Film News

ಅನ್ ಸ್ಟಾಪಬುಲ್ ಶೋ ನಲ್ಲಿ ಕಣ್ಣೀರಿಟ್ಟ ನಿರ್ದೇಶಕ ಗೋಪಿಚಂದ್, ಕ್ರಾಕ್ ಸಿನೆಮಾಗೂ ಮುಂದೆ ತುಂಬಾ ಕಷ್ಟಪಟ್ಟಿದ್ದರಂತೆ ಗೋಪಿಚಂದ್…!

ತೆಲುಗು ಶೋಗಳಲ್ಲಿ ಇತ್ತೀಚಿಗೆ ತುಂಬಾನೆ ಖ್ಯಾತಿ ಪಡೆದುಕೊಂಡ ಶೋಗಳಲ್ಲಿ ನಂದಮೂರಿ ಬಾಲಕೃಷ್ಣ ಹೋಸ್ಟ್ ಮಾಡುವ ಅನ್ ಸ್ಟಾಪಬುಲ್ ವಿತ್ ಎನ್.ಬಿ.ಕೆ ಶೋ ಒಂದಾಗಿದೆ. ಈ ಶೋ ನಲ್ಲಿ ಅನೇಕ ಸ್ಟಾರ್‍ ಸೆಲೆಬ್ರೆಟಿಗಳು ಬರುತ್ತಿರುತ್ತಾರೆ. ಅವರ ವೈಯುಕ್ತಿಕ ವಿಚಾರಗಳೂ ಸಹ ರಿವೀಲ್ ಆಗುತ್ತಿರುತ್ತದೆ. ಇದೀಗ ಗೋಪಿಚಂದ್ ಮಲ್ಲಿನೇನಿ ನಿರ್ದೇಶನದ ವೀರಸಿಂಹಾರೆಡ್ಡಿ ಸಿನೆಮಾದ ತಂಡ ಈ ಶೋನಲ್ಲಿ ಭಾಗಿಯಾಗಿತ್ತು. ಈ ವೇಳೆ ನಿರ್ದೇಶಕ ಗೋಪಿಚಂದ್ ಹಳೇಯ ಕಷ್ಟಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ತೆಲುಗು ಸ್ಟಾರ್‍ ನಟ ನಂದಮೂರಿ ಬಾಲಕೃಷ್ಣ ಹೋಸ್ಟ್ ಮಾಡುತ್ತಿರುವ ಅನ್ ಸ್ಟಾಪಬುಲ್ ಶೋ ಬ್ಲಾಕ್ ಬ್ಲಸ್ಟರ್‍ ಶೋ ಆಗಿ ಸಾಗುತ್ತಿದೆ. ಬಾಲಕೃಷ್ಣ ಅಭಿನಯದ ವೀರಸಿಂಹರೆಡ್ಡಿ ಪ್ರಮೋಷನ್ ನಿಮಿತ್ತ ಈ ಶೋಗೆ ಚಿತ್ರತಂಡ ಹಾಜರಾಗಿತ್ತು. ನಿರ್ದೇಶಕ ಗೋಪಿಚಂದ್ ಮಲ್ಲಿನೇನಿ, ವರಲಕ್ಷ್ಮೀ ಶರತ್ ಕುಮಾರ್‍, ದುನಿಯಾ ವಿಜಯ್, ಮೈತ್ರಿ ಬ್ಯಾನರ್‍ ನ ನಿರ್ಮಾಪಕ ನವೀನ್ ಸೇರಿದಂತೆ ಮತ್ತೆ ಕೆಲವರು ಈ ಶೋನಲ್ಲಿ ಭಾಗಿಯಾಗಿದ್ದರು.ಈ ಶೋ ನಲ್ಲಿ ಬಾಲಕೃಷ್ಣ ನಿರ್ದೇಶಕ ಗೋಪಿಚಂದ್ ಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ. ಅನೇಕ ಪ್ರಶ್ನೆಗಳನ್ನು ನೇರವಾಗಿ ಕೇಳಿದ್ದಾರೆ. ಬಾಲಕೃಷ್ಣ ಸಿನೆಮಾದಲ್ಲಿ ವರಾ ವಿಲನ್ ಅಥವಾ ವರಾ ವಿಲನ್ ಆಗಿ ನಟಿಸಿದ ಸಿನೆಮಾದಲ್ಲಿ ಬಾಲಕೃಷ್ಣ ಹಿರೋನಾ ಎಂದು ಕೇಳಿದ್ದಾರೆ. ಈ ವೇಳೆ ವರಲಕ್ಷ್ಮೀ ಉತ್ತರಿಸುತ್ತಾ ನಾನೆ ತುಂಬಾ ಹೈಪರ್‍ ಆಗಿ ಇರುತ್ತೇನೆ ಎಂದುಕೊಂಡಿದ್ದೇನೆ. ಆದರೆ ನೀವು ನನಗಿಂತ ಹೈಪರ್‍ ಆಗಿದ್ದೀರಾ ಎಂದು ಹೇಳಿದ್ದಾರೆ.

ಬಳಿಕ ಬಾಲಕೃಷ್ಣ ಮಾಸ್ ಮಹಾರಾಜ ರವಿತೇಜ ಗೆ ಕರೆ ಮಾಡಿ ನೂರು ಕೋಟಿಯ ಹಿರೋಗೆ ಕಂಗ್ರಾಜುಲೇಷನ್ಸ್ ಎಂದು ವಿಶ್ ಮಾಡಿದರು. ಥಾಂಕ್ಯೂ ತಮ್ಮ ಎಂದು ರವಿತೇಜಾ ಕಾಮಿಡಿಯಿಂದ ಉತ್ತರಿಸಿದ್ದಾರೆ. ಇನ್ನೂ ಇದು ಔಟ್ ಆಫ್ ಸಿಲಿಬಸ್ ಪ್ರಶ್ನೆ ಎಂದು ಕ್ರಾಕ್ ಸಿನೆಮಾಗಿಂತ ಮುಂಚೆ ಒಂದೂವರೆ ವರ್ಷ ತುಂಬಾ ಕಷ್ಟಗಳನ್ನು ಪಟ್ಟೆ, ಆಸ್ತಿಗಳನ್ನೂ ಸಹ ಮಾಡಿಕೊಂಡೆ ಆ ಸಮಯದಲ್ಲಿ ಹೇಗೆ ಅನ್ನಿಸಿತ್ತು ಎಂದು ಗೋಪಿಚಂದ್ ಗೆ ಬಾಲಕೃಷ್ಣ ಪ್ರಶ್ನೆ ಮಾಡಿದರು.  ಈ ಸಮಯದಲ್ಲಿ ಗೋಪಿಚಂದ್ ಒಂದೇ ಸಾರಿ ಎಮೋಷನಲ್ ಆಗಿಬಿಟ್ಟರು. ಪಕ್ಕದಲ್ಲಿದ್ದ ವರಲಕ್ಷ್ಮೀ ಆತನನ್ನು ಸಂತೈಸಿದರು. ಸದ್ಯ ಈ ಶೋ ನ ಪ್ರಮೋ ಬಿಡುಗಡೆಯಾಗಿದ್ದು, ಜನವರಿ 13 ರಂದು ಈ ಶೋ ಸ್ಟ್ರೀಮಿಂಗ್ ಆಗಲಿದೆ. ಇದೀಗ ಬಿಡುಗಡೆಯಾದ ಪ್ರಮೋ ವೈರಲ್ ಆಗುತ್ತಿದೆ.

ಇನ್ನೂ ನಂದಮೂರಿ ಬಾಲಕೃಷ್ಣ ರವರ ಅಖಂಡ ಸಿನೆಮಾದ ಬಳಿಕ ತೆರೆಗೆ ಬರಲಿರುವ ವೀರಸಿಂಹಾರೆಡ್ಡಿ ಸಿನೆಮಾ ಈಗಾಗಲೇ ತುಂಬಾ ನಿರೀಕ್ಷೆಯನ್ನು ಹುಟ್ಟಿಸಿದೆ. ಈ ಸಿನೆಮಾ ಜನವರಿ 12 ರಂದು ತೆರೆಗೆ ಬರಲಿದೆ. ಪ್ರಮೋಷನ್ ಸಹ ಭರದಿಂದ ನಡೆದಿದೆ. ಈ ಸಿನೆಮಾ ಸಹ ಬಾಲಕೃಷ್ಣ ರವರಿಗೆ ಬ್ಲಾಕ್ ಬ್ಲಸ್ಟರ್‍ ಹಿಟ್ ಕೊಡಲಿದೆ ಎಂದು ಹೇಳಲಾಗುತ್ತಿದೆ.

Most Popular

To Top