ಕರ್ನಾಟಕದ ಶಿವಮೊಗ್ಗದಲ್ಲಿ ಈದ್ ಮಿಲಾದ್ ಹಬ್ಬದ ಮೆರವಣಿಗೆಯ ವೇಳೆ ನಡೆದ ಅವಾಂತರಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ವಿಡಿಯೋ ಒಂದನ್ನು ಹಂಚಿಕೊಂಡಿದೆ. ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ತಲ್ವಾರ್ ಗಳು, ಚಾಕು, ಚೂರಿ ಸೇರಿದಂತೆ ಹಲವು ಆಯುಧಗಳನ್ನು ಹಿಡಿದು ಮೆರವಣಿಗೆ ಮಾಡಿದ ವಿಡಿಯೋ ಹಂಚಿಕೊಂಡಿದೆ.
ಬಿಜೆಪಿ ಕರ್ನಾಟಕ ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಬಿಡುಗಡೆಯಾಗಿದೆ. ಶಿವಮೊಗ್ಗದಲ್ಲಿ ಜಿಹಾದಿಗಳು ಕತ್ತಿ ಹಾಗೂ ಆಯುಧಗಳನ್ನು ಹಿಡಿದು ಸೆಕ್ಯುಲರ್ ಆಗಿ ಓಡಾಟ ಮಾಡುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ತಲೆಮರೆಸಿಕೊಂಡಿದ್ದಾರೆ. ಜೊತೆಗೆ ಕಾಂಗ್ರೇಸ್ ಸರ್ಕಾರ ಪುನಃ ಅಧಿಕಾರಕ್ಕೆ ಬಂದಿದ್ದು, ಯಾವುದೇ ಕ್ರಮದ ಭಯವಿಲ್ಲದೇ ಹಿಂದೂಗಳನ್ನು ಭಯಪಡಿಸಲು ಜಿಹಾದಿ ಸಂಘಟನೆಗಳು ಕಾಯುತ್ತಿವೆ. ಕಾಂಗ್ರೇಸ್ ಪಕ್ಷ ಜಿಹಾದಿಗಳಿಗೆ ಶರಣಾಗಿದೆ. ಕಾಂಗ್ರೇಸ್ ಸರ್ಕಾರ ಜಿಹಾದಿ ಸರ್ಕಾರ ಎಂದು ಕಾಮೆಂಟ್ ಮಾಡಿ ವಿಡಿಯೋ ಹಂಚಿಕೊಂಡಿದ್ದಾರೆ.
Jihadis run amok on the streets of Shivamogga, brandishing swords & weapons, while 'secular' @siddaramaiah has gone into hiding.
With @INCKarnataka govt back in power, Jihadi organisations have emerged from hiding to terrorise Hindus with no fear of action. INC has surrendered… pic.twitter.com/0AI01VZ8GX
— BJP Karnataka (@BJP4Karnataka) October 2, 2023
ಕೆಲ ಮತಾಂಧರು ತಲ್ವಾರ್ ಹಿಡಿದು ಮೆರವಣಿಗೆ ಮಾಡಿದ್ದಾರೆ. ಅಂತಹ ತಲ್ವಾರ್ ಮೆರವಣಿಗೆಯು ಸಮಾಜಕ್ಕೆ ಎಂತಹ ಸಂದೇಶ ನೀಡುತ್ತದೆ ಎಂಬುದನ್ನು ಮೆರವಣಿಗೆ ಅನುಮತಿ ನೀಡಿದ ಕಾಂಗ್ರೇಸ್ ಸರ್ಕಾರ ತಿಳಿಸಬೇಕು. ಹಿಂದೂಗಳನ್ನು ಮುಗಿಸುತ್ತೇವೆ ಎಂದು ಹೇಳಿದಂತಹ ಜಿಹಾದಿಗಳಿಗೆ ಬೆಂಬಲವಾಗಿ ಕಾಂಗ್ರೇಸ್ ಸರ್ಕಾರ ನಿಂತಿದೆ ಎಂಬುದನ್ನು ಇದೊಂದು ಸಾಕ್ಷಿಯಾಗಿದೆ. ಗಣೇಶ ಉತ್ಸವಕ್ಕೆ ಹಿಂದೂಗಳಿಗೆ ನೂರೆಂಟು ಅನುಮತಿ ಕೇಳುವ ಸರ್ಕಾರ ಸಮಾಜದಲ್ಲಿ ಶಾಂತಿ ಕದಡುವಂತಹ ಮೆರವಣಿಗೆಗೆ ಅನುಮತಿ ನೀಡುವ ಹಿಂದಿನ ಉದ್ದೇಶವಾದರು ಏನು ಎಂದು ಬಿಜೆಪಿ ಆಕ್ರೋಷ ಹೊರಹಾಕಿದೆ.
ಇನ್ನೂ ಈ ಬಗ್ಗೆ ಕರ್ನಾಟಕ ಗೃಹ ಸಚಿವ ಜಿ.ಪರಮೇಶ್ವರ್ ಮಾತನಾಡಿ ಇದೊಂದು ಸಣ್ಣ ಗಲಾಟೆ ಅಷ್ಟೆ. ಪೊಲೀಸರು ದೊಡ್ಡ ಮಟ್ಟದ ಗಲಾಟೆ ನಡೆಯದಂತೆ ತಪ್ಪಿಸಿದ್ದಾರೆ. ಎರಡೂ ಗುಂಪಿನ ಜನರನ್ನು ಬಂಧಿಸಿದ್ದಾರೆ. ಶಿವಮೊಗ್ಗ ಘಟನೆಗೆ ಕಾರಣ ಏನು ಎಂಬುದನ್ನು ಇದೀಗ ಬಹಿರಂಗಗೊಳಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಎಲ್ಲೂ ಅಹಿತಕರ ಘಟನೆ ನಡೆಯಲು ಬಿಡೊಲ್ಲ. ಯಾರಾದರೂ ಅಹಿತಕರ ಘಟನೆಗಳಿಗೆ ಕಾರಣವಾದರೇ ಅವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.