Film News

ಮಾಲ್ಡೀವ್ಸ್ ವೆಕೇಷನ್ ಟಿಕೆಟ್ ಕ್ಯಾನ್ಸಲ್ ಮಾಡಿಕೊಂಡ ಅಕ್ಕಿನೇನಿ ನಾಗಾರ್ಜುನ, ಕಾರಣ ಏನು ಗೊತ್ತಾ?

ಕೆಲವು ದಿನಗಳ ಹಿಂದೆಯಷ್ಟೆ ನರೇಂದ್ರ ಮೋದಿಯವರು ಲಕ್ಷದ್ವೀಪಕ್ಕೆ ಹೋಗಿಬಂದ ಬಳಿಕ ಮಾಲ್ಡೀವ್ಸ್ ದ್ವೀಪಗಳ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ದೇಶಿಯ ಪ್ರವಾಸಿ ತಾಣಗಳನ್ನು ಅಭಿವೃದ್ದಿ ಪಡಿಸುವತ್ತ ಪ್ರವಾಸಿಗರನ್ನು ಆಕರ್ಷಣೆ ಮಾಡುವ ಕೆಲಸಗಳೂ ಸಹ ನಡೆಯುತ್ತಿವೆ. ಜೊತೆಗೆ ಅನೇಕ ಸಿನೆಮಾ ಸೆಲೆಬ್ರೆಟಿಗಳೂ ಸಹ ಮಾಲ್ಡೀವ್ಸ್ ಗೆ ಹೋಗುವುದನ್ನು ಬಾಯ್ ಕಟ್ ಸಹ ಮಾಡಿದ್ದಾರೆ. ಇದೀಗ ತೆಲುಗು ಸ್ಟಾರ್‍ ನಟ ಅಕ್ಕಿನೇನಿ ನಾಗಾರ್ಜುನ್ ಸಹ ಮಾಲ್ಡೀವ್ಸ್ ಗೆ ಬುಕ್ ಮಾಡಿದ ಟಿಕೆಟ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಅವರು ಮಾಲ್ಡೀವ್ಸ್ ಟ್ರಿಪ್ ಕ್ಯಾನ್ಸಲ್ ಮಾಡಿದ್ದಾದರೂ ಏಕೆ ಎಂಬ ವಿಚಾರಕ್ಕೆ ಬಂದರೇ,

ಸದ್ಯ ಅಕ್ಕಿನೇನಿ ನಾಗಾರ್ಜುನ್ ನಾ ಸಾಮಿ ರಂಗ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಕಳೆದ ವರ್ಷದ ಡಿಸೆಂಬರ್‍ ಮಾಹೆಯ ವರೆಗೂ ತೆಲುಗು ಬಿಗ್ ಬಾಸ್ ಶೋ ಹೋಸ್ಟ್ ಮಾಡುತ್ತಾ ಸದ್ದು ಮಾಡಿದ್ದರು. ಇದೀಗ ನಾ ಸಾಮಿ ರಂಗ ಸಿನೆಮಾದ ಮೂಲಕ ಸಿನಿರಸಿಕರನ್ನು ರಂಜಿಸಲಿದ್ದಾರೆ. ಈ ಸಿನೆಮಾದಲ್ಲಿ ನಾಗಾರ್ಜುನ್, ಕನ್ನಡ ನಟಿ ಆಶಿಕಾ ರಂಗನಾಥ್, ಅಲ್ಲರಿ ನರೇಶ್, ರಾಜ್ ತರುಣ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ಜ.14 ರಂದು ಈ ಸಿನೆಮಾ ತೆರೆಗೆ ಬರಲಿದೆ. ಈಗಾಗಲೇ ಈ ಸಿನೆಮಾ ಒಳ್ಳೆಯ ಬಜ್ ಸಹ ಕ್ರಿಯೇಟ್ ಮಾಡಿದೆ. ಚಿತ್ರತಂಡ ಸಹ ಸಿನೆಮಾದ ಪ್ರಮೋಷನ್ ಕಾರ್ಯವನ್ನು ಸಹ ಜೋರಾಗಿಯೇ ನಿರ್ವಹಿಸುತ್ತಿದೆ. ಈ ಹಾದಿಯಲ್ಲೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಾಗಾರ್ಜುನ್ ರವರು ಇಂಡಿಯಾ-ಮಾಲ್ಡೀವ್ಸ್ ನಡುವಣ ವಿವಾದದ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ನಟ ನಾಗಾರ್ಜುನ್ ಬಿಗ್ ಬಾಸ್ ಶೂಟಿಂಗ್ ಹಾಗೂ ನಾ ಸಾಮಿರಂಗ ಸಿನೆಮಾ ಶೂಟಿಂಗ್ ನಿಮಿತ್ತ ತುಂಬಾನೆ ಬ್ಯುಸಿಯಾಗಿದ್ದರಂತೆ. ಈ ಕಾರಣದಿಂದ ರಿಲ್ಯಾಕ್ಸ್ ಆಗುವ ನಿಟ್ಟಿನಲ್ಲಿ ಬಿಗ್ ಬಾಸ್ ಮುಗಿದ ಕೂಡಲೇ ಮಾಲ್ಡೀವ್ಸ್ ಗೆ ಹೋಗಲು ಪ್ಲಾನ್ ಮಾಡಿಕೊಂಡಿದ್ದರಂತೆ. ಈ ನಡುವೆ ಇಂಡಿಯಾ ಹಾಗೂ ಮಾಲ್ಡೀವ್ಸ್ ವಿವಾದ ಶುರುವಾಗಿದ್ದು, ಅನೇಕ ಸೆಲೆಬ್ರೆಟಿಗಳು ಮಾಲ್ಡೀವ್ಸ್ ಬಾಯ್ ಕಟ್ ಮಾಡುತ್ತಿದ್ದಾರೆ. ಈ ಕಾರಣದಿಂದಲೇ ನಾಗಾರ್ಜುನ್ ಸಹ ಮಾಲ್ಡೀವ್ಸ್ ವೆಕೇಷನ್ ಗೆ ಬುಕ್ ಮಾಡಿದ ಟಿಕೆಟ್ಸ್ ಕ್ಯಾನ್ಸಲ್ ಮಾಡಿದ್ದಾರಂತೆ. ಇದು ಯಾರಿಗೋ ಭಯಪಟ್ಟು ತೆಗೆದುಕೊಂಡ ನಿರ್ಣಯವಲ್ಲ. ಮಾಲ್ಡೀವ್ಸ್ ನ ಮಂತ್ರಿಗಳು ಇಂಡಿಯಾದ ಬಗ್ಗೆ ಮಾಡಿದ ಕಾಮೆಂಟ್ ಗಳು, ಪ್ರಧಾನಿ ಮೋದಿಯ ಮೇಲೆ ಮಾಡಿದ ಕಾಮೆಂಟ್ ಗಳು ಸರಿಯಲ್ಲ ಎಂದು ಹೇಳಿದ್ದಾರೆ.  ಇನ್ನೂ ನಾಗಾರ್ಜುನ್ ರವರು ಸಹ ಮಾಲ್ಡೀವ್ಸ್ ಬಾಯ್ ಕಟ್ ಮಾಡಿದ ಸೆಲೆಬ್ರೆಟಿಗಳ ಸಾಲಿಗೆ ಸೇರಿದ್ದಾರೆ. ನಾ ಸಾಮಿರಂಗ ಸಿನೆಮಾ ಸಕ್ಸಸ್ ಸಾಧಿಸಿದರೇ ವೆಕೇಷನ್ ನಲ್ಲಿ ವಿಶ್ರಾಂತಿ ಪಡೆದಂತೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Most Popular

To Top