Film News

ಆ ನಿರ್ದೇಶಕನಿಂದ ನಾನು ನರಕ ಅನುಭವಿಸಿದ್ದೆ ಎಂದ ತಾಪ್ಸಿ ಪನ್ನು ಶಾಕಿಂಗ್ ಕಾಮೆಂಟ್ಸ್….!

ಸೌತ್ ಸಿನಿರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ತಾಪ್ಸಿ ಪನ್ನು ಜುಮ್ಮಂದಿ ನಾದಂ ಎಂಬ ಸಿನೆಮಾದ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಈಕೆ ಕಡಿಮೆ ಸಮಯದಲ್ಲೇ ಕ್ರೇಜ್ ದಕ್ಕಿಸಿಕೊಂಡರು. ಬಳಿಕ ದೊಡ್ಡ ಸ್ಟಾರ್‍ ನಟರ ಸಿನೆಮಾಗಳಲ್ಲೂ ಸಹ ಕಾಣಿಸಿಕೊಂಡರು. ಸದ್ಯ ಬಾಲಿವುಡ್‌ ನಲ್ಲಿ ದೊಡ್ಡ ಫೇಮ್ ದಕ್ಕಿಸಿಕೊಂಡು ಮುನ್ನುಗ್ಗುತ್ತಿದ್ದಾರೆ. ಇದೀಗ ಆಕೆ ಒಬ್ಬ ನಿರ್ದೇಶಕರ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಆ ನಿರ್ದೇಶಕನಿಂದ ತಾನು ತುಂಬಾ ನರಕ ಅನುಭವಿಸಿದ್ದಾಗಿ ಆಕೆ ಕಾಮೆಂಟ್ ಮಾಡಿದ್ದಾರೆ. ಆಕೆಯ ಕಾಮೆಂಟ್ ಗಳು ಇದೀಗ ವೈರಲ್ ಆಗುತ್ತಿವೆ.

ನಟಿ ತಾಪ್ಸಿ ಪನ್ನು ಜುಮ್ಮಂದಿ ನಾದಂ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನೆಮಾ ತೆಲುಗು ಖ್ಯಾತ ನಿರ್ದೇಶಕ ರಾಘವೇಂದ್ರರಾವ್ ನಿರ್ದೇಶನ ಮಾಡಿದ್ದರು. ಮಂಚು ಮನೋಜ್ ಹಿರೋ ಆಗಿ ಹಿರೋಯಿನ್ ಆಗಿ ತಾಪ್ಸಿ ಪನ್ನು ಈ ಸಿನೆಮಾದಲ್ಲಿ ನಟಿಸಿದ್ದರು.  ಈ ಸಿನೆಮಾ ಎಲ್ಲಾ ಸಿನೆಮಾಗಳಂತೆ ಕಥೆಯುಳ್ಳ ಸಿನೆಮಾ ಆದರೂ ತಾಪ್ಸಿ ಸೌಂದರ್ಯ ನೋಡಲು ಸಿನೆಮಾಗೆ ಪ್ರೇಕ್ಷಕರು ಹೋದರು ಎಂದರೇ ತಪ್ಪಾಗಲಾರದು. ಅಂದು ಈ ಸಿನೆಮಾ ದೊಡ್ಡ ಕಮರ್ಷಿಯಲ್ ಹಿಟ್ ಸಹ ಪಡೆದುಕೊಂಡಿತ್ತು. ಈ ಸಿನೆಮಾದ ಬಳಿಕ ಆಕೆಗೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಆಫರ್‍ ಗಳು ಹರಿದುಬಂದವು. ಆದರೆ ಜುಮ್ಮಂದಿ ನಾದಂ ಸಿನೆಮಾದ ಬಳಿಕ ಆಕೆಗೆ ಬ್ರೇಕ್ ನೀಡಿದ್ದು ಮಿಸ್ಟರ್‍ ಫರ್ಪೆಕ್ಟ್ ಸಿನೆಮಾ. ಬಳಿಕ ಆಕೆ ತಮಿಳು ಹಾಗೂ ಹಿಂದಿ ಸಿನೆಮಾಗಳತ್ತ ಮುಖ ಮಾಡಿದರು. ಬಾಲಿವುಡ್ ನಲ್ಲಿ ಆಕೆ ಒಳ್ಳೆಯ ಸಕ್ಸಸ್ ಕಂಡುಕೊಂಡು ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ.

ಇನ್ನೂ ಬಾಲಿವುಡ್ ನಲ್ಲಿ ಆಕೆ ಅನೇಕ ಹಿಟ್ ಸಿನೆಮಾಗಳನ್ನು ಪಡೆದುಕೊಂಡಿದ್ದಾರೆ. ಅದರಲ್ಲಿ ಅಮಿತಾಬ್ ಬಚ್ಚನ್ ರವರ ಪಿಂಕ್ ಎಂಬ ಸಿನೆಮಾದ ಸೇರುತ್ತೆ. ಈ ಸಿನೆಮಾವನ್ನು ತೆಲುಗಿನಲ್ಲಿ ವಕೀಲ್ ಸಾಬ್ ಹೆಸರಿನಲ್ಲಿ ತೆರೆಗೆ ತರಲಾಗಿದ್ದು, ಈ ಸಿನೆಮಾ ಪವನ್ ಕಲ್ಯಾಣ್ ರವರಿಗೆ ಒಳ್ಳೆಯ ಸಕ್ಸಸ್ ಸಹ ತಂದುಕೊಟ್ಟಿತ್ತು.  ಇನ್ನೂ ಈ ಹಿಂದೆ ನಡೆದಂತಹ ಸಂದರ್ಶನವೊಂದರಲ್ಲಿ ಆಕೆಗೆ ಪ್ರಶ್ನೆಯೊಂದು ಎದುರಾಗಿದ್ದು ಅದಕ್ಕೆ ಆಕೆ ಮೈಂಡ್ ಬ್ಲಾಕ್ ಆಗುವಂತ ಉತ್ತರ ಕೊಟ್ಟಿದ್ದಾರೆ. ನಿಮಗೆ ಸೌಂದರ್ಯ ಪ್ರದರ್ಶನ ಮಾಡುವುದು ಇಷ್ಟ ಅಲ್ಲವೇ ಎಂದು ಪ್ರಶ್ನೆ ಕೇಳಲಾಗಿದೆ. ಅದಕ್ಕೆ ತಾಪ್ಸಿ ಕಥೆ ಡಿಮ್ಯಾಂಡ್ ಮಾಡಿದರೇ ಏನು ಅವಶ್ಯಕತೆ ಇದೆಯೋ ಅದನ್ನು ಮಾಡಬೇಕೆಂದು ಹೇಳಿದ್ದಾರೆ.

ನನ್ನ ಮೊದಲನೆ ಸಿನೆಮಾಗೆ ರಾಘವೇಂದ್ರರಾವ್ ರವರು ನಿರ್ದೇಶಕರು. ಈ ಸಿನೆಮಾದಲ್ಲಿ ನಾನು ಸೌಂರ್ದು ಪ್ರದರ್ಶನ ಹೆಚ್ಚಾಗಿಯೇ ಮಾಡಿದ್ದೇನೆ. ರಾಘವೇಂದ್ರರಾವ್ ರವರು ಈ ಹಿಂದೆ ಶ್ರೀದೇವಿ, ಜಯಪ್ರದರಂತಹ ನಟಿಯರೊಂದಿಗೆ ಏನು ಮಾಡಿಸಿದ್ದರೋ ನನ್ನೊಂದಿಗೂ ಸಹ ಅದನ್ನೇ ಮಾಡಿಸಿದ್ದಾರೆ. ಆದರೆ ಅವರು ನೀಡಿದಂತಹ ಕಾಸ್ಟ್ಯೂಮ್ಸ್ ಹಾಕಿಕೊಳ್ಳಲು ತುಂಬಾ ನರಕ ಅನುಭವಿಸಿದ್ದೆ. ವೆರೈಟಿ ಕಾಸ್ಟ್ಯೂಮ್ಸ್ ಹಾಕಿಸಿದ್ದರು. ಇದರಿಂದ ನನಗೆ ಕಿರಿಕಿರಿಯಾಗಿತ್ತು ಎಂದು ಹೇಳಿದ್ದರು.

Most Popular

To Top