News

ಸನಾತನ ಧರ್ಮದ ಬಗ್ಗೆ ಮಾತನಾಡಿದವರೇಲ್ಲಾ ಕಳೆದು ಹೋಗಿದ್ದಾರೆ, ಸನಾತನ ಧರ್ಮದ ಅವಹೇಳನ ಹೇಳಿಕೆಗಳಿಗೆ ಗರಂ ಆದ ಯೋಗಿ ಆದಿತ್ಯನಾಥ್…..!

ಕಳೆದೆರಡು ದಿನಗಳಿಂದ ದೇಶದಲ್ಲಿ ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆಗಳು ಹೆಚ್ಚಾಗುತ್ತಿದ್ದು, ಕೆಲ ಮುಖಂಡರು ಸನಾತನ ಧರ್ಮದ ಬಗ್ಗೆ ನಾಲಿಗೆ ಹರಿಬಿಡುತ್ತಿದ್ದಾರೆ. ಮೊದಲಿಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ಮಾತನಾಡುವ ಮೂಲಕ ವಿವಾದ ಸೃಷ್ಟಿದರು. ಅವರ ಬಳಿಕ ಕರ್ನಾಟಕದ ಸಚಿವರಾದ ಪರಮೇಶ್ವರ್‍, ಪ್ರಿಯಾಂಕ್ ಖರ್ಗೆ, ತಮಿಳುನಾಡಿನ ಡಿಎಂಕೆ ನಾಯಕ ಎ.ರಾಜು ಸಹ ವಿವಾದಿತ ಹೇಳಿಕೆ ಗಳನ್ನು ನೀಡಿದ್ದು, ಭಾರಿ ಚರ್ಚೆ ಹಾಗೂ ಆಕ್ರೋಷಕ್ಕೆ ಕಾರಣವಾಗಿತ್ತು. ಇದೀಗ ಇದೇ ವಿಚಾರಕ್ಕೆ ಉತ್ತರ ಪ್ರದೇಶದ ಸಿಎಂ ಯೋಗಿ ಫೈರ್‍ ಆಗಿದ್ದಾರೆ.

ಸನಾತನ ಧರ್ಮದ ವಿರುದ್ದ ಅವಹೇಳನಕಾರಿ ಹೇಳಿಕೆಗಳನ್ನು ಖಂಡಿಸಿದ ಸಿಎಂ ಯೋಗಿ ಆದಿತ್ಯನಾಥ್, ದೇಶ ಇದೀಗ ಅಭಿವೃದ್ದಿಯಾಗುತ್ತಾ ಸಾಗುತ್ತಿದೆ. ಅಭಿವೃದ್ದಿಯತ್ತ ಕೊಂಡೊಯ್ಯುತ್ತಿರುವ ಸರ್ಕಾರವನ್ನು ಟೀಕೆ ಮಾಡಲು ಅವರಿಗೆ ಬೇರೆ ಯಾವುದೇ ವಿಚಾರಗಳು ಸಿಗುತ್ತಿಲ್ಲ. ಆ ಕಾರಣದಿಂದ ಸನಾತನ ಧರ್ಮದ ಬಗ್ಗೆ ಟೀಕೆಗಳನ್ನು ಮಾಡುತ್ತಿದ್ದಾರೆ. ಸರ್ಕಾರದ ಸಾಧನೆಗಳನ್ನು ದುರ್ಬಲಗೊಳಿಸಲು ಅವರು ಸನಾತನ ಧರ್ಮದ ವಿಚಾರವನ್ನು ಮಾತನಾಡುತ್ತಿದ್ದಾರೆ. ಬಾಬರ್‍, ಔರಂಗಜೇಬ್ ರವರಂತಹ ಕ್ರೌರ್ಯಗಳಿಂದಲೂ ಸನಾತನದ ಧರ್ಮವನ್ನು ಏನು ಮಾಡೋಕೆ ಆಗಿಲ್ಲ ಎನ್ನುವುದನ್ನು ಅವರೆಲ್ಲಾ ಮರೆತಂತಿದೆ. ಅಂತಹವರಿಗೆ ಸಾಧ್ಯವಾಗದೇ ಇರುವುದು ಈ ಕ್ಷುಲ್ಲಕ ವ್ಯಕ್ತಿಗಳಿಗೆ ಸನಾತನ ಧರ್ಮವನ್ನು ಅಳಿಸಲು ಆಗುತ್ತದೆಯೇ ಎಂದು ಟಾಂಗ್ ಕೊಟ್ಟಿದ್ದಾರೆ.

ಇನ್ನೂ ಕೆಲವರು ತಮ್ಮ ಮೂರ್ಖತನದಿಂದ ಸೂರ್ಯನ ಮೇಲೆ ಉಗುಳಲು ಯತ್ನಿಸುತ್ತಾರೆ. ಆದರೆ ಅದೇ ಉಗುಳು ತಮ್ಮ ಮೇಲೆ ಬೀಳುತ್ತದೆ ಎಂಬುದನ್ನು ಮರೆತಿರುತ್ತಾರೆ. ರಾವಣ, ಹಿರಣ್ಯ ಕಶ್ಯಪ, ಕಂಸ ನಂತಹವರು ದೈವ ಶಕ್ತಿಗೆ ಸವಾಲಾಕಿದ್ದರು. ಆದರೆ ಕೊನೆಗೆ ಎಲ್ಲವನ್ನೂ ಕಳೆದುಕೊಂಡರು. ಆದರೆ ಸನಾತನ ಧರ್ಮ ಮಾತ್ರ ಉಳಿದುಕೊಂಡಿದೆ. ಸನಾತನ ಧರ್ಮ ಎಂಬುದು ಸತ್ಯ ಅದನ್ನು ಎಂದಿಗೂ ಅಳಿಸಲು ಸಾಧ್ಯವೇ ಇಲ್ಲ. ದೇವರ ಕೃಪೆ, ಸನಾತನ ಧರ್ಮ ಎದ್ದು ನಿಂತಾಗ ಅಯೋದ್ಯೆ ಹಾಗೂ ಕಾಶಿಯಲ್ಲಿ ರಾಮಮಂದಿರ ಏಳುತ್ತದೆ ಎಂದು ಯೋಗಿ ಹೇಳಿದ್ದಾರೆ.

Most Popular

To Top