ಋತುಮತಿ ಹಾಗೂ ದೇವರ ಬಗ್ಗೆ ಹೇಳಿಕೆ ಕೊಟ್ಟ ನಟಿ ಐಶ್ವರ್ಯ ರಾಜೇಶ್, ಐಶ್ವರ್ಯ ಹೇಳಿಕೆಗೆ ಅನೇಕರ ಆಕ್ರೋಷ…!

ದೇಶದಲ್ಲಿ ಅನೇಕ ದೇವಾಲಯಗಳಿಗೆ ಮಹಿಳೆಯರ ನಿಷೇಧದ ಬಗ್ಗೆ ಕಾನೂನು ಹೋರಾಟಗಳು ನಡೆಯುತ್ತಲೇ ಇದೆ. ಈ ಬಗ್ಗೆ ಅನೇಕರು ತಮ್ಮದೇ ಆದ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡು ಅನೇಕ ವಿವಾದಗಳಿಗೆ ಕಾರಣರಾಗಿದ್ದಾರೆ. ಇದೀಗ ಕಾಲಿವುಡ್ ನಟಿ ಐಶ್ವರ್ಯ…

ದೇಶದಲ್ಲಿ ಅನೇಕ ದೇವಾಲಯಗಳಿಗೆ ಮಹಿಳೆಯರ ನಿಷೇಧದ ಬಗ್ಗೆ ಕಾನೂನು ಹೋರಾಟಗಳು ನಡೆಯುತ್ತಲೇ ಇದೆ. ಈ ಬಗ್ಗೆ ಅನೇಕರು ತಮ್ಮದೇ ಆದ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡು ಅನೇಕ ವಿವಾದಗಳಿಗೆ ಕಾರಣರಾಗಿದ್ದಾರೆ. ಇದೀಗ ಕಾಲಿವುಡ್ ನಟಿ ಐಶ್ವರ್ಯ ರಾಜೇಶ್ ಸಹ ಇದೇ ರೀತಿಯ ಹೇಳಿಕೆ ಕೊಟ್ಟು ಸಖತ್ ಸುದ್ದಿಯಾಗಿದ್ದಾರೆ. ಋತುಮತಿ ಹಾಗೂ ದೇವರ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ಕೊಟ್ಟು ಅನೇಕರ ಆಕ್ರೋಷಕ್ಕೆ ಕಾರಣರಾಗಿದ್ದಾರೆ. ಆಕೆಯ ಹೇಳಿಕೆಗಳ ವಿರುದ್ದ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.

ಇನ್ನೂ ಅನೇಕ ಕಡೆ ಋತುಮತಿಯಾಗುವ ಬಗ್ಗೆ ಕೆಟ್ಟದಾಗಿ ನೋಡುವ ಪದ್ದತಿಗಳು ಇದೆ. ಋತುಮತಿಯಾಗುವುದು ಪ್ರಕೃತಿ ಸಹಜ. ಈ ವೇಳೆ ಮಹಿಳೆಯರಿಗೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಎದುರಾಗುವ ಕಾರಣದಿಂದ ಈ ಹಿಂದೆ ಒಂದು ಒಳ್ಳೆಯ ಆಲೋಚನೆಯಿಂದ ಸಂಪ್ರದಾಯ ಮಾಡಿದ್ದರು. ಆದರೆ ಕಾಲಕ್ರಮೇಣ ಅದು ಹೆಣ್ಣು ಋತುಮತಿಯಾಗುವುದು ಕೆಟ್ಟ ಪದ್ದತಿ ಎಂಬಂತೆ ಬಿಂಬಿಸಲು ಶುರುವಾಯಿತು. ಭಾರತೀಯ ಸಂಪ್ರದಾಯದಂತೆ ಋತುಮತಿಯಾದವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ದೇವಾಲಯದೊಳಗೆ ಪ್ರವೇಶಿಸುವುದಿಲ್ಲ. ಹಿರಿಯರು ಮಾಡಿಕೊಂಡು ಬಂದ ಸಂಪ್ರದಾಯವನ್ನು ಬಹುತೇಕ ಹಿಂದೂಗಳು ಇದನ್ನು ಅನುಸರಿಸುತ್ತಿದ್ದಾರೆ. ಆದರೆ ಈ ಬಗ್ಗೆ ಅನೇಕರ ವಿರೋಧವೂ ಸಹ ಇದೆ ಇದೀಗ ಇದೇ ವಿಚಾರವಾಗಿ ನಟಿ ಐಶ್ವರ್ಯ ರಾಜೇಶ್ ಮಾತನಾಡಿದ್ದು, ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾರೆ.

ನಟಿ ಐಶ್ವರ್ಯ ಗ್ರೇಟ್ ಇಂಡಿಯನ್ ಕಿಚನ್ ಎಂಬ ಸಿನೆಮಾದ ಪತ್ರಿಕಾಗೋಷ್ಟಿಯಲ್ಲಿ ಋತುಮತಿ ಹಾಗೂ ದೇವರ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ಯಾರು ದೇವಾಲಯಕ್ಕೆ ಪ್ರವೇಶಿಸಬಹುದು, ಯಾರೂ ಪ್ರವೇಶಿಸಬಾರದು ಎಂಬ ಬಗ್ಗೆ ದೇವರು ತಾರತಮ್ಯ ಮಾಡುವುದಿಲ್ಲ. ಋತುಮತಿಯಾದ ಮಹಿಳೆಯರು ದೇವಾಲಯಕ್ಕೆ ಪ್ರವೇಶ ಮಾಡಿದರೇ ಆ ದೇವರು ಅಸಮಧಾನಗೊಳ್ಳುವುದಿಲ್ಲ. ಈ ಹಿಂದೆ ಶಬರಿಮಲೆಗೂ ಸಹ ಮಹಿಳೆಯರ ಪ್ರವೇಶದ ಬಗ್ಗೆ ವಿವಾದಗಳು ಎದ್ದಿತ್ತು. ಈ ಕುರಿತು ಇಂದಿಗೂ ಸಹ ಕಾನೂನು ರೀತ್ಯ ಹೋರಾಟ ನಡೆಯುತ್ತಲೇ ಇದೆ. ಶಬರಿಮಲೆಗೆ ಋತುಮತಿಯಾಗುವ ಮಹಿಳೆಯರು ಹೋದರೇ ತಪ್ಪೇನಿಲ್ಲ. ಆ ದೇವರು ಎಲ್ಲರನ್ನೂ ಒಂದೇ ರೀತಿ ಕಾಣುತ್ತಾರೆ. ದೇವರ ದೃಷ್ಟಿಯಲ್ಲಿ ಲಿಂಗಭೇದ ಸಹ ಇಲ್ಲ. ಇದೆಲ್ಲಾ ಮಾನವ ನಿರ್ಮಿತವಾದ ಆಚರಣೆಗಳು ಅಷ್ಟೆ. ಶಬರಿಮಲೆ ಮಾತ್ರವಲ್ಲ ಯಾವುದೇ ದೇವಲಯಕ್ಕಾದರೂ ಪ್ರವೇಶ ಮಾಡಬಹುದು. ಜೊತೆಗೆ ಯಾವುದನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು ಎಂದು ಯಾವ ದೇವರು ಹೇಳಲ್ಲ ಎಂಬೆಲ್ಲಾ ಹೇಳಿಕೆಗಳನ್ನು ನೀಡಿದ್ದಾರೆ.

ಇನ್ನೂ ಐಶ್ವರ್ಯ ರಾಜೇಶ್ ನೀಡಿರುವಂತಹ ಹೇಳಿಕೆಗಳು ಸೋಷಿಯಲ್ ಮಿಡಿಯಾ ಸೇರಿದಂತೆ ಎಲ್ಲಾ ಕಡೆ ವೈರಲ್ ಆಗುತ್ತಿವೆ. ಆಕೆಯ ಹೇಳಿಕೆಗಳ ಬಗ್ಗೆ ಪರ ವಿರೋಧ ವಾದಗಳು ಸಹ ನಡೆಯುತ್ತಿವೆ. ಇನ್ನೂ ಆಕೆ ಇತ್ತೀಚಿಗಷ್ಟೆ ಡ್ರೈವರ್‍ ಜಮುನಾ ಎಂಬ ಸಿನೆಮಾದ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಇದೀಗ ಗ್ರೇಟ್ ಇಂಡಿಯನ್ ಕಿಷನ್ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.