Film News

ಕಾಲು ನಡಿಗೆಯ ಮೂಲಕ ತಿರುಪತಿಯ ಮೆಟ್ಟಿಲೇರಿದ್ದ ಸ್ಟಾರ್ ವೈಫ್, ಅಲ್ಲು ಸ್ನೇಹಾ ಗುಡ್ ನ್ಯೂಸ್ ಕೊಡಲಿದ್ದಾರಾ?

ಟಾಲಿವುಡ್ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಪತ್ನಿ ಅಲ್ಲು ಸ್ನೇಹಾರೆಡ್ಡಿ ಸಹ ಸೋಷಿಯಲ್ ಮಿಡಿಯಾದಲ್ಲಿ ಸ್ಟಾರ್‍ ನಟಿಯರಿಗಿಮತ ಕಡಿಮೆಯಿಲ್ಲ ಎಂಬಂತೆ ಭಾರಿ ಫಾಲೋಯಿಂಗ್ ಹೊಂದಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕೆ ಹಂಚಿಕೊಳ್ಳುವ ಪೋಸ್ಟ್ ಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ. ಇದೀಗ ಆಕೆ ಕಾಲು ನಡಿಗೆಯ ಮೂಲಕ ತಿರುಪತಿಯ ಮೆಟ್ಟಿಲನ್ನೇರಿದ್ದು, ಆಕೆ ಗುಡ್ ನ್ಯೂಸ್ ಕೊಡಲಿದ್ದಾರಾ ಎಂಬ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಆ ಗುಡ್ ನ್ಯೂಸ್ ಯಾವುದು ಎಂಬ ವಿಚಾರಕ್ಕೆ ಬಂದರೇ,

ಸ್ಟಾರ್‍ ನಟಿಯರಂತೆ ಫೇಂ ಪಡೆದುಕೊಂಡಿರುವ ಅಲ್ಲು ಸ್ನೇಹಾರೆಡ್ಡಿ ಇತ್ತಿಚಿಗಷ್ಟೆ ಲಂಡನ್ ವೆಕೇಷನ್ ಮುಗಿಸಿಕೊಂಡು ಬಂದರು. ಬಳಿಕ ತಿರುಮಲದಲ್ಲಿ ನೆಲೆಸಿರುವ ಶ್ರೀ ವೆಂಕಟೇಶ್ವರನ ದರ್ಶನ ಪಡೆದುಕೊಂಡಿದ್ದರು. ಅದರಲ್ಲೂ ಆಕೆ ತಿರುಮಲಕ್ಕೆ ಮೆಟ್ಟಿಲು ಮಾರ್ಗದ ಮೂಲಕ ನಡೆದುಕೊಂಡು ಹೋಗಿದ್ದಾರೆ. ಪ್ರತಿಯೊಂದು ಮೆಟ್ಟಿಲಿಗೂ ಕುಂಕುಮ ಇಟ್ಟು ಹೋಗುತ್ತಾ ದೀಪಗಳನ್ನು ಸಹ ಹಚ್ಚಿದ್ದಾರೆ. ಆ ಮೂಲಕ ವೆಂಕಟೇಶ್ವರನ ದರ್ಶನ ಪಡೆದುಕೊಂಡಿದ್ದಾರೆ. ಇನ್ನೂ ಸ್ನೇಹಾರೆಡ್ಡಿ ಸಾಮಾನ್ಯ ಭಕ್ತೆಯಂತೆ ಯಾವುದೇ ಆಡಂಬರವಿಲ್ಲದೇ ದೇವರ ದರ್ಶನ ಪಡೆದುಕೊಂಡರು. ಆಕೆಯ ಜೊತೆಗೆ ಆಕೆಯ ಕುಟುಂಬ ಸದಸ್ಯರು ಯಾರು ಇಲ್ಲದೇ ಇರುವುದು ಸಹ ಗಮರ್ನಾಹ ಎಂದೇ ಹೇಳಬಹುದು. ಸ್ನೇಹಾರೆಡ್ಡಿ ನಡೆದುಕೊಂಡು, ಪ್ರತಿ ಮೆಟ್ಟಿಲಿಗೂ ಕುಂಕುಮ ಇಟ್ಟು, ದೀಪ ಹಚ್ಚಿ  ದೇವರನ್ನು ದರ್ಶನ ಮಾಡಿಕೊಂಡ ಹಿಂದೆ ಒಂದು ಗುಡ್ ನ್ಯೂಸ್ ಇದೆ ಎಂದು ಎಲ್ಲರೂ ಅಭಿಪ್ರಾಯಪಡುತ್ತಿದ್ದಾರೆ.

ಸುಮಾರು ದಿನಗಳಿಂದ ಸ್ನೇಹಾರೆಡ್ಡಿಗೆ ಒರುವಂತಹ ಬಯಕೆಯನ್ನು ಈಡೇರಿಸಿಕೊಳ್ಳುವ ಕಾರಣದಿಂದ ಆಕೆ ತಿರುಮಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ. ಸ್ನೇಹಾರೆಡ್ಡಿ ಸುಮಾರು ದಿನಗಳಿಂದ ನಟಿಯಾಗುವ ಬಯಕೆ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತನ್ನ ಕುಟುಂಬಸ್ಥರು ಮೊದಲಿಗೆ ಬೇಡ ಎಂದು ಹೇಳಿದ್ದರಂತೆ. ಆದರೆ ಇದೀಗ ಅವರೆಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದಲೇ ಆಕೆ ತಿರುಮಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಶೀಘ್ರದಲ್ಲೇ ಸ್ನೇಹಾರೆಡ್ಡಿ ಗುಡ್ ನ್ಯೂಸ್ ಕೊಡಲಿದ್ದಾರೆ ಎಂದು ಅನೇಕರು ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ. ಈ ಬಗ್ಗೆ ಅಲ್ಲು ಕುಟುಂಬದಿಂದ ಯಾವ ರೀತಿಯ ಪ್ರತಿಕ್ರಿಯೆ ಬರುತ್ತೆ, ಸ್ನೇಹಾರೆಡ್ಡಿಯವರಿಂದ ಯಾವಾಗ ಗುಡ್ ನ್ಯೂಸ್ ಸಿಗಲಿದೆ ಎಂದು ಕಾದು ನೋಡಬೇಕಿದೆ.

Most Popular

To Top