Film News

ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಸೂಪರ್ ಸ್ಟಾರ್ ರಜನಿಕಾಂತ್ ವಾರ್ನಿಂಗ್…!

ತಮಿಳು ಸಿನಿರಂಗದಲ್ಲಿ ಸೂಪರ್ ಸ್ಟಾರ್ ಆಗಿ ಸಾಗುತ್ತಿರುವ ನಟ ರಜನಿಕಾಂತ್ ಬಸ್ ಕಂಡಕ್ಟರ್ ಆಗಿದ್ದು ಹಂತ ಹಂತವಾಗಿ ಕಠಿಣ ಪರಿಶ್ರಮದಿಂದ ಇದೀಗ ಸ್ಟಾರ್‍ ನಟರಾಗಿದ್ದಾರೆ. ಮರಾಠಿ ಕುಟುಂಬದಲ್ಲಿ ಜನಿಸಿದ ಈತ ಬೆಂಗಳೂರಿನ ಬಿಟಿಎಸ್ ಬಸ್ ಕಂಡಕ್ಟರ್‍ ಆಗಿ ಕೆಲಸ ಪ್ರಾರಂಭಿಸಿ ಇದೀಗ ಸಿನಿರಂಗದಲ್ಲಿ ಮೇರು ನಟನಾಗಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಪಡೆದುಕೊಂಡು ವಯಸ್ಸಾದರೂ ಸಹ ಅನೇಕ ಸಿನೆಮಾಗಳ ಮೂಲಕ ರಂಜಿಸುತ್ತಿದ್ದಾರೆ. ಇದೀಗ ರಜನಿಕಾಂತ್ ವಾರ್ನಿಂಗ್ ಕೊಟ್ಟಿದ್ದಾರೆ. ಯಾಕೆ, ಯಾರಿಗೆ ವಾರ್ನಿಂಗ್ ಎಂಬ ವಿಚಾರಕ್ಕೆ ಬಂದರೇ,

ಸೂಪರ್‍ ಸ್ಟಾರ್‍ ರಜನಿಕಾಂತ್ ಇದೀಗ ಬಹಿರಂಗ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ರಜನಿಕಾಂತ್ ರವರ ಹೆಸರು, ಪೊಟೋ, ಮಾತುಗಳು ಅಥವಾ ಆತನ ಪ್ರತ್ಯೇಕತೆಯನ್ನು ಬಳಸಿಕೊಂಡರೇ ಕಾನೂನು ರೀತ್ಯ ಕ್ರಮ ವಹಿಸುತ್ತೇನೆ ಎಂದು ಪಬ್ಲಿಕ್ ನೊಟೀಸ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ಇಷ್ಟು ದಿನ ರಜನಿಕಾಂತ್ ರವರ ಪೊಟೋಗಳು, ಆತನ ಡೈಲಾಗ್ ಗಳನ್ನು ಎಲ್ಲರೂ ಬಳಸಿಕೊಳ್ಳುತ್ತಿದ್ದರು. ಆದರೆ ಇನ್ನು ಮುಂದೆ ಈ ರೀತಿ ಬಳಸಿಕೊಂಡರೇ ಕಾನೂನಿನ ಕ್ರಮ ಆಗುತ್ತದಂತೆ. ಸದ್ಯ ಸೂಪರ್‍ ಸ್ಟಾರ್‍ ರಜನಿಕಾಂತ್ ದೊಡ್ಡ ಮಟ್ಟದ ಖ್ಯಾತಿ ಹೊಂದಿರುವ ನಟರಾಗಿದ್ದಾರೆ. ವಾಣಿಜ್ಯವಾಗಿಯೂ ಸಹ ರಜನಿಕಾಂತ್ ರವರ ವ್ಯಕ್ತಿತ್ವ, ಹೆಸರು, ಮಾತುಗಳು ಹಾಗೂ ಪೊಟೋಗಳನ್ನು ಬಳಸಿಕೊಳ್ಳುವ ಹಕ್ಕುಗಳ ಮೇಲೆ ಅವರಿಗೆ ನಿಯಂತ್ರಣವಿದೆ. ಕೆಲವೊಂದು ವೇದಿಕೆಗಳು, ಮಾದ್ಯಮಗಳು ರಜನಿಕಾಂತ್ ರವರ ಹೆಸರು, ಮಾತುಗಳು,  ವ್ಯಂಗ ಚಿತ್ರ, ನಟನೆಗೆ ಸಂಬಂಧಿಸಿದ ಕೆಲವೊಂದು ಉತ್ಪನ್ನಗಳನ್ನು ಖರೀದಿ ಮಾಡುವಂತೆ ಮಾಡುತ್ತಿರುತ್ತಾರೆ. ಈ ಕಾರಣದಿಂದ ವಾರ್ನಿಂಗ್ ನೊಟೀಸ್ ನೀಡಲಾಗಿದೆ ಎಂದು ಹೇಳಲಾಗಿದೆ.

ಇನ್ನೂ ಅವರ ವಕೀಲ ಎಲಂ ಭಾರತಿ ಎಂಬುವವರ ಮೂಲಕ ಈ ಪಬ್ಲಿಕ್ ನೊಟೀಸ್ ನೀಡಲಾಗಿದೆ. ಇನ್ನೂ ರಜನಿಕಾಂತ್ ರವರು ಖ್ಯಾತ ನಟ, ಮಾನವತವಾದಿ ಯಾಗಿರುವ ಕಾರಣ ಆತನಿಗಿರುವ ಆಕರ್ಷಣೆ ಪ್ರಪಂಚವ್ಯಾಪಿ ಲಕ್ಷಗಟ್ಟಲೇ ಅನೇಕರು ಸೂಪರ್‍ ಸ್ಟಾರ್‍ ಆಗಿ ಕರೆಯುತ್ತಿದ್ದಾರೆ. ಸಿನಿರಂಗದಲ್ಲಿ ಅವರಿಗೆ ಅಪಾರವಾದ ಗೌರವವಿದೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ. ವಿವಾದ ಇಲ್ಲದ ನಟರಾಗಿದ್ದಾರೆ. ಅವರ ಪ್ರತಿಷ್ಟೆ ಅಥವಾ ವ್ಯಕ್ತಿತ್ವಕ್ಕೆ ದಕ್ಕೆಯಾಗುವುದು ರಜನಿಕಾಂತ್ ರವರಿಗೆ ತುಂಬಾ ನಷ್ಟ ಎಂದು ಎಲಂ ಭಾರತಿ ರವರು ಹೇಳಿದ್ದಾರೆ.

ಇನ್ನೂ ರಜನಿಕಾಂತ್ ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ತಾನು ಕೆರಿಯರ್‍ ಆರಂಭದಲ್ಲಿ ಅನೇಕ ದುಷ್ಚಟಗಳಿಗೆ ದಾಸನಾಗಿದ್ದು, ಅದನ್ನು ತನ್ನ ಪತ್ನಿ ಲತಾ ಪ್ರೀತಿಯಿಂದ ಬದಲಿಸಿದರು. ಆಕೆಯ ಪ್ರೀತಿಯ ಕಾರಣದಿಂದ ನಾನು ತುಂಬಾ ಬದಲಾದೆ ಎಂದು ಕೆಲವೊಂದು ವಿಚಾರಗಳನ್ನು ತಮ್ಮ ಪತ್ನಿಯ ಬಗ್ಗೆ ವಿಚಾರಗಳನ್ನು ಹಂಚಿಕೊಂಡಿದ್ದರು.

Most Popular

To Top