ಮತ್ತೆ ಮದುವೆ ಸಿನೆಮಾದ ಟ್ರೈಲರ್ ನೋಡಿ ಅದು ರಿವೇಂಜ್ ಡ್ರಾಮಾ ಅಂದುಕೊಳ್ಳಬೇಡಿ ಎಂದ ಸೀನಿಯರ್ ನಟ ನರೇಶ್….!

ಸೌತ್ ಸಿನಿರಂಗದ ಸೀನಿಯರ್‍ ನಟ ನರೇಶ್ ಹಾಗೂ ಕ್ಯಾರೆಕ್ಟರ್‍ ಆರ್ಟಿಸ್ಟ್ ಪವಿತ್ರಾ ಲೋಕೇಶ್ ರವರ ಕುರಿತಂತೆ ಅನೇಕ ಸದಾ ಒಂದಲ್ಲ ಒಂದು ಸುದ್ದಿ ಕೇಳಿಬರುತ್ತಲೇ ಇರುತ್ತದೆ. ನಟ ನರೇಶ್ ಸುಮಾರು ವರ್ಷಗಳಿಂದ ಸಿನಿರಂಗದಲ್ಲಿ ಕೆರಿಯರ್‍…

ಸೌತ್ ಸಿನಿರಂಗದ ಸೀನಿಯರ್‍ ನಟ ನರೇಶ್ ಹಾಗೂ ಕ್ಯಾರೆಕ್ಟರ್‍ ಆರ್ಟಿಸ್ಟ್ ಪವಿತ್ರಾ ಲೋಕೇಶ್ ರವರ ಕುರಿತಂತೆ ಅನೇಕ ಸದಾ ಒಂದಲ್ಲ ಒಂದು ಸುದ್ದಿ ಕೇಳಿಬರುತ್ತಲೇ ಇರುತ್ತದೆ. ನಟ ನರೇಶ್ ಸುಮಾರು ವರ್ಷಗಳಿಂದ ಸಿನಿರಂಗದಲ್ಲಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಆತ ಏನೆ ಮಾತನಾಡಿದರೂ ಸಹ ವಿವಾದಾಸ್ಪದವಾಗಿಯೇ ಮಾತನಾಡುತ್ತಾರೆ. ಸುಮಾರು ದಿನಗಳಿಂದ ಪವಿತ್ರಾ ಲೋಕೇಶ್ ಹಾಗೂ ನರೇಶ್ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ಸುದ್ದಿಗಳು ಸಹ ಕೇಳಿಬರುತ್ತಲೇ ಇದೆ. ಇದೀಗ ನರೇಶ್ ಹಾಗೂ ಪವಿತ್ರಾ ಜೋಡಿಯಾಗಿ ಮತ್ತೆ ಮದುವೆ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾದ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಮತ್ತೆ ಮದುವೆ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾ ತೆಲುಗಿನಲ್ಲಿ ಮಳ್ಳಿ ಪೆಳ್ಳಿ ಎಂಬ ಟೈಟಲ್ ನಲ್ಲೂ ಸಹ ತೆರೆಗೆ ಬರಲಿದೆ. ಇನ್ನೂ ಈ ಸಿನೆಮಾವನ್ನು ನರೇಶ್ ನಿರ್ಮಾಣ ಮಾಡಿದ್ದಾರೆ. ನರೇಶ್ ಹಾಗೂ ಪವಿತ್ರಾ ಜೋಡಿಯಾಗಿ ಈ ಸಿನೆಮಾ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಸಹ ಹುಟ್ಟಿದೆ. ಈಗಾಗಲೇ ನರೇಶ್ ಮೂರು ಮದುವೆಯಾಗಿದ್ದಾರೆ. ಪವಿತ್ರಾ ಲೋಕೇಶ್ ರನ್ನು ಮದುವೆಯಾಗಲು ನರೇಶ್ ಮೂರನೇ ಪತ್ನಿ ರಮ್ಯ ರಘುಪತಿ ಒಪ್ಪುತ್ತಿಲ್ಲ. ಇದೀಗ ಮತ್ತೆ ಮದುವೆ ಎಂಬ ಸಿನೆಮಾದ ಮೂಲಕ ಸದ್ದು ಮಾಡಲಿದ್ದಾರೆ. ಈ ಸಿನೆಮಾದ ಟೀಸರ್‍ ನೋಡಿದರೇ ಇದು ಪವಿತ್ರ ಹಾಗೂ ನರೇಶ್ ಬಯೋಪಿಕ್ ಮಾದರಿಯಲ್ಲಿದೆ ಎನ್ನಲಾಗುತ್ತಿದೆ. ಇದೀಗ ಟ್ರೈಲರ್‍ ಸಹ ರಿಲೀಸ್ ಆಗಿದ್ದು, ಅವರಿಬ್ಬರ ಜೀವನದ ಕೆಲವೊಂದು ರಿಯಲ್ ಸನ್ನಿವೇಶಗಳು ಸಹ ಕಾಣಿಸಿದೆ.

ಇದೀಗ ಈ ಬಗ್ಗೆ ನರೇಶ್ ಮಾತನಾಡಿದ್ದು, ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ನನಗೆ ರಮ್ಯಾ ರಘುಪತಿ ಮೇಲೆ ದ್ವೇಷ ಸಾಧಿಸಿಬೇಕು. ಆ ಕಾರಣದಿಂದಲೇ ಈ ಸಿನೆಮಾ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ನನಗೆ ನಿಜಕ್ಕೂ ರಿವೇಂಜ್ ತೆಗೆದುಕೊಳ್ಳಬೇಕೆಂದುಕೊಂಡಿದ್ದರೇ, ನಾನು ಯೂಟ್ಯೂಬ್ ನಲ್ಲಿ ಹಣ ಕೊಟ್ಟು ಟ್ರೋಲಿಂಗ್ ಮಾಡಿಸಿದರೇ ಸಾಕು ಅಲ್ವಾ, ಹದಿನೈದು ಕೋಟಿ ಖರ್ಚು ಮಾಡಿ ಸಿನೆಮಾ ಮಾಡುವ ಅವಶ್ಯಕತೆಯಾದರೂ ಏನಿತ್ತು. ಜೊತೆಗೆ ನನಗೆ ಬಯೋಪಿಕ್ ತೆಗೆದುಕೊಳ್ಳುವಂತಹ ರೇಂಜ್ ಗೂ ಸಹ ಹೋಗಿಲ್ಲ. ಮತ್ತೆ ಮದುವೆ ಈ ಸಿನೆಮಾದಲ್ಲಿ ಬ್ಯೂಟಿಪುಲ್ ಎಮೋಷನಲ್ ಕಥೆ ಇರುತ್ತದೆ. ಈ ಸಿನೆಮಾದ ಟೀಸರ್‍ ಅಂಡ್ ಟ್ರೈಲರ್‍ ನೋಡಿ ಯಾರೂ ಸಹ ರಿವೇಂಜ್ ಸಿನೆಮಾ ಅಂದುಕೊಳ್ಳಬೇಡಿ ಎಂದು ಹೇಳಿದ್ದಾರೆ.

ಇನ್ನೂ ಫ್ಯಾಮಿಲಿ ಎಂಟರ್‍ ಟ್ರೈನರ್‍ ಆಗಿ ಈ ಸಿನೆಮಾ ತೆರೆಗೆ ಬರಲಿದೆ ಎನ್ನಲಾಗಿದೆ. ನರೇಶ್ ಹಾಗೂ ಪವಿತ್ರ ರವರ ನಡುವೆ ಸಹ ಒಳ್ಳೆಯ ಕೆಮಿಸ್ಟ್ರಿ ಸಹ ವರ್ಕೌಟ್ ಆಗಿದೆ ಎಂದೂ ಸಹ ಹೇಳಲಾಗುತ್ತಿದೆ. ಈ ಸಿನೆಮಾದಲ್ಲಿ ಜಯಸುಧ, ಶರತ್ ಬಾಬು. ವನಿತಾ, ಅನನ್ಯ ನಾಗಳ್ಳ, ರವಿವರ್ಮಾ, ಭದ್ರಂ, ಮಧು ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ಈ ಸಿನೆಮಾ ಮೇ.26 ರಂದು ಬಿಡುಗಡೆಯಾಗಲಿದ್ದು, ಈ ಸಿನೆಮಾದ ಮೇಲೆ ನಿರೀಕ್ಷೆ ಸಹ ಹೆಚ್ಚಾಗಿದೆ.