News

ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಕಾಳಿ ಮಾತೆಗೆ ತನ್ನ ಬೆರಳನ್ನು ಅರ್ಪಿಸಿದ ಅಭಿಮಾನಿ….!

ಸಿನೆಮಾ ಸೆಲೆಬ್ರೆಟಿಗಳಂತೆ ರಾಜಕೀಯ ನಾಯಕರಿಗೂ ಸಹ ಅಭಿಮಾನಿಗಳಿರುತ್ತಾರೆ. ಅವರಿಗಾಗಿ ಏನು ಬೇಕಾದರೂ ಮಾಡುವಂತ ಅಭಿಮಾನಿಗಳೂ ಸಹ ಇರುತ್ತುತ್ತಾರೆ. ಇದೀಗ ಕರ್ನಾಟಕದ ಕಾರವಾರದ ವ್ಯಕ್ತಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಕಾಳಿ ಮಾತೆಗೆ ತನ್ನ ಬೆರಳನ್ನು ಕಟ್ ಮಾಡಿ ನೀಡಿದ್ದಾನೆ.

ಕರ್ನಾಟಕ ರಾಜ್ಯದ ಕಾರವಾರದ ಸೋನಾರವಾಡದ ನಿವಾಸಿ ಅರುಣ್ ವರ್ಣೇಕರ್ ಪ್ರಧಾನಿ ಮೋದಿಯವರ ಅಭಿಮಾನಿಯಾಗಿದ್ದಾರೆ. ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ತನ್ನ ಎಡಗೈನ ಬೆರಳನ್ನು ಕಾಳಿ ಮಾತೆಗೆ ಅರ್ಪಿಸಿದ್ದಾನೆ. ಈಗಾಗಲೇ ಅರುಣ್ ಮೋದಿಗಾಗಿ ಗುಡಿಯೊಂದನ್ನು ನಿರ್ಮಾಣ ಮಾಡಿ ಪೂಜೆ ಮಾಡುತ್ತಿದ್ದಾರೆ. ಬೆರಳನ್ನು ಕತ್ತರಿಸಿಕೊಂಡು ರಕ್ತದಲ್ಲಿ ಮಾ ಕಾಳಿಮಾತಾ ಮೋದಿ ಬಾಬಾಕೋ ರಕ್ಷಾ ಕರೋ, ಮೋದಿ ಬಾಬಾ ಪಿಎಂ, 3 ಬಾರ್ 78 ತಕ್ 378, 378+ ಮೇರಾ ಮೋದಿ ಬಾಬಾ ಸಬ್ಸೆ ಮಹಾನ್ ಎಂದು ಪೋಸ್ಟರ್ ನಲ್ಲಿ ಹಾಗೂ ಗೋಡೆಯ ಮೇಲೆ ಬರೆದಿದ್ದಾನೆ.

ಇನ್ನೂ ಇದೇ ವ್ಯಕ್ತಿ ಮೋದಿ ಮೊದಲ ಬಾರಿಗೆ ಚುನಾವಣೆಗೆ ನಿಂತಾಗ ರಕ್ತದಲ್ಲಿ ಕಾಳಿ ಮಾತೆಗೆ ಹರಕೆ ಕಟ್ಟಿದ್ದರು. ಈ ಹಿಂದೆಯೂ ಸಹ ಬೆರಳು ಕೊಯ್ದುಕೊಂಡು ಮೋದಿ ಗೆಲ್ಲಬೇಕೆಂದು ಹರಕೆ ಇಟ್ಟುಕೊಂಡಿದ್ದರು. ಇದು ಕೊನೆಯ ಬಾರಿ ಆಗಿದ್ದ ಕಾರಣದಿಂದ ಮೋದಿ ಪ್ರಧಾನಿಯಾಗಬೇಕೆಂದು ತನ್ನ ಬೆರಳನ್ನು ಕತ್ತರಿಸಿ ಕಾಳಿ ಮಾತೆಗೆ ಅರ್ಪಿಸಿದ್ದಾರೆ. ಆ ಮೂಲಕ ಮೋದಿಯ ಮೇಲಿನ ಅಭಿಮಾನವನ್ನು ಪ್ರದರ್ಶನ ಮಾಡಿದ್ದಾರೆ.

Most Popular

To Top