Film News

ಆ ನಟಿ ಬೇಡವೇ ಬೇಡ ಎಂದ ವಿಜಯ್ ದೇವರಕೊಂಡ, ಸಾಯಿ ಪಲ್ಲವಿಯನ್ನು ತಮ್ಮ ಸಿನೆಮಾದಲ್ಲಿ ಬೇಡ ಅಂದ್ರಾ ರೌಡಿ ಹಿರೋ…..!

ಟಾಲಿವುಡ್ ಸಿನಿರಂಗದಲ್ಲಿ ರೌಡಿ ಹಿರೋ ಎಂದೇ ಖ್ಯಾತಿ ಪಡೆದುಕೊಂಡ ವಿಜಯ್ ದೇವರಕೊಂಡ ಕಡಿಮೆ ಸಮಯದಲ್ಲೇ ಭಾರಿ ಕ್ರೇಜ್ ಪಡೆದುಕೊಂಡರು. ಯಾವುದೇ ಸಿನೆಮಾ ಬ್ಯಾಕ್ ಗ್ರೌಂಡ್ ಇಲ್ಲದೇ ಸ್ವಂತ ಟ್ಯಾಲೆಂಟ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಸಣ್ಣ ಪಾತ್ರಗಳಿಂದ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿದ್ದಾರೆ. ಪೆಳ್ಳಿ ಚೂಪುಲು ಸಿನೆಮಾದ ಮೂಲಕ ಹಿರೋ ಆದ ವಿಜಯ್ ದೇವರಕೊಂಡ ಅರ್ಜುನ್ ರೆಡ್ಡಿ ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ನಟನ ಮಾದರಿ ಕ್ರೇಜ್ ಪಡೆದುಕೊಂಡರು. ಇದೀಗ ತಮ್ಮ ಮುಂದಿನ ಸಿನೆಮಾದಲ್ಲಿ ನಾಯಕಿಯಾಗಿ ಸಾಯಿ ಪಲ್ಲವಿಯನ್ನು ಬೇಡವೇ ಬೇಡ ಎಂದಿದ್ರಂತೆ. ಈ ಸಂಬಂಧ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ರೌಡಿ ಹಿರೋ  ವಿಜಯ್ ದೇವರಕೊಂಡ ಅರ್ಜುನ್ ರೆಡ್ಡಿ ಸಿನೆಮಾದ ಮೂಲಕ ಭಾರಿ ಫೇಂ ಪಡೆದುಕೊಂಡಿದ್ದಾರೆ. ಈ ಸಿನೆಮಾದಲ್ಲಿನ ಅವರ ಡೈಲಾಗ್ಸ್, ಆಟಿಟ್ಯೂಡ್ ಗೆ ಅನೇಕರು ಫಿದಾ ಆಗಿದ್ದಾರೆ. ಈ ಸಿನೆಮಾದ ಬಳಿಕ ಅವರದ್ದೇ ಆದ ದೊಡ್ಡ ಅಭಿಮಾನಿ ಬಳಗ ಸಹ ಶುರವಾಯ್ತು ಎನ್ನಬಹುದಾಗಿದೆ. ಇನ್ನೂ ಡೈನಾಮಿಕ್ ಡೈರೆಕ್ಟರ್‍ ಪೂರಿ ಜಗನ್ನಾಥ್ ವಿಜಯ್ ದೇವರಕೊಂಡ ಕ್ರೇಜ್ ಗಮನಿಸಿ ಲೈಗರ್‍ ಎಂಬ ಸಿನೆಮಾದ ಮೂಲಕ ಅವರನ್ನು ಪ್ಯಾನ್ ಇಂಡಿಯಾ ನಟನನ್ನಾಗಿ ಪರಿಚಯಿಸಿದರು. ಭಾರಿ ನಿರೀಕ್ಷೆಯಿಂದ ಈ ಸಿನೆಮಾ ಬಿಡುಗಡೆಯಾಗಿತ್ತು. ದೊಡ್ಡ ಮಟ್ಟದಲ್ಲೇ ಪ್ರಮೋಷನ್ ಸಹ ಮಾಡಲಾಗಿತ್ತು. ಆದರೆ ಈ ಸಿನೆಮಾ ದೊಡ್ಡ ಮಟ್ಟದಲ್ಲೇ ಸೋಲನ್ನು ಸಹ ಕಂಡಿತ್ತು. ಆತನ ಕೆರಿಯರ್‍ ನಲ್ಲಿ ದೊಡ್ಡ ಡಿಜಾಸ್ಟರ್‍ ಸಿನೆಮಾ ಆಗಿತ್ತು.

ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ವಿಜಯ್ ದೇವರಕೊಂಡ ಹಾಗೂ ಸಮಂತಾ ಕಾಂಬಿನೇಷನ್ ನಲ್ಲಿ ಖುಷಿ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಈ ಸಿನೆಮಾ ಒಳ್ಳೆಯ ಸಕ್ಸಸ್ ಸಹ ಕಂಡಿದೆ. ಸದ್ಯ ವಿಜಯ್ ದೇವರಕೊಂಡ ಗೌತಮ್ ತಿನ್ನಸೂರಿ ಎಂಬ ನಿದೇರ್ಶಕರ ಜೊತೆಗೆ ಒಂದು ಸಿನೆಮಾ ಈ ಸಿನೆಮಾದ ಬಳಿಕ ಪರುಶುರಾಂ ನಿರ್ದೇಶನದಲ್ಲಿ ಮತ್ತೊಂದು ಸಿನೆಮಾದಲ್ಲಿ ನಟಿಸಲಿದ್ದಾರೆ. ಗೌತಮ್ ತಿನ್ನಸೂರಿ ಸಿನೆಮಾದಲ್ಲಿ ಶ್ರೀಲೀಲಾ ಹಾಗೂ ಪರಶುರಾಂ ರವರ ಸಿನೆಮಾದಲ್ಲಿ ಮೃಣಾಲ್ ಠಾಕೂರ್‍ ವಿಜಯ್ ದೇವರಕೊಂಡ ಜೊತೆಗೆ ರೊಮ್ಯಾನ್ಸ್ ಮಾಡಲಿದ್ದಾರೆ. ಆದರೆ ಈ ಸಿನೆಮಾಗಳಲ್ಲಿ ಮೊದಲ ಆಯ್ಕೆ ಬೇರೆ ನಟಿಯಾಗಿದ್ದರಂತೆ. ಪರುಶುರಾಂ ರವರ ಸಿನೆಮಾದಲ್ಲಿ ಮೊದಲಿಗೆ ಪೂಜಾ ಹೆಗ್ಡೆ ರವರನ್ನು ಆಯ್ಕೆ ಮಾಡಲಾಗಿತ್ತಂತೆ. ಆದರೆ ಪೂಜಾ ಹೆಗ್ಡೆ ಸಮಯ ಸರಿಯಿಲ್ಲದ ಕಾರಣ ಆಕೆಯ ಬದಲಿಗೆ ಸಾಯಿ ಪಲ್ಲವಿಯ ಹೆಸರನ್ನು ವಿಜಯ್ ಮುಂದೆ ಇಟ್ಟಿದ್ದರಂತೆ.

ಇನ್ನೂ ಮೇಕರ್ಸ್ ಸಾಯಿ ಪಲ್ಲವಿ ಹೆಸರು ಪ್ರಸ್ತಾಪ ಮಾಡುತ್ತಿದ್ದಂತೆ ವಿಜಯ್ ದೇವರಕೊಂಡ ಆಕೆ ಮಾತ್ರ ಬೇಡವೇ ಬೇಡ. ನನ್ನ ಬಾಡಿ ಲಾಂಗ್ವೇಜ್ ಗೂ, ನಾನು ಆಯ್ಕೆ ಮಾಡಿಕೊಳ್ಳುವ ಸ್ಟೋರಿಗೆ ಮ್ಯಾಚ್ ಆಗುವುದಿಲ್ಲ. ಆಕೆ ಬೇಡವೇ ಬೇಡ, ಬೇರೊಬ್ಬ ಹೋಂ ಲೀ ನಟಿಯನ್ನು ನೋಡಿ ಎಂದು ಹೇಳಿದ್ದರಂತೆ. ಈ ಕಾರಣದಿಂದ ಸಾಯಿ ಪಲ್ಲವಿ ಬದಲಿಗೆ ಮೃಣಾಲ್ ಠಾಕೂರ್‍ ರವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಈ ಸುದ್ದಿ ನಿಜವೋ ಸುಳ್ಳೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Most Popular

To Top