Film News

ಈ ಬಾರಿ ನಡೆಯುವ ವಾಲ್ಮಿಕಿ ಜಾತ್ರೆಗೆ ನಟ ಕಿಚ್ಚ ಸುದೀಪ್ ರವರಿಗೆ ಆಹ್ವಾನವಿಲ್ಲ, ಜಾತ್ರಾ ಸಮಿತಿಯಿಂದ ಬಂದ ಸ್ಪಷ್ಟನೆ…..!

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಫೆಬ್ರವರಿ 8 & 9 ರಂದು ವಾಲ್ಮೀಕಿ ಜಾತ್ರೆ ನಡೆಯಲಿದ್ದು, ಎರಡು ದಿನಗಳ ಕಾಲ ನಡೆಯುವಂತಹ ಈ ಜಾತ್ರೆಗೆ ಸಕಲ ಸಿದ್ದತೆಗಳು ಬರದಿಂದ ಸಾಗುತ್ತಿದೆ. ಈಗಗಲೇ ಸಮುದಾಯ ಗಣ್ಯರು ಸೇರಿದಂತೆ ಸಮುದಾಯದವರಿಗೂ ಸಹ ಆಹ್ವಾನ ನೀಡಲಾಗಿದೆ. ಆದರೆ ಈ ಬಾರಿ ವಾಲ್ಮೀಕಿ ಸಮುದಾಯದ ನಾಯಕ ನಟ ಕಿಚ್ಚ ಸುದೀಪ್ ರವರಿಗೆ ಆಹ್ವಾನ ನೀಡಿಲ್ಲ. ಅದಕ್ಕೆ ಕಾರಣವನ್ನು ಸಹ ಜಾತ್ರಾ ಸಮಿತಿ ನೀಡಿದೆ.

ಪ್ರತಿ ವರ್ಷದಂತೆ ಈ ಭಾರಿ ಸಹ ದಾವಣಗೆರೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದ ಆವರಣದಲ್ಲಿ ವಾಲ್ಮೀಕಿ ಜಾತ್ರಾ ಮಹೋತ್ಸವ ನಡೆಸಲು ಸಕಲ ಸಿದ್ದತೆಗಳು ನಡೆಯುತ್ತಿವೆ. ಹಿಂದೆ ನಡೆದಂತಹ ವಾಲ್ಮೀಕಿ ಜಾತ್ರೆಗೆ ಸ್ಯಾಂಡಲ್ ವುಡ್ ಸ್ಟಾರ್‍ ನಟ ಕಿಚ್ಚ ಸುದೀಪ್ ಸಹ ಜಾತ್ರೆಯಲ್ಲಿ ಭಾಗವಹಿಸಿರಲಿಲ್ಲ. ಸುದೀಪ್ ರನ್ನು ನೋಡಲು ನೂಕು ನುಗ್ಗಲು, ಗದ್ದಲ ಏರ್ಪಟ್ಟಿದ್ದು, ಸುದೀಪ್ ಬರ್ತಾರೆ ಬರ್ತಾರೆ ಎಂದು ಹೇಳುತ್ತಲೇ ಜಾತ್ರೆ ಮುಕ್ತಾಯವಾಗಿದೆ. ತಮ್ಮ ಸಮಾಜದ ದೊಡ್ಡ ನಾಯಕನನ್ನು ನೋಡಲು ಜನಸಾಗರವೇ ಜಮಾಯಿಸುತ್ತದೆ. ಆದ್ದರಿಂದ ಗಲಾಟೆ ಗೊಂದಲಗಳಿಂದ ಪಾರಾಗುವ ನಿಟ್ಟಿನಲ್ಲಿ ಜಾತ್ರಾ ಕಮಿಟಿ ಸುದೀಪ್ ರವರಿಗೆ ಆಹ್ವಾನ ನೀಡದೇ ಇರಲು ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗಿದೆ.

ಕಳೆದ ವರ್ಷ ಆಯೋಜಿಸಿದ್ದ ವಾಲ್ಮೀಕಿ ಜಾತ್ರೆಯಂದು ಕಿಚ್ಚ ಸುದೀಪ್ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದು ಹೇಳಲಾಗಿತ್ತು. ಕಾರ್ಯಕ್ರಮದಲ್ಲಿ ಸುದೀಪ್ ಬರುತ್ತಾರೆ ಬರುತ್ತಾರೆ ಎಂದು ಹೇಳುತ್ತಿದ್ದರು. ಆದರೆ ಕೊನೆಗೆ ಸುದೀಪ್ ಬರೊಲ್ಲ ಎಂದ ಕೂಡಲೇ ಅವರ ಅಭಿಮಾನಿಗಳು ಚೇರ್‍ ಗಳನ್ನು ಮುರಿದು ಆಕ್ರೋಷ ಹೊರಹಾಕಿದ್ದರು. ಈ ಹಿಂದೆ ಸಹ ಸುದೀಪ್ ಬಂದಾಗ ಅಭಿಮಾನಿಗಳು ವೇದಿಕೆಗೆ ನುಗ್ಗಿದ್ದರು. ಆಗ ಅಲ್ಲಿದ್ದ ಹಿರಿಯರು ಹಾಗೂ ಮಕ್ಕಳಿಗೆ ಗಾಯಗಳಾಗಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಈ ಬಾರಿ ನಡೆಯುವಂತಹ ವಾಲ್ಮೀಕಿ ಜಾತ್ರೆಗೆ ಕಿಚ್ಚ ಸುದೀಪ್ ರವರನ್ನು ಕರೆಸದಿರಲು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ತಿಳಿಸಿದ್ದಾರೆ ಎನ್ನಲಾಗಿದೆ.

Most Popular

To Top