Film News

ರಾಮಾಯಣ ಸಿನೆಮಾದಿಂದ ಔಟ್ ಆದ ಸಾಯಿಪಲ್ಲವಿ, ಇನ್ ಆದ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್, ವೈರಲ್ ಆದ ರೂಮರ್…..!

ಇತ್ತೀಚಿಗೆ ಪೌರಾಣಿಕ ಕಥನಗಳನ್ನು ಆಧರಿಸಿ ಸಿನೆಮಾಗಳು ಹೊಸ ರೂಪದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಹಾದಿಯಲ್ಲೇ ಬಾಲಿವುಡ್ ನಲ್ಲೀ ಭಾರಿ ಬಜೆಟ್ ನಲ್ಲಿ ಆದಿಪುರುಷ್ ಎಂಬ ಸಿನೆಮಾ ಸಹ ಇತ್ತೀಚಿಗಷ್ಟೆ ತೆರೆಕಂಡಿತ್ತು. ಈ ಸಿನೆಮಾ ಅಂದುಕೊಂಡಷ್ಟು ಸಕ್ಸಸ್ ಆಗಲಿಲ್ಲ ಎಂದೇ ಹೇಳಬಹುದಾಗಿದೆ. ಸದ್ಯ ಬಾಲಿವುಡ್ ಸ್ಟಾರ್‍ ನಿರ್ದೇಶಕ ನಿತೀರ್ಶ ತಿವಾರಿ ರಾಮಾಯಣ ಕಥವನ್ನು ಆಧರಿಸಿ ಸಿನೆಮಾದ ಮಾಡಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದು, ಈ ಸಿನೆಮಾದ ಆರಂಭವಾಗುವುದಕ್ಕೂ ಮುಂಚೆಯೇ ಭಾರಿ ಸದ್ದು ಮಾಡುತ್ತಿದೆ. ಈ ಸಿನೆಮಾದಲ್ಲಿ ನಟಿಸುವ ಕಲಾವಿದರ ಬಗ್ಗೆ ದಿನಕ್ಕೊಂದು ಸುದ್ದಿ ಕೇಳಿಬರುತ್ತಿದೆ.

ಬಾಲಿವುಡ್ ಖ್ಯಾತ ನಿರ್ದೇಶಕ ನಿತೀಶ್ ತಿವಾರಿ ದಂಗಲ್, ಬವಾಲ್ ಮೊದಲಾದ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡಿದ್ದು, ಸದ್ಯ ರಾಮಾಯಣ ಆಧರಿಸಿ ಸಿನೆಮಾ ಒಂದನ್ನು ಮಾಡಲು ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಸಿನೆಮಾದ ಪಾತ್ರಗಳಿಗಾಗಿ ನಟ-ನಟಿಯರ ಆಯ್ಕೆಯನ್ನು ಸಹ ಮಾಡಲಾಗುತ್ತಿದೆಯಂತೆ. ಈ ಸಿನೆಮಾದಲ್ಲಿ ರಾಮನಾಗಿ ಬಾಲಿವುಡ್ ಸ್ಟಾರ್‍ ರಣಬೀರ್‍ ಕಪೂರ್‍, ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಸಾಯಿ ಪಲ್ಲವಿ ಬದಲು ಬೇರೊಬ್ಬ ನಟಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಸಹ ವೈರಲ್ ಆಗುತ್ತಿದೆ. ಈ ಸಿನೆಮಾದಲ್ಲಿ ಸೀತೆಯ ಪಾತ್ರದ ಬಗ್ಗೆ  ತುಂಬಾನೆ ಚರ್ಚೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ.

ರಾಮಾಯಣ ಸಿನೆಮಾ ಘೋಷಣೆಯಾದಾಗಿನಿಂದ ಒಂದಲ್ಲ ಒಂದು ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ರಣಬೀರ್‍ ಕಪೂರ್‍ ರಾಮನ ಪಾತ್ರದಲ್ಲಿ, ಸೀತೆಯಾಗಿ ಆಲಿಯಾ ಭಟ್ ನಟಿಸಲಿದ್ದಾರೆ ಎನ್ನಲಾಗಿತ್ತು. ಆಲಿಯಾ ಭಟ್ ರವರಿಗೆ ಡೇಟ್ಸ್ ಹೊಂದಾಣಿಕೆಯಾಗದ ಕಾರಣದಿಂದ ಆಲಿಯಾ ಭಟ್ ಒಪ್ಪಿಕೊಳ್ಳಲಿಲ್ಲ ಎನ್ನಲಾಗಿದೆ. ಬಳಿಕ ಸೌತ್ ಸಿನಿರಂಗ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಸೀತೆಯಾಗಿ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಭಾರಿ ಸದ್ದು ಮಾಡಿತ್ತು. ಇದೀಗ ಸೀತೆಯ ಪಾತ್ರದಿಂದ ಸಾಯಿ ಪಲ್ಲವಿ ಸಹ ಹೊರಬಂದಿದ್ದು, ಆ ಸ್ಥಾನದಲ್ಲಿ ಬಾಲಿವುಡ್ ಯಂಗ್ ಬ್ಯೂಟಿ ದಿವಂಗತ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್‍ ಸೀತೆಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಯಾವುದೇ ಅಧಿಕೃತ ಅಪ್ಡೇಟ್ ಮಾತ್ರ ಇಲ್ಲ, ಆದರೆ ಸುದ್ದಿ ಮಾತ್ರ ಭಾರಿ ವೈರಲ್ ಆಗುತ್ತಿದೆ.

Most Popular

To Top