Film News

ತಾರಕರತ್ನ ಮರಣದ ಬಳಿಕ ಸಂಚಲನಾತ್ಮಕ ಪೋಸ್ಟ್, ಅವರು ಪದೇ ಪದೇ ನೋವು ಕೊಟ್ಟರು ಎಂದ ತಾರಕರತ್ನ ಪತ್ನಿ….!

ತೆಲುಗು ಸಿನಿರಂಗದ ನಂದಮೂರಿ ಕುಟುಂಬದ ತಾರಕರತ್ನ ಅನಾರೋಗ್ಯದಿಂದ ಫೆ.18 ರಂದು ಇಹ ಲೋಕ ತ್ಯೆಜಿಸಿದ್ದರು. ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿ ಸುಮಾರು ದಿನಗಳ ಕಾಲ ಚಿಕಿತ್ಸೆಯನ್ನು ಸಹ ಪಡೆದುಕೊಂಡರು. ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಅವರು ಕುಟುಂಬಸ್ಥರು ಸೇರಿದಂತೆ ಅಭಿಮಾನಿಗಳು ಪ್ರಾರ್ಥನೆಗಳನ್ನು ಮಾಡಿದರು. ಆದರೆ ವಿಧಿಯಾಟಕ್ಕೆ ತಾರಕರತ್ನ ದೇವರಲ್ಲಿ ಲೀನರಾದರು. ಇನ್ನೂ ತಾರಕರತ್ನ ಮರಣ ಅವರ ಪತ್ನಿ ಅಲೇಖ್ಯರೆಡ್ಡಿಯನ್ನು ತುಂಬಾನೆ ಕಾಡುತ್ತಿದೆ. ಇದೀಗ ತಾರಕರತ್ನ ಮೃತಪಟ್ಟು ಒಂದು ತಿಂಗಳಾಗಿದ್ದು, ಅಲೆಖ್ಯಾ ಸೋಷಿಯಲ್ ಮಿಡಿಯಾದಲ್ಲಿ ಸಂಚಲನಾತ್ಮಕ ಪೋಸ್ಟ್ ಒಂದನ್ನು ಮಾಡಿದ್ದಾರೆ.

ದಿವಂಗತ ತಾರಕರತ್ನ ಪತ್ನಿ ಅಲೇಖ್ಯಾ ಸೊಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಅಲೇಖ್ಯಾ ಹಾಗೂ ತಾರಕರತ್ನ ನಡುವೆ ಪರಿಚಯ, ಪ್ರೀತಿ, ಮದುವೆಯ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ದೊಡ್ಡವರನ್ನು ಎದುರಿಸಿ ಮದುವೆಯಾದ ಬಳಿಕ ಅಲೇಖ್ಯಾ ಅನುಭವಿಸಿದ ಕಷ್ಟಗಳ ಬಗ್ಗೆ ವಿವರಣೆ ಸಹ ನೀಡಿದ್ದಾರೆ. ನಮ್ಮವರೇ ನನಗೆ ಅನೇಕ ಬಾರಿ ನೋವು ಕೊಟ್ಟರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನಮ್ಮ ಪರಿಚಯ ಪ್ರೀತಿಯಾಗಿ ಬದಲಾಗಿತ್ತು. ನನ್ನ ಮನಸಿನಲ್ಲಿ ಎಲ್ಲೋ ಒಂದು ಕಡೆ ಸಂದಿಗ್ದತೆ ಇತ್ತು. ನೀನು ಮಾತ್ರ ಮದುವೆಯಾಗಬೇಕೆಂಬ ಸ್ಪಷ್ಟತೆಯೊಂದಿಗೆ ಮುಂದೆ ಬಂದೆ. ನಮ್ಮ ಮದುವೆಯ ನಿರ್ಣಯ ಎಲ್ಲರಿಗೂ ದೂರ ಮಾಡಿತ್ತು. ಮಾನಸಿಕ ಒತ್ತಡದ ಜೊತೆಗೆ ಆರ್ಥಿಕ ಸಮಸ್ಯೆಗಳೂ ಸಹ ಬಂತು. ಕೆಲವರ ದ್ವೇಷವನ್ನು ನಾವು ನೋಡಲು ಆಗದೇ ಕಣ್ಣುಗಳಿಗೆ ಬಟ್ಟೆ ಕಟ್ಟುಕೊಂಡೆವು.

ಇನ್ನೂ ಪದೇ ಪದೇ ನಮ್ಮವರೇ ನಮಗೆ ನೋವು ಕೊಟ್ಟರು. ಕುಟುಂಭಕ್ಕೆ ದೂರ ಆದ ಕಾರಣಕ್ಕಾಗಿ ದೊಡ್ಡ ಕುಟುಂಬ ಬೇಕು ಎಂದುಕೊಂಡೆ. ಮಕ್ಕಳು ಹುಟ್ಟಿದ ಬಳಿಕ ಜೀವನ ಬದಲಾಯಿತು. ಸಂತೋಷ ಬಂತು. ನೀನು ರಿಯಲ್ ಹಿರೋ, ಮತ್ತೆ ನಾವು ಭೇಟಿಯಾಗುತ್ತೇವೆ ಎಂದು ಆಶಿಸುತ್ತಿದ್ದೇನೆ ಎಂದು ಭಾವೋದ್ವೇಗದಿಂದ ನೋವನ್ನು ಹೊರಹಾಕಿದ್ದಾರೆ. ಮಾವ ಬಾಲಕೃಷ್ಣ ಹಾಗೂ ದೊಡ್ಡಪ್ಪ ವಿಜಯಸಾಯಿರೆಡ್ಡಿ ರವರಿಗೆ ಕೃತಜ್ಞತೆಗಳನ್ನೂ ಸಹ ತಿಳಿಸಿದ್ದಾರೆ. ಒಂದು ತಿಂಗಳ ಬಳಿಕ ಅಲೇಖ್ಯಾ ಹಂಚಿಕೊಂಡ ಈ ಪೋಸ್ಟ್ ವೈರಲ್ ಆಗುತ್ತಿದೆ.

ಇನ್ನೂ ಅಲೇಖ್ಯಾರೆಡ್ಡಿಯನ್ನು ಮದುವೆಯಾಗಿದ ಕಾರಣದಿಂದ ತಾರಕರತ್ನ ದೊಡ್ಡ ಕುಟುಂಬ ಇದ್ದರೂ ಸಹ ಒಂಟಿಆ=ಯಾಗಬೇಕೆಂಬ ಅರ್ಥದಲ್ಲಿ ಆಕೆ ಪೋಸ್ಟ್ ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ. ತಾರಕರತ್ನ ಜೊತೆಗೆ ಅಲೇಖ್ಯಾಗೆ ಎರಡನೇ ಮದುವೆ. ಕಳೆದ 2012 ರಲ್ಲಿ ಅಲೇಖ್ಯಾ ರೆಡ್ಡಿ ಹಾಗೂ ತಾರಕರತ್ನ ದೇವಾಲಯದಲ್ಲಿ ವಿವಾಹವಾದರು. ಅವರಿಗೆ ಮೂರು ಮಂದಿ ಮಕ್ಕಳಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ. ಈ ಮಕ್ಕಳ ಜವಾಬ್ದಾರಿಯನ್ನು ನಂದಮೂರಿ ಬಾಲಕೃಷ್ಣ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

Most Popular

To Top