Film News

ಆ ಕಾರಣದಿಂದಲೇ ಸಮಂತಾ ನಾಗಚೈತನ್ಯ ಬೇರೆಯಾದ್ರಾ? ಸಮಂತಾಗೆ ಅಷ್ಟೊಂದು ಟಾರ್ಚರ್ ಕೊಟ್ರಾ ಚೈತು?

ಸುಮಾರು ವರ್ಷಗಳ ಕಾಲ ಪ್ರೀತಿಸಿ ಅದ್ದೂರಿಯಾಗಿ ಮದುವೆಯಾಗಿ ಮದುವೆಯಾದ ಕೆಲವೇ ವರ್ಷಗಳಲ್ಲಿ ವಿಚ್ಚೇದನ ಪಡೆದುಕೊಂಡ ಜೋಡಿ ಸಮಂತಾ ಹಾಗೂ ನಾಗಚೈತನ್ಯ ಜೋಡಿ ಒಂದಾಗಿದ್ದು, ಅವರು ವಿಚ್ಚೇದನ ಪಡೆದ ಸುದ್ದಿ ಸಂಚಲನ ಸೃಷ್ಟಿಸಿದೆ. ವಿಚ್ಚೇದನ ಪಡೆದುಕೊಂಡಾಗಿನಿಂದ ಅವರ ಬಗ್ಗೆ ಅನೇಕ ಸುದ್ದಿಗಳು ಕೇಳಿಬರುತ್ತಲೇ ಇದೆ. ಆದರೆ ಅವರ ವಿಚ್ಚೇದನಕ್ಕೆ ಮಾತ್ರ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ವಿಚ್ಚೇದನಕ್ಕೆ ಅದೇ ಕಾರಣ, ಇದೇ ಕಾರಣ ಎಂಬ ಸುದ್ದಿಗಳು ಕೇಳಿಬರುತ್ತಲೇ ಇದೆ. ಇದೀಗ ಮತ್ತೊಂದು ಸುದ್ದಿ ಕೇಳಿಬರುತ್ತಿದೆ.

ಸೌತ್ ಸಿನಿರಂಗದಲ್ಲಿ ಕ್ಯೂಟ್ ಅಂಡ್ ಕ್ರೇಜಿ ಜೋಡಿಗಳಲ್ಲಿ ಸಮಂತಾ ಹಾಗೂ ನಾಗಚೈತನ್ಯ ಜೋಡಿ ಒಂದಾಗಿತ್ತು. ಇಬ್ಬರೂ ಸುಮಾರು ವರ್ಷಗಳ ಕಾಲ ಪ್ರೀತಿಸಿ ದೊಡ್ಡವರ ಸಮಕ್ಷಮದಲ್ಲಿ ಮದುವೆಯಾದರು. ಆರಂಭದಲ್ಲಿ ತುಂಬಾ ಸಂತೋಷದಿಂದ ಈ ಜೋಡಿ ವೈವಾಹಿಕ ಜೀವನ ಸಾಗಿಸುತ್ತಿದ್ದರು. ಅನೇಕರಿಗೆ ಈ ಜೋಡಿ ಮಾದರಿ ಎಂತಲೂ ಸಹ ಹೇಳಲಾಗಿತ್ತು. ಆದರೆ ಇಬ್ಬರ ನಡುವೆ ಏರ್ಪಟ್ಟ ವಿಬೇದಗಳ ಕಾರಣದಿಂದ ಇಬ್ಬರೂ ವಿಚ್ಚೇದನ ಪಡೆದುಕೊಂಡು ಬೇರೆ ಬೇರೆ ಆಗಿದ್ದಾರೆ. ಅವರ ವಿಚ್ಚೇದನದ ಸುದ್ದಿ ಅಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ವಿಚ್ಚೇದನ ಪಡೆದುಕೊಂಡು ವರ್ಷಗಳು ಕಳೆದರೂ ಸಹ ಅವರು ವಿಚ್ಚೇದನ ಪಡೆದುಕೊಳ್ಳಲು ನಿಖರ ಕಾರಣ ಮಾತ್ರ ಹೊರಬಂದಿಲ್ಲ. ಆದರೆ ವಿವಿಧ ರೀತಿಯ ರೂಮರ್‍ ಗಳು ಕೇಳಿಬರುತ್ತಲೇ ಇದೆ.

ಇತ್ತೀಚಿಗೆ ನಾಗಚೈತನ್ಯ ತನ್ನ ಕಸ್ಟಡಿ ಸಿನೆಮಾದ ಪ್ರಮೋಷನ ವೇಳೆ ಸೋಷಿಯಲ್ ಮಿಡಿಯಾದಲ್ಲಿ ನಮ್ಮಿಬ್ಬರ ಮೇಲೆ ಬಂದಂತಹ ರೂಮರ್‍ ಗಳ ಕಾರಣದಿಂದ ವಿಚ್ಚೇದನ ಪಡೆದುಕೊಂಡೆವು ಎಂದು ಹೇಳಿದ್ದರು. ಈ ಹಿಂದೆ ಸಮಂತಾ ತನಗೆ ಚೈತನ್ಯ ಟಾರ್ಚರ್‍ ನೀಡುತ್ತಿದ್ದ ಎಂಬ ವಿಚಾರ ಇದೀಗ ಮತ್ತೊಮ್ಮೆ ವೈರಲ್ ಆಗುತ್ತಿವೆ. ಈ ಹಿಂದೆ ಸಮಂತಾ ಸಂದರ್ಶನವೊಂದರಲ್ಲಿ ಮದುವೆ ಬಳಿಕ ಚೈತನ್ಯರವರಲ್ಲಿ ಎಂತಹ ಬದಲಾವಣೆ ಬಂದವು ಎಂಬ ಪ್ರಶ್ನೆ ಬಂದಿದ್ದು, ಅದಕ್ಕೆ ಸಮಂತಾ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ಚೈತನ್ಯರವರಲ್ಲಿ ಯಾವುದೇ ಬದಲಾವಣೆ ಬರಲಿಲ್ಲ. ಆದರೆ ನನಗೆ ತುಂಬಾ ಕಂಡಿಷನ್ ಗಳನ್ನು ಇಟ್ಟರು. ಮದುವೆ ಬಳಿಕ ಸಂಜೆ ಆರು ಗಂಟೆ ಬಳಿಕ ಎಂತಹುದೇ ಪರಿಸ್ಥಿತಿಯಿದ್ದರೂ ಸಿನೆಮಾದ ಬಗ್ಗೆ ಮಾತನಾಡಬಾರದು ಎಂಬೆಲ್ಲಾ ಕಂಡಿಷನ್ ಗಳನ್ನು ಚೈತನ್ಯ ಹಾಕಿದ್ದರಂತೆ.

ಇನ್ನೂ ಮದುವೆ ಮುಂಚೆ ಗಂಟೆಗಟ್ಟಲೇ ಶಾಪಿಂಗ್ ಮಾಡುತ್ತಿರುವ ಚೈತನ್ಯ, ಮದುವೆಯಾದ ಬಳಿಕ ತನ್ನೊಂದಿಗೆ ಒಂದು ಬಾರಿಯಾದರೂ ಶಾಪಿಂಗ್ ಗೆ ಹೋಗಲಿಲ್ಲವಂತೆ. ಈ ಎಲ್ಲಾ ಕಾರಣಗಳಿಂದ ಸಮಂತಾ ಹಾಗೂ ಚೈತನ್ಯ ಬೇರೆಯಾದರು ಎಂಬ ಸುದ್ದಿ ಕೇಳಿಬರುತ್ತಿದೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ಅವೇ ಕಾರಣಗಳಿಂದ ಅವರಿಬ್ಬರು ವಿಚ್ಚೇದನ ಪಡೆದುಕೊಂಡ್ರಾ ಎಂಬ ಅನುಮಾನಗಳನ್ನು ಸಹ ವ್ಯಕ್ತಪಡಿಸುತ್ತಿದ್ದಾರೆ.

Most Popular

To Top