ಅನಿರೀಕ್ಷಿತವಾಗಿ ಕೆಲವರು ಜೀವನದಲ್ಲಿ ಬರುತ್ತಾರೆ ಎಂದ ಪವನ್ ಮಾಜಿ ಪತ್ನಿ ರೇಣು ದೇಸಾಯಿ, ವೈರಲ್ ಆದ ಪೋಸ್ಟ್….!

ಸ್ಟಾರ್‍ ನಟ ಪವನ್ ಕಲ್ಯಾಣ್ ರವರ ಮಾಜಿ ಪತ್ನಿ ರೇಣು ದೇಸಾಯಿ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ನಟ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಮದುವೆಯಾಗಿ ವಿಚ್ಚೇದನ ಪಡೆದುಕೊಂಡು ಸದ್ಯ ಆಕೆ ತಮ್ಮ ಮಕ್ಕಳೊಂದಿಗೆ ಇದ್ದಾರೆ.…

ಸ್ಟಾರ್‍ ನಟ ಪವನ್ ಕಲ್ಯಾಣ್ ರವರ ಮಾಜಿ ಪತ್ನಿ ರೇಣು ದೇಸಾಯಿ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ನಟ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಮದುವೆಯಾಗಿ ವಿಚ್ಚೇದನ ಪಡೆದುಕೊಂಡು ಸದ್ಯ ಆಕೆ ತಮ್ಮ ಮಕ್ಕಳೊಂದಿಗೆ ಇದ್ದಾರೆ. ಪವನ್ ಜೊತೆಗೆ ಬೇರೆಯಾದ ಬಳಿಕ ಆಕೆ ಪುಣೆಯಲ್ಲಿ ಮಕ್ಕಳೊಂದಿಗೆ ಸೆಟಲ್ ಆಗಿದ್ದಾರೆ. ಮಕ್ಕಳೊಂದಿಗೆ ಜೀವನ ಕಳೆಯುತ್ತಾ ಸಂತೋಷವಾಗಿದ್ದಾರೆ. ಸದ್ಯ ಆಕೆ ತೆಲುಗು ನಟ ರವಿತೇಜ ಹಿರೋ ಆಗಿ ನಟಿಸುತ್ತಿರುವ ಟೈಗರ್‍ ನಾಗೇಶ್ವರ್‍ ರಾವ್ ಎಂಬ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಇನ್ಸ್ಟಾ ಪೋಸ್ಟ್ ಒಂದು ಸಖತ್ ವೈರಲ್ ಆಗುತ್ತಿದೆ.

ನಟಿ ರೇಣು ದೇಸಾಯಿ ಸಿನೆಮಾಗಳಿಂದ ದೂರವುಳಿದರೂ ಸಹ ಸೋಷಿಯಲ್ ಮಿಡಿಯಾ ಮೂಲಕ ತಮ್ಮ ಅಭಿಮಾನಿಗಳಿಗೆ ಅಪ್ಡೇಟ್ ನೀಡುತ್ತಿರುತ್ತಾರೆ. ಆಕೆ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಆಕೆಯ ಸೋಷಿಯಲ್ ಮಿಡಿಯಾ ವೇದಿಕೆಯಾಗಿ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆಕೆ ಹಂಚಿಕೊಳ್ಳುವ ಪೋಸ್ಟ್ ಗಳಲ್ಲಿ ತುಂಬಾನೆ ಅರ್ಥಗಳು ಅಡಗಿರುತ್ತವೆ. ಈ ಹಾದಿಯಲ್ಲೇ ಆಕೆ ಹಂಚಿಕೊಂಡ ಲೇಟೆಸ್ಟ್ ಪೋಸ್ಟ್ ಒಂದು ಸಖತ್ ವೈರಲ್ ಆಗುತ್ತಿದೆ. ಈ ಪೋಸ್ಟ್ ಮೂಲಕ ಆಕೆ ತುಂಬಾ ಎಮೋಷನಲ್ ಆಗಿದ್ದಾರೆ ಎಂದು ಹೇಳಬಹುದಾಗಿದೆ. ಸುಡು ಬಿಸಿಲಿನಲ್ಲಿ ತಣ್ಣನೆಯ ಮೋಡಗಳಂತೆ ಕೆಲವರು ನಮ್ಮ ಜೀವನದಲ್ಲಿ ಅನಿರೀಕ್ಷಿತವಾಗಿ ಬರುತ್ತಾರೆ. ಅವರ ನೋಟದಲ್ಲೇ ನಮ್ಮನ್ನು ಚುಚ್ಚುತ್ತಾ ನಮ್ಮೊಂದಿಗೆ ಮಾತನಾಡುತ್ತಿರುತ್ತಾರೆ. ಅದೊಂದು ಮೂಕ ಭಾಷೆಯಂತೆ. ಆದರೆ ಅದು ಕೇವಲ ಕೆಲವು ಗಂಟೆಗಳು ಮಾತ್ರ ನಮ್ಮ ಮೇಲೆ ಬೀರುವಂತಹ ಪ್ರಭಾವ ಇಡೀ ಜೀವಮಾನ ಉಳಿಯುತ್ತದೆ. ಆದರೆ ಆ ಪ್ರಯಾಣ ತುಂಬಾ ನೋವಿನಿಂದ ಕೂಡಿರುತ್ತದೆ ಎಂದಿದ್ದಾರೆ.

ಜೊತೆಗೆ ಕೆಲವು ಮಂದಿ ನಮ್ಮ ಜೀವನವನ್ನು ಪರಿಪೂರ್ಣವನ್ನಾಗಿ ಮಾಡಿ ನಮ್ಮ ಕಣ್ಣೀರನ್ನು ಒರೆಸಿ ನಮ್ಮ ಜೀವನದಲ್ಲಿ ಮತಷ್ಟು ಶಾಂತಿಯನ್ನು ಹಂಚುತ್ತಾ ನಮ್ಮನ್ನು ಸಂತೋಷವಾಗಿಡುತ್ತಾರೆ ಎಂದು ಪೋಸ್ಟ್ ಮಾಡಿದ್ದಾರೆ. ಇನ್ನೂ ರೇಣು ದೇಸಾಯಿ ರವರ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಆಕೆ ಪರೋಕ್ಷವಾಗಿ ಪವನ್ ಕಲ್ಯಾಣ್ ತನ್ನ ಜೀವನದಲ್ಲಿ ಬಂದು ಹೋದ ಘಟನೆಯ ಕುರಿತು ಈ ಪೋಸ್ಟ್ ಮಾಡಿದ್ದಾರೆಯೇ ಎಂಬ ಅನುಮಾನಗಳೂ ಸಹ ಮೂಡಿದೆ. ಇನ್ನೂ ರೇಣು ದೇಸಾಯಿ ಏನೇ ಪೋಸ್ಟ್ ಮಾಡಿದರೂ ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತದೆ. ಇನ್ನೂ ಪವನ್ ಕಲ್ಯಾಣ್ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಆಕೆ ಎರಡನೇ ಮದುವೆ ಆಗುತ್ತಾರೆ ಎಂಬ ರೂಮರ್‍ ಸಹ ಕೇಳಿಬಂದಿತ್ತು.

ಎರಡನೇ ಮದುವೆಯ ಬಗ್ಗೆ ಪವನ್ ಕಲ್ಯಾಣ್ ಅಭಿಮಾನಿಗಳು ರೇಣು ದೇಸಾಯಿಗೆ ಸ್ಟ್ರಾಂಗ್ ವಾರ್ನ್ ಕೊಟ್ಟಿದ್ದು, ಬಳಿಕ ಪವನ್ ಅಭಿಮಾನಿಗಳಿಗೆ ರೇಣು ಸಹ ವಾರ್ನ್ ಕೊಟ್ಟಿದ್ದು ಸಹ ನಡೆದಿದೆ. ಇನ್ನೂ ರೇಣು ದೇಸಾಯಿ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ. ಆಕೆ ಟೈಗರ್‍ ನಾಗೇಶ್ವರ್‍ ರಾವ್ ಎಂಬ ಸಿನೆಮಾದಲ್ಲಿ ಪವರ್‍ ಪುಲ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.