News

ಎತ್ತಿನಗಾಡಿಯಲ್ಲಿ ಬಂದು ನನ್ನನ್ನೂ ಬಿಗ್ ಬಾಸ್ ಮನೆಗೆ ಕಳುಹಿಸಿ ಎಂದು ವ್ಯಕ್ತಿಯೊಬ್ಬ ಸುದೀಪ್ ಮನೆ ಮುಂದೆ ಹೈಡ್ರಾಮಾ….!

ರಿಯಾಲಿಟಿ ಶೋಗಳಲ್ಲಿ ತುಂಬಾನೆ ಪಾಪ್ಯುಲರ್ ಪಡೆದುಕೊಂಡಿರುವ ಬಿಗ್ ಬಾಸ್ ಶೋ ಭಾರಿ ಕ್ರೇಜ್ ಪಡೆದುಕೊಂಡಿದೆ ಎನ್ನಬಹುದಾಗಿದೆ. ಬಿಗ್ ಬಾಸ್ ಮನೆಗೆ ಹೋಗಲು ಅನೇಕರು ಆಸೆಯನ್ನು ಪಡುತ್ತಾರೆ. ಇದೀಗ ಓರ್ವ ವ್ಯಕ್ತಿ ತನ್ನನ್ನು ಬಿಗ್ ಬಾಸ್ ಮನೆಗೆ ಕಳುಹಿಸಿ ಎಂದು ಕಿಚ್ಚ ಸುದೀಪ್ ಮನೆಯ ಮುಂದೆ ಹೈಡ್ರಾಮಾ ಮಾಡಿದ್ದಾನೆ.

ಕಳೆದೆರಡು ದಿನಗಳ ಹಿಂದೆ ಮಂಜು ಎಂಬ ವ್ಯಕ್ತಿ ಸಂಜೆ ಆರು ಗಂಟೆಯಿಂದ 10 ಗಂಟೆಯವರೆಗೂ ಸುದೀಪ್ ಮನೆಯ ಮುಂದೆ ಕುಳಿತಿದ್ದಾನೆ. ಎತ್ತಿನ ಗಾಡಿಯಲ್ಲಿ ಬಂದು ನನಗೆ ಬಿಗ್ ಬಾಸ್ ಮನೆಗೆ ಹೋಗಲು ಅವಕಾಶ ಮಾಡಿಕೊಡಿ ಎಂದು ಅತಿರೇಕದ ವರ್ತನೆ ಮಾಡಿದ್ದಾನೆ. ಆತನ ವರ್ತನೆಯನ್ನು ಕಂಡ ಸುದೀಪ್ ರವರ ಮನೆಯ ಸೆಕ್ಯೂರಿಟಿ ಶಾಕ್ ಆಗಿದ್ದಾರೆ. ತಾನು ಟಿ. ನರಸಿಪುರದಿಂದ ಬಂದಿದ್ದು, ನಾವು ಅನಕ್ಷರಸ್ಥರು, ರೈತರು ಬಿಗ್ ಬಾಸ್ ಮನೆಗೆ ಹೋಗಲು ಅವಕಾಶ ಕೊಡಿ ಎಂದು ಎತ್ತಿನಗಾಡಿಯಲ್ಲಿ ಬಂದು ಸುದೀಪ್ ಮನೆಯ ಮುಂದೆ ಕಾದು ಕುಳಿತಿದ್ದಾನೆ.

ಎತ್ತಿನ ಗಾಡಿಗೆ ಬ್ಯಾನರ್‍ ಕಟ್ಟಿಕೊಡು ಬಂದ ಮಂಜು ಜೆಪಿನಗರದಲ್ಲಿರುವ ಸುದೀಪ್ ಮನೆಯ ಮುಂದೆ ಹೈಡ್ರಾಮಾ ನಡೆಸಿದ್ದಾನೆ. ಬ್ಯಾನರ್‍ ನಲ್ಲಿ ಆತನ ಹೆಸರು ಮಂಜು ಎಂದು ಬರೆಯಲಾಗಿತ್ತು. ಇನ್ನೂ ಸುದೀಪ್ ಆಪ್ತರು ಕೆಲ ಸಮಯ ಆತನಿಗೆ ಸಮಾಧಾನ ಮಾಡಿ ಮನವೊಲಿಸಿ ವಾಪಸ್ಸು ಕಳುಹಿಸಿದ್ದಾರೆ ಎನ್ನಲಾಗಿದೆ. ಸುದೀಪ್ ರವರು ಮನೆಯಲ್ಲಿಲ್ಲ. ಚೆನ್ನೈಗೆ ಹೋಗಿದ್ದಾರೆ ಎಂದು ಸೆಕ್ಯೂರಿಟಿ ಸಹ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಗೆ ಹೋಗಲು ಮಂಜು ಎಂಬಾತ ಕೆಲ ಸಮಯ ಸುದೀಪ್ ರವರ ಮನೆಯ ಮುಂದೆ ಹೈಡ್ರಾಮಾ ಮಾಡಿದ್ದಾರೆ.

Most Popular

To Top