News

ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ ಮಗಳು ಭಸ್ಮ, ಪತಿಯ ಮುಂದೆಯೇ ಸುಟ್ಟು ಕರಕಲಾದ ಪತ್ನಿ ಮಗಳು…!

ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ಕಾಡುಗೋಡಿಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. 23 ವರ್ಷದ ತಾಯಿ ಹಾಗೂ 9  ತಿಂಗಳ ಕಂದಮ್ಮ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾರೆ. ಮೃತ ದುರ್ದೈವಿಗಳನ್ನು ಸೌಂದರ್ಯ (23) ಹಾಗೂ ಲಿಯಾ (9 months) ಎಂದು ಗುರ್ತಿಸಲಾಗಿದೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಬೆಳಗಿನ ಜಾವ ಸುಮಾರು ಐದು ಗಂಟೆ ಸಮಯದಲ್ಲಿ ಮಗಳ ಜೊತೆಗೆ ಸೌಂದರ್ಯ ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿದ್ದಾರೆ. ಈ ವೇಳೆ ರಸ್ತೆಯಲ್ಲಿ ಕಟ್ ಆಗಿ ಬಿದ್ದಿದ್ದ ವಿದ್ಯುತ್ ತಂತಿಯ ಮೇಲೆ ಕಾಲಿಟ್ಟಿದ್ದಾರೆ. ಇದರ ಪರಿಣಾಮ ಸೌಂದರ್ಯ ಹಾಗೂ ಲಿಯಾ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ. ಈ ಸಮಯದಲ್ಲಿ ಪತಿ ಸಂತೋಷ್ ಸಹ ಜೊತೆಯಲ್ಲೇ ಇದ್ದರೂ ಅವರನ್ನು ಬದುಕಿಸಿಕೊಳ್ಳಲು ಆಗಲಿಲ್ಲ. ರಕ್ಷಣೆಗೆ ಹೋದ ಸಂತೋಷ್ ಗೂ ಸಹ ಕೈ ಸುಟ್ಟಿದೆ. ಕಣ್ಣ ಮುಂದೆಯೇ ಪತ್ನಿ ಹಾಗೂ ಮಗುವನ್ನು ಕಳೆದುಕೊಂಡು ಸಂತೋಷ್ ಕಣ್ಣೀರಾಕುತ್ತಿದ್ದಾರೆ. ಎಕೆ ಗೋಪಾಲ್ ಕಾಲೋನಿಯಲ್ಲಿ ವಾಸವಿರುವ ಸಂತೋಷ್ ಕುಟುಂಬ ಹಬ್ಬಕ್ಕಾಗಿ ಊರಿಗೆ ಹೋಗಿದ್ದರು. ಊರಿನಿಂದ ಮನೆಗೆ ವಾಪಸ್ಸು ತಲುಪುವ ಮೊದಲೇ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.

ಇನ್ನೂ ಈ ಸಂಬಂಧ ಬೆಸ್ಕಾಂ ಇಲಾಖೆಯ ಮೂವರು ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ಮೃತರ ಸಾವಿಗೆ ಬೆಸ್ಕಾಂ ನಿರ್ಲಕ್ಷ್ಯವೇ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 304A ಅಡಿಯಲ್ಲಿ ಎಫ್.ಐ.ಆರ್‍ ದಾಖಲು ಮಾಡಲಾಗಿದೆ. ಇನ್ನೂ ಸೌಂದರ್ಯ ಹಾಗೂ ಲಿಯಾ ರವರುಗಳನ್ನು ಕಳೆದುಕೊಂಡ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಬೆಸ್ಕಾ ವಿರುದ್ದ ಆಕ್ರೋಷ ಹೊರಹಾಕುತ್ತಿದ್ದಾರೆ.

Most Popular

To Top