ಮಂಚು ಫ್ಯಾಮಿಲಿಯ ಬಗ್ಗೆ ಆಸಕ್ತಿಕರವಾದ ಕಾಮೆಂಟ್ಸ್ ಮಾಡಿದ ಭೂಮಾ ಮೋನಿಕಾ ರೆಡ್ಡಿ….!

Follow Us :

ತೆಲುಗಿನ ಹೊಸ ಟಾಕ್ ಶೋ ಖ್ಯಾತ ಕಮೆಡಿಯನ್ ವೆನ್ನೆಲ ಕಿಶೋರ್‍ ಹೋಸ್ಟ್ ಮಾಡುವಂತಹ ಅಲಾ ಮೊದಲೈಂದಿ ಶೋ ನಲ್ಲಿ ಮಂಚು ಮನೋಜ್ ಹಾಗೂ ಭೂಮಾ ಮೋನಿಕಾ ರೆಡ್ಡಿ ಅತಿಥಿಗಳಾಗಿ ಹಾಜರಾಗಿದ್ದಾರೆ. ಈ ಶೋ ನಲ್ಲಿ ಮನೋಜ್ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಾನು ಹಾಗೂ ಮೋನಿಕಾ ಲವ್, ಮದುವೆಯ ಬಗ್ಗೆ ಅನೇಕ ವಿಚಾರಗಳನ್ನು ಹೊರಹಾಕಿದ್ದಾರೆ. ಇದೀಗ ಭೂಮಾ ಮೋನಿಕಾ ಸಹ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದು, ಆಕೆಯ ಹೇಳಿಕೆಗಳು ವೈರಲ್ ಆಗುತ್ತಿವೆ.

ಅಲಾ ಮೊದಲೈಂದಿ ಶೋ ನಲ್ಲಿ ಭೂಮಾ ಮೋನಿಕಾ ರೆಡ್ಡಿ ಮಾತನಾಡುತ್ತಾ, ತಂದೆತಾಯಿ ಮರಣ, ರಾಜಕೀಯ, ಜೀವನದಲ್ಲಿ ಎದುರಾದ ಸಮಸ್ಯೆಗಳು, ಮನೋಜ್ ಜೊತೆಗೆ ಮದುವೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ನನ್ನ ತಾಯಿ ಮರಣ, ಮರಣದ ಎರಡೇ ದಿನಗಳಲ್ಲಿ ರೋಡ್ ಕ್ಯಾಂಪೈನ್ ನಲ್ಲಿ ಭಾಗವಹಿಸಬೇಕಾಗಿದ್ದು, ಅಕ್ಕ, ನಾನು, ತಮ್ಮ ಹಾಗೂ ತಂದೆ ಎಲ್ಲರೂ ಪ್ರಜೆಗಳಿಗಾಗಿ ಜೀವನ ಕಳೆದವು. ಚುನಾವಣೆ ಆದ ಕಾರಣ ನಾವು ಏನು ಮಾಡಬೇಕೆಂಬ ಸಮಯದ ಸಹ ಇರಲಿಲ್ಲ. ಬಳಿಕ ನನ್ನ ಸಹೋದರಿ ರಾಜಕೀಯಕ್ಕೆ ಬಂದರು. ನಾನು ನನ್ನ ಜೀವನದಲ್ಲಿ ಸಾಗಿದೆ. ಇದೇ ಸಮಯದಲ್ಲಿ ನನ್ನ ತಂದೆ ನಮ್ಮಿಂದ ದೂರವಾದರು. ಆ ಎರಡು ಸಂಘಟನೆಗಳು ನಮ್ಮ ಜೀವನದಲ್ಲಿ ಇನ್ನೇನು ಉಳಿದಿದೆ ಎಂಬ ಭಾವನೆ ಮೂಡುವಂತೆ ಮಾಡಿತ್ತು. ಕುಟುಂಬದಲ್ಲಿನ ದೊಡ್ಡವರನ್ನು ಕಳೆದುಕೊಂಡೆವು. ಜೀವನ ಶೂನ್ಯ ಎನ್ನಿಸಿತ್ತು. ಇದರ ಜೊತೆಗೆ ನನ್ನ ವೈಯುಕ್ತಿಕ ಸಮಸ್ಯೆಗಳು ಎಲ್ಲವೂ ನನ್ನನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿತ್ತು.

ಇನ್ನೂ ಒಂದು ದಿನ ಮನೋಜ್ ಆಳ್ಳಗಡ್ಡ ಗೆ ಬಂದರು. ಅವರು ಬರುತ್ತಾರೆ ಎಂದು ನನಗೆ ತಿಳಿದಿರಲಿಲ್ಲ. ನನಗೆ ಬೆಂಬಲವಾಗಿ ನಿಂತರು. ಮಾನಸಿಕವಾಗಿ ಹಿಂಸೆ ಪಡುತ್ತಿದ್ದ ನನಗೆ ಮನೋಜ್ ತುಂಬಾನೆ ಸಪೋರ್ಟ್ ಮಾಡಿದ್ದರು. ಮೋಹನ್ ಬಾಬು ರವರು ತುಂಬಾ ಒಳ್ಳೆಯ ವ್ಯಕ್ತಿ. ತುಂಬಾ ಸಂತೋಷದಿಂದ ಇರುತ್ತಾರೆ. ಮದುವೆಗೂ ಮುಂಚೆ ಅವರ ಮನೆಗೆ ಹೋದಾಗ ನನಗೆ ಊಟ ತಿನ್ನಿಸಿದ್ದರು. ನನ್ನನ್ನು ಹಾಗೂ ನನ್ನ ಮಗನನ್ನು ಸ್ವಂತ ವ್ಯಕ್ತಿಗಳಂತೆ ನೋಡಿಕೊಂಡರು. ನಮ್ಮ ತಾಯಿ ಮರಣದ ಬಳಿಕ ಮಂಚು ಕುಟುಂಬದಿಂದ ನನಗೆ ಧೈರ್ಯ ತುಂಬುತ್ತಿದ್ದರು. ಸೊಸೆಯಾಗಿ ಅಲ್ಲದೇ ಮಗಳಾಗಿ ನಮ್ಮ ಕುಟುಂಬಕ್ಕೆ ಬನ್ನಿ ಎಂದು ಆಹ್ವಾನಿಸಿದ್ದರು. ಅಷ್ಟು ನನ್ನ ಜೀವನಕ್ಕೆ ಸಾಕು ಎನ್ನಿಸಿತ್ತು. ಇನ್ನೂ ಲಕ್ಷ್ಮೀ ರವರ ಬಗ್ಗೆ ಸಹ ಹೇಳಬೇಕೆಂದರೇ, ನಮ್ಮಿಬ್ಬರ ನಡುವಣ ರಿಲೇಷನ್ ಶಿಪ್ ಅನ್ನು ಯಾವ ರೀತಿಯಲ್ಲಿ ವರ್ಣಿಸಬೇಕು ಎಂಬುದು ಸಾಧ್ಯವಿಲ್ಲ.

ಲಕ್ಷ್ಮೀ ಹಾಗೂ ನನ್ನ ನಡುವೆ ಒಳ್ಳೆಯ ಅನುಬಂಧವಿದೆ. ನನ್ನ ತಾಯಿಯ ಸ್ಥಾನದಲ್ಲಿ ನಿಂತು ಎಲ್ಲವನ್ನು ನೋಡಿಕೊಂಡಿದ್ದಾರೆ. ಆಕೆ ನನಗೆ ಎಲ್ಲವೂ ಆಗಿದ್ದಾರೆ. ಇನ್ನೂ ಮನೋಜ್ ಸಹ ಮನೆಯಲ್ಲಿ ತುಂಬಾ ಕ್ರಮಶಿಕ್ಷಣದಿಂದ ಇರುತ್ತಾರೆ. ಅಂದುಕೊಂಡಿದ್ದಕ್ಕೂ ಮುಂಚೆಯೇ ಇರುತ್ತಾರೆ. ಅದನ್ನು ಮನೋಜ್ ರಿಂದ ನಾನು ತಿಳಿದುಕೊಂಡೆ ಎಂದಿದ್ದಾರೆ. ಇನ್ನೂ ಭೂಮಾ ಮೋನಿಕಾ ರೆಡ್ಡಿ ನೀಡಿದ ಹೇಳಿಕೆಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.