Film News

ನ್ಯಾಷನಲ್ ಅವಾರ್ಡ್ ಪಡೆದುಕೊಂಡ ಬಗ್ಗೆ ಅಲ್ಲು ಅರ್ಜುನ್ ಕಾಮೆಂಟ್ಸ್, ಆ ಕಾರಣದಿಂದಲೇ ನನಗೆ ಅವಾರ್ಡ್ ಬಂತು ಎಂದ ಬನ್ನಿ….!

ಟಾಲಿವುಡ್ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಪುಷ್ಪಾ ಸಿನೆಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ಕೇವಲ ತೆಲುಗು ಸಿನಿರಂಗದಲ್ಲಿ ಮಾತ್ರವಲ್ಲದೇ ದೇಶ ವಿದೇಶದಲ್ಲೂ ಅಲ್ಲು ಅರ್ಜುನ್ ರವರಿಗೆ ಅಭಿಮಾನಿ ಬಳಗ ಹುಟ್ಟಿಕೊಂಡಿತ್ತು. ಇನ್ಸ್ಟಾಗ್ರಾಂ ಸಹ ಅಲ್ಲು ಅರ್ಜುನ್ ಬಗ್ಗೆ ಸ್ಪೇಷಲ್ ವಿಡಿಯೋ ಸಹ ಮಾಡಿತ್ತು. ಈ ಗೌರವ ದೊರೆತ ಮೊದಲ ಇಂಡಿಯನ್ ಹಿರೋ ಆಗಿ ಅಲ್ಲು ಅರ್ಜುನ್ ಖ್ಯಾತಿ ಪಡೆದುಕೊಂಡರು. ಜೊತೆಗೆ ದುಬೈನಲ್ಲಿ ಅಲ್ಲು ಅರ್ಜುನ್ ರವರ ಮೇಣದ ಪ್ರತಿಮೆಯನ್ನು ಸಹ ನಿರ್ಮಾಣ ಮಾಡುತ್ತಿದ್ದಾರೆ ಎನ್ನಲಾಗಿದೆ. ಜೊತೆಗೆ ರಾಷ್ಟ್ರೀಯ ಉತ್ತಮ ನಟ ಎಂಬ ಅವಾರ್ಡ್ ಸಹ ಪಡೆದುಕೊಂಡ ತೆಲುಗು ನಟನಾಗಿ ಫೇಂ ಪಡೆದುಕೊಂಡಿದ್ದಾರೆ.

ಕಳೆದೆರಡು ದಿನಗಳ ಹಿಂದೆಯಷ್ಟೆ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಅವಾರ್ಡ್ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಯವರಿಂದ ರಾಷ್ಟ್ರೀಯ ಉತ್ತಮ ನಟ ಅವಾರ್ಡ್ ಪಡೆದುಕೊಂಡರು. ಜೊತೆಗೆ ಪುಷ್ಪಾ ಸಿನೆಮಾದ ಮ್ಯೂಜಿಕ್ ಡೈರೆಕ್ಟರ್‍ ದೇವಿಶ್ರೀಪ್ರಸಾದ್ ಸಹ ಅವಾರ್ಡ್ ಪಡೆದುಕೊಂಡರು. ಈ ಸಂಬಂಧ ಅಲ್ಲು ಅರ್ಜುನ್ ಕಳೆದ ಶನಿವಾರ ಹೈದರಾಬಾದ್ ನಲ್ಲಿ ಗ್ರಾಂಡ್ ಪಾರ್ಟಿ ಏರ್ಪಡಿಸಿದ್ದರು. ಪುಷ್ಪಾ ಸಿನಿಮಾತಂಡದ ಜೊತೆಗೆ ಸಿನಿರಂಗದ ಹಲವು ಮುಖಂಡರು ಈ ಪಾರ್ಟಿಯಲ್ಲಿ ಹಾಜರಾಗಿದ್ದರು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಅಲ್ಲು ಅರ್ಜುನ್ ಹಾಗೂ ದೇವಿ ಶ್ರೀ ಪ್ರಸಾದ್ ಮಾತನಾಡಿ, ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಈ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಈ ವೇಳೆ ಮಾತನಾಡಿ ನಾನು ಚೆನೈಗೆ ಹೋಗುವ ಪ್ರತಿ ಬಾರಿ ದೇವಿಶ್ರೀ ರವರನ್ನು ಭೇಟಿ ಆಗುತ್ತೇನೆ. ದೇವಿಶ್ರೀ ನೀನು ಬಾಲಿವುಡ್ ಗೆ ಹೋಗು ಅಲ್ಲಿ ಸಿನೆಮಾಗಳನ್ನು ಮಾಡು ಎಂದು ಹೇಳುತ್ತಿದೆ. ಆ ಸಮಯದಲ್ಲಿ ದೇವಿ ಮೊದಲು ನೀನು ಹೋಗು ನಿನ್ನೊಂದಿಗೆ ನಾನು ಸಹ ಬರುತ್ತೇನೆ ಎನ್ನುತ್ತಿದ್ದ. ನಾನು ಯಾವಾಗ ಹೋಗುತ್ತೇನೆ, ಅದು ಅಷ್ಟು ಸುಲಭವಲ್ಲ. ಹೋಗುತ್ತೇನೋ ಇಲ್ಲವೋ ಗೊತ್ತಿಲ್ಲ. ನೀನು ಹೋಗು ಎನ್ನುತ್ತಿದ್ದೆ. ದೇವಿ ಅಂದುಕೊಂಡಂತೆ 20 ವರ್ಷಗಳ ಬಳಿಕ ಪುಷ್ಪಾ ಸಿನೆಮಾದ ಮೂಲಕ ಇಬ್ಬರೂ ಬಾಲಿವುಡ್ ಗೆ ಹೋದೆವು. ನಾನು ನ್ಯಾಷನಲ್ ಅವಾರ್ಡ್ ಪಡೆದುಕೊಂಡಿದ್ದನ್ನು ಕೇಳಿದ ನಮ್ಮ ಸ್ನೇಹಿತನೋರ್ವ ಕರೆ ಮಾಡಿ, ಸದಾ ಪ್ರಿನ್ಸಿಪಲ್ ಬಳಿ ಟಿ.ಸಿ. ತೆಗೆದುಕೊಳ್ಳುತ್ತಿದ್ದ ನೀನು ಇದೀಗ ಪ್ರೆಸಿಡೆಂಟ್ ಬಳಿ ಮೆಡಲ್ ತೆಗೆದುಕೊಳ್ಳುವುದು ಏನು ಎಂದು ಹೇಳಿದ್ದಾನೆ. ಅದೊಂದು ದೊಡ್ಡ ಹೊಗಳಿಕೆ. ನಾನು ಅವಾರ್ಡ್ ಪಡೆದುಕೊಂಡರೇ ಅಲ್ಲು ಅರವಿಂದ ಎಷ್ಟು ಸಂತೋಷ ಪಡುತ್ತಾರೋ ಅದಕ್ಕಿಂತ ಹೆಚ್ಚಾಗಿ ದೇವಿಶ್ರೀ ರವರಿಗೆ ಅವಾರ್ಡ್ ಬಂದಿದ್ದು ಅವರಿಗೆ ಸಂತೋಷವಾಗಿದೆ ಎಂದಿದ್ದಾರೆ.

ಇನ್ನೂ ನನಗೆ ಅವಾರ್ಡ್ ಬರಲು ಕಾರಣ ನನ್ನ ಸುತ್ತಲೂ ಇರುವಂತಹವರೇ, ಅವರು ಇಷ್ಟಪಟ್ಟಿದ್ದ ಕಾರಣದಿಂದಲೇ ನಾನು ಅವಾರ್ಡ್ ಪಡೆದುಕೊಂಡಿದ್ದೇನೆ. ನಾವು ಅಂದುಕೊಂಡು, ಕಷ್ಟ ಪಡೋಡು ಕೇವಲ 50 ರಷ್ಟು ಮಾತ್ರ. ನಮ್ಮ ಪಕ್ಕದಲ್ಲಿರುವಂತಹವರು ಗಟ್ಟಿಯಾಗಿ ಬಯಸಿದರೇ ಮಾತ್ರ ಸಕ್ಸಸ್ ಸಿಗುತ್ತದೆ. ಸುಕುಮಾರ್‍ ರವರು ನಿಸ್ವಾರ್ಥ ಮನಸ್ಸಿನವರು. ಸಿನೆಮಾ ಫಲಿತಾಂಶ, ಕಲೆಕ್ಷನ್ ಇದೆಲ್ಲವೂ ಅಲ್ಲ. ನಿನ್ನಲ್ಲಿನ ಬೆಸ್ಟ್ ಆಕ್ಟಿಂಗ್ ಹೊರಬರಬೇಕು ಎಂದಿದ್ದರು. ನಾನು ಈ ಅವಾರ್ಡ್ ಪಡೆದುಕೊಂಡಿದ್ದು ಸುಕುಮಾರ್‍ ರವರಿಂದಲೇ ಎಂದು ಹೇಳಿದ್ದಾರೆ. ಇನ್ನೂ ಅಲ್ಲು ಅರ್ಜುನ್ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

Most Popular

To Top