News

ಪತ್ನಿಗೆ ರೀಲ್ಸ್ ಮಾಡುವ ಹುಚ್ಚು, ಬೇಸತ್ತ ಪತಿ ಆಕೆಯನ್ನು ಕೊಲೆಗೈದು ನದಿಗೆಸೆದ…!

ಮೊಬೈಲ್ ಹಾಗೂ ಸೋಷಿಯಲ್ ಮಿಡಿಯಾ ಹುಚ್ಚಿನಿಂದ ಅನೇಕರು ಈಗಾಗಲೇ ಪ್ರಾಣವನ್ನು ತೆಗೆದುಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದ ಮೇಲೆ ಅತಿಯಾದ ಅವಲಂಬನೆ, ಮೋಜಿನಿಂದ ಅನೇಕರು ಇಹಲೋಕ ತ್ಯೆಜಿಸಿದ್ದಾರೆ. ಇದೀಗ ಪತ್ನಿಯ ರೀಲ್ಸ್ ಮಾಡುವ ಹುಚ್ಚಿನಿಂದಾಗಿ ಬೇಸತ್ತ ಪತಿ ಆಕೆಯನ್ನು ಕೊಂದು ನದಿಗೆಸೆದ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಂಡ್ಯಕೊಪ್ಪಲು ಎಂಬಲ್ಲಿ ಈ ಘಟನೆ ನಡೆದಿದೆ. ಮೃತಳನ್ನು ಪೂಜಾ (26) ಎಂದು ಗುರ್ತಿಸಲಾಗಿದೆ. ಆಕೆಯ ಪತಿ ಶ್ರೀನಾಥ್ ವೇಲ್ ನಿಂದ ಆಕೆಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಇನ್ಸ್ಟಾಗ್ರಾಂ ನಲ್ಲಿ ರೀಲ್ಸ್ ಮಾಡುವ ಹುಚ್ಚನ್ನು ಹತ್ತಿಸಿಕೊಂಡ ಪತ್ನಿಯನ್ನು ಪತಿ ಕೊಲೆಗೈದಿದ್ದಾನೆ. ರೀಲ್ಸ್ ಮಾಡುತ್ತಾ ಇನ್ಸ್ಟಾ ಸ್ನೇಹಿತರೊಂದಿಗೆ ಚಾಟಿಂಗ್ ಸಹ ಮಾಡುತ್ತಿದ್ದಳಂತೆ.  ಆಕೆಯ ಅತಿಯಾದ ಮೊಬೈಲ್ ಗೀಳು ಹಾಗೂ ರೀಲ್ಸ್ ಹುಚ್ಚನ್ನು ನೋಡಿ ಗಂಡನಿಗೆ ಅನುಮಾನ ಸಹ ಶುರುವಾಗಿದೆ. ಬೇರೆ ಪುರುಷನೊಂದಿಗೆ ಅನೈತಿಕ ಸಂಬಂಧ ಸಹ ಹೊಂದಿರುವ ಶಂಕೆ ವ್ಯಕ್ತಪಡಿಸಿದ ಆತ ಆಕೆಯನ್ನು ಕೊಲೆ ಮಾಡಿದ್ದಾನೆ.

ಇನ್ನೂ ಕೊಲೆ ಮಾಡಿ ಮೂರು ದಿನ ಕಳೆದ ಬಳಿಕ 102 ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಶ್ರೀನಾಥ್ ಹಾಗೂ ಪೂಜಾ 9 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆರಂಭದಲ್ಲಿ ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದರು. ಈ ಜೋಡಿಗೆ ಒಂದು ಹೆಣ್ಣು ಮಗು ಸಹ ಇದೆ. ಇನ್ನೂ ಪೂಜಾಗೆ ಮೊದಲಿನಿಂದಲೂ ಟಿಕ್ ಟಾಕ್, ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುವ ಅಭ್ಯಾಸ ಹೆಚ್ಚಾಗಿತ್ತು. ಇದರ ಜೊತೆಗೆ ಅತಿಯಾಗಿ ಪೋನ್ ಸಹ ಬಳಕೆ ಮಾಡುತ್ತಿದ್ದರು. ಈ ಕಾರಣದಿಂದ ಆಗಾಗ ಗಂಡ-ಹೆಂಡತಿ ನಡುವೆ ಜಗಳಗಳು ಸಹ ನಡೆದಿದೆ ಎಂದು ತಿಳಿದುಬಂದಿದೆ. ಅಷ್ಟೇಅಲ್ಲದೇ ಆಕೆಗೆ ಪರಪುರುಷನೊಂದಿಗೆ ಸಂಬಂಧ ಸಹ ಇದೆಯೆಂದು ಜಗಳ ಮಾಡುತ್ತಿದ್ದನಂತೆ. ಈ ಕಾರಣದಿಂದ ಬೇಸತ್ತ ಶ್ರೀನಾಥ್ ಆಕೆಯನ್ನು ವೇಲ್ ನಿಂದ ಬಿಗಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಇನ್ನೂ ಪತ್ನಿಯನ್ನು ಶವ ಸಾಗಿಸಲು ಆಲಿಯನೇ ಆತನ ಮಾವ ಸಹಾಯ ಮಾಡಿದ್ದಾನೆ. ಅಳಿಯ ಹಾಗೂ ಮಾವ ಇಬ್ಬರೂ ಸೇರಿ ಶವವನ್ನು ಕಾವೇರಿ ನದಿಗೆ ಎಸೆದಿದ್ದಾರೆ. ಇನ್ನೂ ಮಗಳನ್ನು ಕೊಲೆ ಮಾಡಿದ ಬಗ್ಗೆ ಶ್ರೀನಾಥ್ ಮಾನ ಶೇಖರ್‍ ಎಂಬುವವರಿಗೆ ತಿಳಿಸಿದ್ದಾರೆ. ಶೇಖರ್‍ ತನ್ನ ಮಗಳ ಕೊಲೆ ಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೇ ಅಳಿಯನಿಗೆ ಸಾಥ್ ನೀಡಿದ್ದಾರೆ. ಬೈಕ್ ನಲ್ಲಿಯೇ ಶವವನ್ನು ಸಾಗಿಸಿ ದೇಹಕ್ಕೆ ಭಾರವಾದ ಕಲ್ಲನ್ನು ಕಟ್ಟಿ ನದಿಗೆ ಎಸೆದಿದ್ದಾರೆ. ಇನ್ನೂ ಇಬ್ಬರನ್ನೂ ನ್ಯಾಯಾಂಗ ಬಂಧನದಲ್ಲಿರಿಸಿದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.

Most Popular

To Top