Film News

ಹುಟ್ಟುಹಬ್ಬದ ಅಂಗವಾಗಿ 20 ಲಕ್ಷ ವಿರಾಳ ನೀಡಿದ ಸಾಯಿಧರಮ್ ತೇಜ್, ಎಲ್ಲರಿಂದ ಮೆಚ್ಚುಗೆಗೆ ಪಾತ್ರರಾದ ಮೆಗಾ ಹಿರೋ….!

ತೆಲುಗು ಸಿನಿರಂಗದ ಮೆಗಾ ಕುಟುಂಬದ ಸುಪ್ರೀಂ ಹಿರೋ ಸಾಯಿ ಧರಮ್ ತೇಜ್ ಕೆಲವು ತಿಂಗಳುಗಳ ಹಿಂದೆ ಭೀಕರ ಅಪಘಾತಕ್ಕೆ ಗುರಿಯಾಗಿದ್ದರು. ಈ ಅಪಘಾತದಿಂದ ಚೇತರಿಕೆಯಾದ ಬಳಿಕ ಆತ ವಿರೂಪಾಕ್ಷ ಎಂಬ ಸಿನೆಮಾದ ಮೂಲಕ ಸೂಪರ್‍ ಹಿಟ್ ಪಡೆದುಕೊಂಡರು. ಕೊನೆಯದಾಗಿ ಬ್ರೋ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಇದೀಗ ಅವರ ಹುಟ್ಟುಹಬ್ಬದ ಅಂಗವಾಗಿ 20 ಲಕ್ಷ ವಿರಾಳ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮೆಗಾ ಫ್ಯಾಮಿಲಿಯ ನಟ ಸುಪ್ರೀಂ ಹಿರೋ ಸಾಯಿಧರಮ್ ತೇಜ್ ಅ.15 ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಭೀಕರ ಅಫಘಾತದಿಂದ ಚೇತರಿಸಿಕೊಂಡು ಮತ್ತೆ ಹುಟ್ಟಿಬಂದಂತಹ ಸಾಯಿಧರಮ್ ತೇಜ್ ಇದೀಗ ಬ್ಯಾಕ್ ಟು ಬ್ಯಾಖ್ ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ಇದೇ ವರ್ಷದಲ್ಲಿ ವಿರೂಪಾಕ್ಷ ಎಂಬ ಸಿನೆಮಾದ ಮೂಲಕ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡರು. ಬಳಿಕ ಪವನ್ ಕಲ್ಯಾಣ್ ರವರ ಜೊತೆಗೆ ಬ್ರೋ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಸಹ ಒಳ್ಳೆಯ ಸಕ್ಸಸ್ ಕಂಡುಕೊಂಡಿತ್ತು. ಇದೀಗ ಗಾಂಜಾ ಶಂಕರ್‍ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾವನ್ನು ಸಂಪತ್ ನಂದಿ ನಿರ್ದೇಶನದಲ್ಲಿ ಮೂಡಿಬರಲಿದೆ. ಸಾಯಿಧರಮ್ ತೇಜ್ ಹುಟ್ಟುಹಬ್ಬದ ಅಂಗವಾಗಿ ಸಿನೆಮಾದ ಫಸ್ಟ್ ಲುಕ್ ಟೀಸರ್‍ ಬಿಡುಗಡೆಯಾಗಿದೆ.

ಇನ್ನೂ ಸಾಯಿಧರಮ್ ತೇಜ್ ರವರ ಹುಟ್ಟುಹಬ್ಬದ ಅಂಗವಾಗಿ 20 ಲಕ್ಷ ವಿರಾಳ ನೀಡಲಿದ್ದಾರಂತೆ. ಇದರಲ್ಲಿ 10 ಲಕ್ಷ ದೇಶಕ್ಕಾಗಿ ಪ್ರಾಣಬಿಟ್ಟಂತಹ ಸೈನಿಕರ ಪತ್ನಿಯರಿಗೆ ಹಾಗೂ 10 ಲಕ್ಷ ತೆಲಂಗಾಣ ಪೊಲೀಸರ ಕ್ಷೇಮಕ್ಕಾಗಿ ವಿರಾಳವಾಗಿ ನೀಡುವುದಾಗಿ ಪ್ರಕಟಿಸಿದ್ದಾರೆ. ಇನ್ನೂ ನಟನ ಈ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನೂ ಸಾಯಿ ಧರಮ್ ತೇಜ್ ರವರ ಕೆರಿಯರ್‍ ನಲ್ಲಿ ಪಿಲ್ಲಾ ನುವ್ವು ಲೇನಿ ಜೀವಿತಂ, ಸುಪ್ರೀಂ, ಸುಬ್ರಮಣ್ಯಂ ಫಾರ್‍ ಸೇಲ್, ಚಿತ್ರಲಹರಿ, ವಿರೂಪಾಕ್ಷ ಮೊದಲಾದ ಸೂಪರ್‍ ಹಿಟ್ ಸಿನೆಮಾಗಲಿವೆ. ಇದೀಗ ಮಾಸ್ ಆಕ್ಷನ್ ಸಿನೆಮಾ ಆದ ಗಂಜಾ ಶಂಕರ್‍ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಸಹ ಹುಟ್ಟಿದೆ.

Most Popular

To Top