News

ದಲಿತ ಯುವತಿಯ ಮೇಲೆ ಚಲಿಸುತ್ತಿದ್ದ ಬಸ್ ನಲ್ಲಿ ಸಾಮೂಹಿಕ ಅತ್ಯಾಚಾರ…….!

ದೇಶದಲ್ಲಿ ಅತ್ಯಾಚಾರಿಗಳಿಗೆ ಕಠಿಣ ಕಾನೂನು ಗಳು ಜಾರಿಯಲ್ಲಿದ್ದರೂ ಸಹ ಅತ್ಯಾಚಾರದಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಪುಟಾಣಿ ಮಕ್ಕಳಿಂದ ವಯೊವೃದ್ದರ ವರೆಗೂ ಅದು ಸಾಲದು ಎಂಬಂತೆ ಮೃತ ದೇಹಗಳನ್ನು ಬಿಡದ ಅನೇಕ ಕಾಮುಕರು ನಮ್ಮ ಸಮಾಜದಲ್ಲಿದ್ದಾರೆ. ಉತ್ತರ ಪ್ರದೇಶದಿಂದ ಜೈಪುರಕ್ಕೆ ಚಲಿಸುತ್ತಿದ್ದ ಬಸ್ ನಲ್ಲಿ 20 ವರ್ಷದ ದಲಿತ ಯುವತಿಯ ಮೇಲೆ ಇಬ್ಬರು ಚಾಲಕರು ಸಾಮೂಹಿಕ ಅತ್ಯಾಚಾರ ವೆಸಗಿದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಕಳೆದ ಡಿ.9 ರಂದು ಮಧ್ಯರಾತ್ರಿ ಖಾಸಗಿ ಬಸ್ ಒಂದು ಉತ್ತರ ಪ್ರದೇಶದಿಂದ ಜೈಪುರದಿಂದ ತೆರಳುತ್ತಿದ್ದಾಗ ಸಮಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಾನ್ಪುರದಿಂದ ಜೈಪುರಕ್ಕೆ ಪ್ರಯಾಣಿಸುತ್ತಿದ್ದಂತಹ ಸಂತ್ರಸ್ತೆ ಕ್ಯಾಬಿನ್ ನಲ್ಲಿ ಕುಳಿತಿದ್ದಳು. ಕ್ಯಾಬಿನ್ ನೊಳಗೆ ಆರಿಫ್ ಹಾಗೂ ಲಲಿತ್ ಎಂಬ ಆರೋಪಿಗಳು ಚಾಲಕರಾಗಿದ್ದು, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಆರೋಪಿಯಾದ ಆರೀಫ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಇನ್ನೋಬ್ಬ ಆರೋಪಿ ಲಲಿತ್ ತಲೆಮೆರೆಸಿಕೊಂಡಿದ್ದು, ಆರೋಪಿ ಬಂಧನಕ್ಕಾಗಿ ಬಲೆ ಬೀಸಲಾಗಿದೆ ಎಂದು ತಿಳಿದುಬಂದಿದೆ.

ಇನ್ನೂ ಸಂತ್ರಸ್ತೆ ಕ್ಯಾಬಿನ್ ನಲ್ಲಿದ್ದಾಗ ಬಸ್ ನೊಳಗೆ ಇತರೆ ಪ್ರಯಾಣಿಕರು ಸಹ ಇದ್ದರು. ಆದರೆ ಕ್ಯಾಬಿನ್ ಅನ್ನು ಒಳಗಡೆಯಿಂದ ಲಾಕ್ ಮಾಡಲಾಗಿತ್ತು ಎನ್ನಲಾಗಿದೆ. ಇದೇ ಸಮಯದಲ್ಲಿ ಆರೋಪಿಗಳಿಬ್ಬರು ದಲಿತ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಬಳಿಕ ಸಂತ್ರಸ್ತೆ ಎಮರ್ಜೆನ್ಸಿ ಅಲಾರಾಂ ಒತ್ತಿದ್ದಾಳೆ. ಇದರಿಂದ ಎಚ್ಚೆತ್ತುಕೊಂಡ ಪ್ರಯಾಣಿಕರು ಬಸ್ ನಿಲ್ಲಿಸಿ ಆರಿಫ್ ಎಂಬಾತನನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಲಲಿತ್ ಎಸ್ಕೇಪ್ ಆಗಿದ್ದು, ಆರೋಪಿಯ ಬಂದನಕ್ಕೆ ಬಲೆ ಬೀಸಲಾಗಿದೆ.

Most Popular

To Top