Film News

ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ, ಮದುವೆ ವಿಡಿಯೋ ಬಗ್ಗೆ ಸ್ಪಷ್ಟನೆ ಕೊಟ್ಟ ನಟ ನರೇಶ್….!

ಸದ್ಯ ಸೋಷಿಯಲ್ ಮಿಡಿಯಾದಲ್ಲಿ ನರೇಶ್ ಹಾಗೂ ಪವಿತ್ರ ಮದುವೆ ವಿಡಿಯೋ ಒಂದು ಸಖತ್ ಸದ್ದು ಮಾಡುತ್ತಿದೆ. ಇನ್ನೂ ಈ ಬಗ್ಗೆ ಟ್ವೀಟ್ ಮಾಡಿರುವ ನರೇಶ್, ನಮ್ಮ ಈ ಹೊಸ ಪಯಣದಲ್ಲಿ ಜೀವನ ಪರ್ಯಂತ ಶಾಂತಿ, ಸಂತೋಷಕ್ಕಾಗಿ ನಿಮ್ಮ ಆರ್ಶಿವಾದ ಕೋರುತ್ತಿದ್ದೇನೆ. ಒಂದು ಪವಿತ್ರವಾದ ಬಂಧ, ಎರಡು ಮನಸುಗಳು, ಮೂರು ಗಂಟು, ಸಪ್ತಪದಿ ನಿಮ್ಮ ಆರ್ಶಿವಾದ ಕೋರುತ್ತಿದೆ ಎಂದು ಪೋಸ್ಟ್ ಮಾಡಿದ್ದಾರೆ. ಇನ್ನೂ ಈ ವಿಡಿಯೋ ನಿಜವೇ ಅಥವಾ ಸಿನೆಮಾದಲ್ಲಿನ ಒಂದು ದೃಶ್ಯ ಇರಬಹುದಾ ಎಂದು ಅನೇಕರು ಸೋಷಿಯಲ್ ಮಿಡಿಯಾ ಮೂಲಕ ಕೇಳುತ್ತಿದ್ದರು. ಇದೀಗ ಆ ಪ್ರಶ್ನೆಗೆ ನರೇಶ್ ಉತ್ತರ ನೀಡಿದ್ದಾರೆ. ಆದರೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಸ್ಪಷ್ಟನೆ ನೀಡಿದ್ದಾರೆ.

ತೆಲುಗು ನಟ ನರೇಶ್ ಹಾಗೂ ಪವಿತ್ರಾ ರವರ ಅಫೈರ್‍ ಬಗ್ಗೆ ಸುಮಾರು ತಿಂಗಳುಗಳು ಗಳಿಂದ ಸುದ್ದಿ ಕೇಳಿಬರುತ್ತಲೇ ಇದೆ. ಅದರಲ್ಲೂ ಈ ವರ್ಷದ ಆರಂಭದ ಸಮಯದಲ್ಲಿ ಶೀಘ್ರದಲ್ಲೇ ತಾವು ಮದುವೆಯಾಗುವುದಾಗಿ ರೊಮ್ಯಾಂಟಿಕ್ ವಿಡಿಯೋ ಒಂದನ್ನು ಸಹ ಹಂಚಿಕೊಂಡಿದ್ದರು. ಇದಾದ ಬಳಿಕ ನರೇಶ್ ತನ್ನತ ಟ್ವಿಟರ್‍ ಖಾತೆಯಲ್ಲಿ ತಾವಿಬ್ಬರು ಮದುವೆಯಾದ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋ ಕಡಿಮೆ ಸಮಯದಲ್ಲೇ ವೈರಲ್ ಆಗಿದೆ. ಆದರೆ ಇದೆಲ್ಲಾ ಸಿನೆಮಾ ಪ್ರಚಾರದ ಗಿಮಿಕ್ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು. ಮತ್ತೆ ಕೆಲವರು ಇದು ನಿಜನಾ ಸುಳ್ಳಾ ಎಂದು ಸ್ಪಷ್ಟನೆ ನೀಡುವಂತೆ ಕಾಮೆಂಟ್ ಗಳ ಮೂಲಕ ತಿಳಿಸುತ್ತಿದ್ದರು. ಇದೀಗ ಈ ಬಗ್ಗೆ ನರೇಶ್ ರಿಯಾಕ್ಟ್ ಆಗಿದ್ದಾರೆ. ಇಂಟಿಂಟಿ ರಾಮಾಯಣಂ ಎಂಬ ಸಿನೆಮಾ ಪ್ರಮೋಷನ್ ಕಾರ್ಯಕ್ರಮದಲ್ಲಿ ಈ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ.

ಇಂಟಿಂಟಿ ರಾಮಾಯಣಂ ಸಿನೆಮಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನರೇಶ್ ರವರಿಗೆ ಮದುವೆಯ ಬಗ್ಗೆ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಉತ್ತರಿಸಿದ ಅವರು, ಪ್ರತಿಯೊಬ್ಬರಿಗೂ ವೈಯುಕ್ತಿಕ ಜೀವನ ಎಂಬುದು ಇರುತ್ತದೆ. ನನಗೂ ರೀಲ್ ಲೈಫ್ ಜೊತೆಗೆ ರಿಯಲ್ ಲೈಫ್ ಸಹ ಇರುತ್ತದೆ. ಶೀಘ್ರದಲ್ಲೇ ಈ ಬಗ್ಗೆ ಪ್ರೆಸ್ ಮೀಟ್ ಮಾಡಿ ಎಲ್ಲಾ ವಿವರಗಳನ್ನು ತಿಳಿಸುತ್ತೇನೆ. ಅಲ್ಲಿಯವರೆಗೂ ಕೊಂಚ ಸಮಾಧಾನದಿಂದ ಇರಿ. ಈಗ ನಾನು ಆ ಬಗ್ಗೆ ಮಾತನಾಡಿದರೇ ಈ ಸಿನೆಮಾದ ಪ್ರಮೋಷನ್ ಮೇಲೆ ಪ್ರತಿಕೂಲಕರ ಪ್ರಭಾವ ಬೀರುತ್ತದೆ ಎಂದು ಹೇಳುವ ಮೂಲಕ ಮದುವೆ ಆಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಖಚಿತ ಮಾಹಿತಿ ನೀಡದೇ ಜಾಣತನದ ಉತ್ತರ ನೀಡಿದ್ದಾರೆ.

ಇನ್ನೂ ನರೇಶ್ ಹಾಗೂ ಪವಿತ್ರ ಮದುವೆಯಾಗುತ್ತಿರುವ ವಿಡಿಯೋ ಮಾತ್ರ ಸೋಷಿಯಲ್  ಮಿಡಿಯಾದಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಕೆಲವರು ಶುಭಾಷಯಗಳನ್ನೂ ಸಹ ಕೋರುತ್ತಿದ್ದಾರೆ. ಮತ್ತೆ ಕೆಲವರು ಇದೆಲ್ಲಾ ಸುಳ್ಳು, ಇಂತಹ ಕೆಲಸಗಳನ್ನು ಮಾಡಬಾರದು ಎಂದು ಅಸಮಧಾನ ಸಹ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಈ ವಿಡಿಯೋ ಬಗ್ಗೆ ನರೇಶ್ ಯಾವಾಗ ಸ್ಪಷ್ಟನೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top