ನಾನು ಎರಡನೇ ಮದುವೆಯಾಗದೇ ಇರೋಕೆ ಕಾರಣ ಅದೇ ಎಂದ ನಟಿ ರೇಣು ದೇಸಾಯಿ…..!

Follow Us :

ಸೌತ್ ಸಿನಿರಂಗದಲ್ಲಿ ಅನೇಕ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡ ರೇಣು ದೇಸಾಯಿ ನಟ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಮದುವೆಯಾಗಿ ವಿಚ್ಚೇಧನ ಪಡೆದುಕೊಂಡು ಸದ್ಯ ಆಕೆ ತಮ್ಮ ಮಕ್ಕಳೊಂದಿಗೆ ಇದ್ದಾರೆ. ಪವನ್ ಜೊತೆಗೆ ಬೇರೆಯಾದ ಬಳಿಕ ಆಕೆ ಪುಣೆಯಲ್ಲಿ ಮಕ್ಕಳೊಂದಿಗೆ ಸೆಟಲ್ ಆಗಿದ್ದಾರೆ. ಮಕ್ಕಳೊಂದಿಗೆ ಜೀವನ ಕಳೆಯುತ್ತಾ ಸಾಗುತ್ತಿದ್ದಾರೆ. ಇದೀಗ ಆಕೆ ಮತ್ತೆ ಸಿನೆಮಾಗಳತ್ತ ಮುಖ ಮಾಡಿದ್ದು, ಟೈಗರ್‍ ನಾಗೇಶ್ವರ್‍ ರಾವ್ ಸಿನೆಮಾದ ಮೂಲಕ ರೀ ಎಂಟ್ರಿ ಕೊಡಲಿದ್ದಾರೆ. ಇದೀಗ ಆಕೆ ತಾನು ಎರಡನೇ ಮದುವೆಯಾಗದೇ ಇರಲು ಕಾರಣ ಏನು ಎಂಬುದರ ಬಗ್ಗೆ ರಿವೀಲ್ ಮಾಡಿದ್ದಾರೆ.

ನಟಿ ರೇಣು ದೇಸಾಯಿ ಜಾನಿ ಸಿನೆಮಾದ ಬಳಿಕ ಸಿನೆಮಾಗಳಿಂದ ದೂರವೇ ಉಳಿದರು. ಸುಮಾರು ವರ್ಷಗಳ ಬಳಿಕ ಆಕೆ ರವಿತೇಜ ಅಭಿನಯದ ಟೈಗರ್‍ ನಾಗೇಶ್ವರರಾವ್ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿನೆಮಾದಲ್ಲಿ ರೇಣು ಹೇಮಲತಾ ಲವಣಂ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಶೀಘ್ರದಲ್ಲೇ ತೆರೆಕಾಣಲಿದೆ. ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಸಹ ಹುಟ್ಟಿದ್ದು, ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಜೋರಾಗಿಯೇ ನಡೆಯುತ್ತಿದೆ. ಈ ಪ್ರಮೋಷನ್ ನಿಮಿತ್ತ ರೇಣು ದೇಸಾಯಿ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ಈ ವೇಳೆ ಆಕೆ ಕೆಲವೊಂದು ಎಮೋಷನಲ್ ಕಾಮೆಂಟ್ ಗಳನ್ನು ಮಾಡಿದ್ದಾರೆ. ಆಕೆಯ ಕಾಮೆಂಟ್ ಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಸಂದರ್ಶನದಲ್ಲಿ ಮಾತನಾಡುತ್ತಾ ನಾನು ಹೊಟ್ಟೆಯಲ್ಲಿದ್ದಾಗ ನಮ್ಮ ತಂದೆ ಗಂಡು ಮಗು ಹುಟ್ಟುತ್ತಾರೆ ಎಂದು ತುಂಬಾ ನಿರೀಕ್ಷೆಯಲ್ಲಿದ್ದಾರೆ. ಆದರೆ ಹೆಣ್ಣು ಮಗು ಹುಟ್ಟಿದ ಬಳಿಕ ಆತ ಕೋಪದಲ್ಲಿ ಮೂರು ದಿನಗಳ ಕಾಲ ನನ್ನ ಮುಖ ಸಹ ನೋಡಿಲ್ಲ. ಹೆಣ್ಣು ಮಗು ಹುಟ್ಟಿದೆ ಎಂದು ಸಾಯಿಸದೇ ಬದುಕಿಸಿದ್ದಾರೆ ಆದರೆ ನನ್ನ ಲಾಲನೆ ಪಾಲನೆ ಎಲ್ಲವೂ ಮನೆಯಲ್ಲಿ ಕೆಲಸ ಮಾಡುವವರೇ ನೋಡಿಕೊಂಡರು. ಮದುವೆಯ ಬಳಿಕ ಪವನ್ ಜೊತೆಗೆ ನಾನು ವಿಚ್ಚೇದನ ಪಡೆದುಕೊಂಡೆ. ಬಳಿಕ ಮತ್ತೆ ಮದುವೆಯಾಗಬೇಕೆಂಬ ಉದ್ದೇಶದಿಂದ ಎಂಗೇಜ್ ಮೆಂಟ್ ಸಹ ಮಾಡಿಕೊಂಡೆ ಆದರೆ ಅದು ಮದುವೆಯವರೆಗೂ ಹೋಗಿಲ್ಲ. ಆದರೆ ನಾನು ಮಕ್ಕಳ ಭವಿಷ್ಯತ್ತಿನ ಬಗ್ಗೆ ಯೋಚನೆ ಮಾಡಿ ಅವರ ಜೀವನ ನನ್ನಂತೆ ಆಗಬಾರದೆಂಬ ಉದ್ದೇಶದಿಂದ ಮದುವೆಯಾಗಲಿಲ್ಲ. ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ಮಕ್ಕಳಿಬ್ಬರೂ ಸೆಟಲ್ ಆಗುತ್ತಾರೆ. ಆಗ ಎರಡನೇ ಮದುವೆಯ ಬಗ್ಗೆ ಯೋಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಸದ್ಯ ಆಕೆಯ ಈ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.