂಡ ಹಿನ್ನೆಲೆಯಲ್ಲಿ ಆಕೆಗೆ ಮೇಕರ್ಸ್ ಆಕೆಗೆ ಆಫರ್‍ ಗಳು ನೀಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಮಹೇಶ್ ಬಾಬು ರವರ ಗುಂಟೂರು ಖಾರಂ ಸಿನೆಮಾದಲ್ಲಿ ಪೂಜಾ ಹೆಗ್ಡೆ ನಟಿಸಬೇಕಿತ್ತು. ಆದರೆ ಕೆಲವೊಂದು ಕಾರಣಗಳಿಂದ ಆಕೆ ಸಿನೆಮಾದಿಂದ ಹೊರಬಂದರು. ಪವನ್ ಕಲ್ಯಾಣ್ ರವರ ಉಸ್ತಾದ್ ಭಗತ್ ಸಿಂಗ್ ಸಿನೆಮಾದಲ್ಲೂ ಸಹ ಪೂಜಾ ಹೆಗ್ಡೆ ನಟಿಸಬೇಕಿತ್ತು. ಈ ಸಿನೆಮಾದಿಂದಲೂ ಆಕೆ ಹೊರಬಂದರು. ಇದೀಗ ಆಕೆ ಈ ಸಿನೆಮಾಗಳಿಂದ ಹೊರಬರಲು ಆಕೆಯ ಅನಾರೋಗ್ಯ ಕಾರಣ ಎಂಬ ಸುದ್ದಿ ಕೇಳಿಬರುತ್ತಿದೆ. ಸುಮಾರು ದಿನಗಳ ಹಿಂದೆ ಪೂಜಾ ಹೆಗ್ಡೆ ಕಾಲಿಗೆ ಗಾಯವಾಗಿತ್ತು. ಈ ಕಾರಣದಿಂದಲೇ ಆಕೆ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಧೆಶ್ಯಾಮ್ ಸಿನೆಮಾದ ಶೂಟಿಂಗ್ ಸಮಯದಲ್ಲೇ ಈ ಸಮಸ್ಯೆಯಾಗಿತ್ತಂತೆ. ಅದಕ್ಕೆ ಆಕೆ ತಾತ್ಕಲಿಕವಾಗಿ ಚಿಕಿತ್ಸೆ ಪಡೆದುಕೊಂಡು ಸುಮ್ಮನಾಗಿದ್ದರು. ಇದೀಗ ಮತ್ತೆ ಕಾಲಿನ ನೋವು ಹೆಚ್ಚಾಗಿದೆಯಂತೆ. ಈ ಕಾರಣದಿಂದ ವೈದ್ಯರು ಸರ್ಜರಿ ಮಾಡಿಸಿಕೊಳ್ಳಬೇಕೆಂದು ಸೂಚನೆ ನೀಡಿದ್ದು, ವೈದ್ಯರ ಸಲಹೆ ಮೇರೆಗೆ ಆಕೆ ಸರ್ಜರಿ ಮಾಡಿಸಿಕೊಂಡರಂತೆ. ಈ ಕಾರಣದಿಂದಲೇ ಆಕೆ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡರು ಎಂದು ಹೇಳಲಾಗುತ್ತಿದೆ. ಜೊತೆಗೆ ಒಪ್ಪಿಕೊಂಡ ಸಿನೆಮಾಗಳಿಂದಲೂ ಸಹ ಆಕೆ ಹೊರಬಂದರು. ಹೊಸ ಸಿನೆಮಾಗಳನ್ನು ಸಹ ಒಪ್ಪಿಕೊಳ್ಳುತ್ತಿಲ್ಲ ಎಂದು ಹೇಳಲಾಗುತ್ತಿದೆ. ಈ ಸುದ್ದಿ ತೆಲುಗು ಸಿನಿರಂಗದಲ್ಲಿ ಚಕ್ಕರ್‍ ಹೊಡೆಯುತ್ತಿದೆ.

ಇನ್ನೂ ಪೂಜಾ ಹೆಗ್ಡೆಗೆ 2022 ವರ್ಷದಲ್ಲಿ ಆಕೆಗೆ ಭಾರಿ ಶಾಕ್ ಸಿಕ್ಕಿದೆ. ಆಕೆ ಅಭಿನಯದ ಎಲ್ಲಾ ಸಿನೆಮಾಗಳು ಡಿಜಾಸ್ಟರ್‍ ಆಗಿತ್ತು. ಭಾರಿ ನಿರೀಕ್ಷೆಯಿಂದ ತೆರೆಕಂಡ ರಾಧೆಶ್ಯಾಮ್ ಸಿನೆಮಾ ಭಾರಿ ನಿರಾಸೆ ಮೂಡಿಸಿತ್ತು. ಬಳಿಕ ಆಚಾರ್ಯ, ಬೀಸ್ಟ್ ಸಿನೆಮಾಗಳೂ ಸಹ ಡಿಜಾಸ್ಟರ್‍ ಕಂಡವು. ಬಳಿಕ ಸರ್ಕಸ್ ಹಾಗೂ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನೆಮಾಗಳೂ ಸಹ ಫ್ಲಾಪ್ ಆಯ್ತು.

Most Popular

To Top