Film News

ಧನುಷ್ ಹಾಗೂ ಐಶ್ವರ್ಯ ವಿಚ್ಚೇದನದಕ್ಕೆ ಕಾರಣ ಆ ನಟಿಯೇ? ಹೀಗೋಂದು ಸುದ್ದಿ ವೈರಲ್……!

ಕಾಲಿವುಡ್ ನ ಖ್ಯಾತ ನಟ ಸೂಪರ್‍ ಸ್ಟಾರ್‍ ರಜನಿಕಾಂತ್ ರವರ ಪುತ್ರಿ ಐಶ್ವರ್ಯ ಹಾಗೂ ಸ್ಟಾರ್‍ ನಟ ಧನುಷ್ ರವರು ಮದುವೆಯಾಗಿ ಸುಮಾರು 18 ವರ್ಷಗಳ ಕಾಲ ಅನ್ಯೋನ್ಯತೆಯಿಂದ ಜೀವನ ಸಾಗಿಸಿದ್ದರು. ಅಷ್ಟು ವರ್ಷಗಳ ಕಾಲ ಅನ್ಯೋನ್ಯತೆಯಿಂದ ಜೀವನ ಸಾಗಿಸಿದ್ದ ಈ ಜೋಡಿ ಸಡನ್ ಆಗಿ ಅಭಿಮಾನಿಗಳಿಗೆ ವಿಚ್ಚೇದನ ಪಡೆದುಕೊಳ್ಳುವ ಬಗ್ಗೆ ಶಾಕಿಂಗ್ ಸುದ್ದಿಯನ್ನು ಹೊರಹಾಕಿದರು. ಜನವರಿ 2022 ರಲ್ಲಿ ಈ ಜೋಡಿ ವಿಚ್ಚೇದನ ಪಡೆದುಕೊಳ್ಳುವುದಾಗಿ ಘೋಷಣೆ ಮಾಡಿದರು. ಇದೀಗ ಈ ಜೋಡಿ ವಿಚ್ಚೇದನ ಪಡೆದುಕೊಳ್ಳಲು ಓರ್ವ ಸ್ಟಾರ್‍ ನಟಿ ಎಂದು ಹೇಳಲಾಗುತ್ತಿದೆ. ಆ ನಟಿ ಯಾರು ಎಂಬ ವಿಚಾರಕ್ಕೆ ಬಂದರೇ,

ತಮ್ಮ 18 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಲಿದ್ದಾರೆ ಎಂದು ಧನುಷ್ ಹಾಗೂ ಐಶ್ವರ್ಯ ದಂಪತಿಯ ಬಗ್ಗೆ ಶಾಕಿಂಗ್ ಸುದ್ದಿಯೊಂದು ಹೊರಬಂತು. ಇದಾದ ಬಳಿಕ ಕಳೆದ ವರ್ಷದ ಅಕ್ಟೋಬರ್‍ ಮಾಹೆಯಲ್ಲಿ ಅವರಿಬ್ಬರೂ ತಮ್ಮ ವಿಚ್ಚೇದನದ ನಿರ್ಧಾರದಿಂದ ಹೊರಬಂದಿದ್ದಾರೆ. ರಜನಿಕಾಂತ್ ಅಳಿಯ ಹಾಗೂ ಮಗಳ ನಡುವೆ ರಾಜಿ ಸಂದಾನ ಮಾಡಿದ್ದು, ಅವರು ವಿಚ್ಚೇದನದ ನಿರ್ಧಾರದಿಂದ ಹೊರಬಂದಿದ್ದಾರೆ. ಶೀಘ್ರದಲ್ಲೇ ಒಂದಾಗಿ ಬಾಳಲಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬಂದವು. ಆದರೆ ಎಲ್ಲವೂ ಸುಳ್ಳು ಸುದ್ದಿಗಳು ಎಂದು ಹೇಳಲಾಗಿದೆ. ಇದೀಗ ಅವರಿಬ್ಬರ ನಡುವೆ ವಿಬೇಧಗಳು ಹುಟ್ಟಿಕೊಳ್ಳಲು ಆ ನಟಿ ಕಾರಣ ಎಂದು ಹೇಳಲಾಗುತ್ತಿದೆ. ಹೀಗಂತಾ ಕಾಳಿವುಡ್ ಅಂಗಳದಲ್ಲಿ ಕೆಲವೊಂದು ಸುದ್ದಿಗಳು ಹರಿದಾಡುತ್ತಿವೆ.

ಇನ್ನೂ ಧನುಷ್ ಹಾಗೂ ಐಶ್ವರ್ಯ ರಜನಿಕಾಂತ್ ನಡುವೆ ಮನಃಸ್ಥಾಪಗಳು ಶುರುವಾಗಲು ಸೌತ್ ನಟಿ ಅಮಲಾಪಾಲ್ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಅಮಲಾಪಾಲ್ ರವರ ಕಾರಣದಿಂದ ಧನುಷ್ ಹಾಗೂ ಐಶ್ವರ್ಯ ನಡುವೆ ಗಲಾಟೆಯಾಗಿತ್ತಂತೆ. ಆ ಗಲಾಟೆಗಳು ಹೆಚ್ಚಾಗಿದ ಕಾರಣ ಅವರಿಬ್ಬರು ವಿಚ್ಚೇದನ ಪಡೆದುಕೊಂಡರಂತೆ. ಅಮಲಾಪಾಲ್ ಹಾಗೂ ಧನುಷ್ ಕಾಂಬಿನೇಷನ್ ನಲ್ಲಿ ರಘುವರನ್ ಬಿ ಟೆಕ್ ಹಾಗೂ ವಿಐಪಿ2 ಸಿನೆಮಾಗಳು ತೆರೆಗೆ ಬಂದಿತ್ತು. ಈ ಸಿನೆಮಾಗಳಲ್ಲಿ ನಟಿಸುವ ಸಮಯದಲ್ಲೇ ಅವರಿಬ್ಬರ ನಡುವೆ ಅಫೈರ್‍ ಶುರುವಾಗಿತ್ತಂತೆ. ಈ ವಿಚಾರ ಐಶ್ವರ್ಯಗೂ ಸಹ ತಿಳಿಯತಂತೆ. ಈಗಾಗಲೇ ನಾನು ಅನೇಕರ ವಿಚಾರದಲ್ಲಿ ಕಾಂಪ್ರಮೈಸ್ ಆಗಿದ್ದೇನೆ. ಇನ್ನು ಆಗುವುದಿಲ್ಲ ಎಂದು ಗಲಾಟೆ ಮಾಡಿಕೊಂಡು ವಿಚ್ಚೇದನ ಪಡೆದುಕೊಂಡರಂತೆ. ಸದ್ಯ ಈ ಸುದ್ದಿ ಕಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇನ್ನೂ ಐಶ್ವರ್ಯ ಹಾಗೂ ಧನುಷ್ ವಿಚ್ಚೇದನಕ್ಕೆ ಶ್ರುತಿ ಹಾಸನ್ ಸಹ ಕಾರಣ ಎಂದು ಈ ಹಿಂದೆ ರೂಮರ್‍ ಗಳು ಹರಿದಾಡಿತ್ತು.  ಜೊತೆಗೆ ಧನುಷ್ ಅನೇಕ ನಟಿಯರೊಂದಿಗೆ ಅಫೈರ್‍ ಇಟ್ಟುಕೊಂಡಿದ್ದಾರೆ ಎಂಬ ಮಾತುಗಳು ಸಿನಿರಂಗದಲ್ಲಿ ಅನೇಕ ಬಾರಿ ಕೇಳಿಬಂದಿದೆ. ಸದ್ಯ ಕಾಲಿವುಡ್ ನಲ್ಲಿ ಸ್ಟಾರ್‍ ನಟನಾಗಿ ಧನುಷ್ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top