Film News

ಮತ್ತೊಮ್ಮೆ ಸುದ್ದಿಯಾದ ನರೇಶ್ ಪವಿತ್ರ, ಸಾರ್ವಜನಿಕವಾಗಿಯೇ ನರೇಶ್ ಕೆನ್ನೆಗೆ ಮುತ್ತಿಟ್ಟ ಪವಿತ್ರಾ ಲೋಕೇಶ್…….!

ಸುಮಾರು ದಿನಗಳಿಂದ ಟಾಲಿವುಡ್ ಸಿನಿರಂಗದ ಸೀನಿಯರ್‍ ನಟ ನರೇಶ್ ಹಾಗೂ ಕ್ಯಾರೆಕ್ಟರ್‍ ಆರ್ಟಿಸ್ಟ್ ಪವಿತ್ರಾ ಲೋಕೇಶ್ ಸಹಜೀವನ ನಡೆಸುತ್ತಿದ್ದಾರೆ ಎಂಬ ಸುದ್ದಿ ಪ್ರತಿನಿತ್ಯ ಕೇಳಿಬರುತ್ತಲೇ ಇದೆ. ಅವರ ಬಗ್ಗೆ ಅನೇಕ ರೂಮರ್‍ ಗಳು, ಕಥನಗಳು ಕೇಳಿಬರುತ್ತಲೇ ಇದೆ. ವಿವಾದಾತ್ಮಕ ಹೇಳಿಕೆಗಳು, ವಿವಾದಾತ್ಮಕ ಕೆಲಸಗಳ ಮೂಲಕ ಸುದ್ದಿಯಾಗುತ್ತಿರುವ ಈ ಜೋಡಿ ಮತ್ತೊಮ್ಮೆ ಸುದ್ದಿಯಾಗುತ್ತಿದೆ. ಸಾರ್ವಜನಿಕವಾಗಿ ನರೇಶ್ ಕೆನ್ನೆಗೆ ಪವಿತ್ರಾ ಮುತ್ತಿಟ್ಟಿದ್ದು ಹಾಟ್ ಟಾಪಿಕ್ ಆಗಿದೆ.

ಸುಮಾರು ವರ್ಷಗಳಿಂದ ನರೇಶ್ ಹಾಗೂ ಪವಿತ್ರಾ ಸಹಜೀವನ ನಡೆಸುತ್ತಿದ್ದು, ಸದಾ ಸುದ್ದಿಯಲ್ಲೇ ಇರುತ್ತಾರೆ. ಇಷ್ಟು ದಿನಗಳ ಕಾಲ ಅವರಿಬ್ಬರೂ ತಮ್ಮ ರಿಲೇಷನ್ ಶಿಪ್ ಬಗ್ಗೆ ಓಪೆನ್ ಆಗಿರಲಿಲ್ಲ. ಮಳ್ಳಿ ಪೆಳ್ಳಿ ಸಿನೆಮಾದ ಮೂಲಕ ತಮ್ಮ ರಿಲೇಷನ್ ಶಿಪ್ ಅನ್ನು ಬಹಿರಂಗ ಪಡಿಸಿದ್ದಾರೆ. ಇದೀಗ ನರೇಶ್ ಮತ್ತೊಂದು ಕ್ರೇಜ್ ಸುದ್ದಿಯೊಂದನ್ನು ನೀಡಿದ್ದಾರೆ. ತಾವು ಮಕ್ಕಳನ್ನು ಹೆರುವ ಬಗ್ಗೆ ಕೆಲವೊಂದು ಕಾಮೆಂಟ್ಸ್ ಮಾಡಿದ್ದಾರೆ. ಇನ್ನೂ ಈ ಮಳ್ಳಿ ಪೆಳ್ಳಿ ಸಿನೆಮಾದಲ್ಲಿ ತಾವು ಏಕೆ ಏತಕ್ಕಾಗಿ ಹತ್ತಿರವಾದರು. ಏಕೆ ಮಕ್ಕಳನ್ನು ಹೆತ್ತರು ಎಂಬುದನ್ನು ತೋರಿಸಿದ್ದಾರೆ. ಮಳ್ಳಿ ಪೆಳ್ಳಿ ಸಿನೆಮಾ ಬಿಡುಗಡೆಯಾದ ಬಳಿಕ ಈ ಜೋಡಿ ಮತಷ್ಟು ಸುದ್ದಿಯಾದರು ಎಂದು ಹೇಳಬಹುದಾಗಿದೆ. ಇದೀಗ ಪವಿತ್ರಾ ಕಾರ್ಯಕ್ರಮವೊಂದರಲ್ಲಿ ನರೇಶ್ ಗೆ ಮುತ್ತಿಟ್ಟಿದ್ದು ಅದು ಹಾಟ್ ಟಾಪಿಕ್ ಆಗಿದೆ.

ಸಾರ್ವಜನಿಕವಾಗಿ ನರೇಶ್ ಕೆನ್ನೆಗೆ ಪವಿತ್ರಾ ಮುತ್ತಿಟ್ಟಿದ್ದು, ಹಾಟ್  ಟಾಪಿಕ್ ಆಗಿದೆ. ಸೋಷಿಯಲ್ ಮಿಡಿಯಾಗೆ ಒಳ್ಳೆಯ ಸ್ಟಫ್ ಕೊಟ್ಟಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಈ ಜೋಡಿ ತಮ್ಮ ಪ್ರೀತಿಯನ್ನು ಈ ರೀತಿಯಾಗಿ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಅನೇಕ ಕಲಾವಿದರು, ಪ್ರೇಕ್ಷಕರು ಸಹ ಇದ್ದು, ಮುತ್ತಿಟ್ಟುಕೊಂಡಿದ್ದಾರೆ. ಅದರ ಜೊತೆಗೆ ಹಾಡೊಂದಕ್ಕೆ ಡ್ಯಾನ್ಸ್ ಸಹ ಮಾಡಿದ್ದಾರೆ. ಗಣೇಶ ಚರ್ತುರ್ತಿ ಅಂಗವಾಗಿ ಈಟಿವಿ ಚಾನಲ್ ಸ್ವಾಮಿ ರಾರಾ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದು, ಅದಕ್ಕೆ ಅತಿಥಿಗಳಾಗಿ ಆಗಮಿಸಿದ ಈ ಜೋಡಿ ಸದ್ದು ಮಾಡಿದ್ದಾರೆ. ಈ ಹಿಂದೆ ಸಹ ನರೇಶ್ ಹಾಗೂ ಪವಿತ್ರಾ ಲಿಪ್ ಲಾಕ್ ಮಾಡಿಕೊಂಡು ಸುದ್ದಿಯಾಗಿದ್ದರು. ಇದೀಗ ಮತ್ತೊಮ್ಮೆ ಅವರು ಸಾರ್ವಜನಿಕವಾಗಿ ಮುತ್ತಿಟ್ಟುಕೊಂಡಿದ್ದು ಹಾಟ್ ಟಾಪಿಕ ಆಗಿದೆ.

Most Popular

To Top