ಸಂಕ್ರಾಂತಿಗೆ ಬಿಡುಗಡೆಯಾದ ಆ ಎರಡು ಸಿನೆಮಾಗಳಿಗೆ ಶ್ರುತಿ ಹಾಸನ್ ಪಡೆದುಕೊಂಡ ಸಂಭಾವನೆ ಹಾಟ್ ಟಾಪಿಕ್ ಆಗಿದೆ….!

Follow Us :

ಸೌತ್ ಸಿನಿರಂಗದಲ್ಲಿ ಸದ್ಯ ಬಹುಬೇಡಿಕೆಯುಳ್ಳ ನಟಿಯಾದ ಶ್ರುತಿ ಹಾಸನ್ ಸಂಕ್ರಾಂತಿ ಹಬ್ಬದ ಸಮಯದಲ್ಲಿ ನಂದಮೂರಿ ಬಾಲಕೃಷ್ಣ ರವರ ವೀರಸಿಂಹಾರೆಡ್ಡಿ ಹಾಗೂ ಮೆಗಾಸ್ಟಾರ್‍ ಚಿರಂಜೀವಿ ಅಭಿನಯದ ವಾಲ್ತೇರು ವೀರಯ್ಯ ಸಿನೆಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಎರಡೂ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದ್ದು, ಇದೀಗ ಈ ಸಿನೆಮಾಗಳಲ್ಲಿ ಶ್ರುತಿ ಹಾಸನ್ ಪಡೆದುಕೊಂಡ ಸಂಭಾವನೆಯ ವಿಚಾರ ಹಾಟ್ ಟಾಪಿಕ್ ಆಗಿದೆ.

ಬಾಲಕೃಷ್ಣ ಅಭಿನಯದ ವೀರಸಿಂಹಾರೆಡ್ಡಿ ಹಾಗೂ ಚಿರಂಜೀವಿ ಅಭಿನಯದ ವಾಲ್ತೇರು ವೀರಯ್ಯ ಎರಡೂ ಸಿನೆಮಾಗಳನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ. ಜೊತೆಗೆ ಡಿಸ್ಟ್ರಿಬ್ಯೂಟರ್‍ ಗಳು ಸಹ ಅವರೇ ಆಗಿದ್ದಾರೆ. ಇನ್ನೂ ಎರಡೂ ಸಿನೆಮಾಗಳಲ್ಲಿ ಕಾಮನ್ ಪಾಯಿಂಟ್ ಗಳು ಕೆಲವಿದ್ದು, ಶ್ರುತಿ ಹಾಸನ್ ಎರಡೂ ಸಿನೆಮಾಗಳಿಗಾಗಿ ಪಡೆದುಕೊಂಡ ಸಂಭಾವನೆಯ ವಿಚಾರ ಇದೀಗ ಹಾಟ್ ಟಾಪಿಕ್ ಆಗಿದೆ. ಇನ್ನೂ ಈ ಬಗ್ಗೆ ತೆಲುಗು ಸಿನಿವಲಯದಲ್ಲಿ ಕೇಳಿಬರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ಸಿನೆಮಾಗಳಿಗೂ ಶ್ರುತಿ ಹಾಸನ್ ಒಂದೆ ರೀತಿಯ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಎರಡೂ ಸಿನೆಮಾಗಳಿಗಾಗಿ ಆಕೆ 5 ಕೋಟಿ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನೂ ಶ್ರುತಿ ಹಾಸನ್ ಸೀನಿಯರ್‍ ನಟರ ಸಿನೆಮಾಗಳಲ್ಲಿ ನಟಿಸಿದ ಕಾರಣದಿಂದ ಆಕೆ ಕೇಳಿದಷ್ಟು ಸಂಭಾವನೆ ಕೊಟ್ಟಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಇನ್ನೂ ಶ್ರುತಿ ಹಾಸನ್ ಕ್ರಾಕ್ ಸಿನೆಮಾಗೂ ಮುಂಚೆ ಆಕೆಯ ಸಿನೆಮಾಗಳು ಅಷ್ಟೊಂದು ಸಕ್ಸಸ್ ಕಾಣಲಿಲ್ಲ. ಆದರೆ ಕ್ರಾಕ್ ಬಳಿಕ ಆಕೆಯ ದಿಕ್ಕು ಸಹ ಬದಲಾಯಿತು ಎನ್ನಲಾಗುತ್ತಿದೆ. ಇನ್ನೂ ಕ್ರಾಕ್ ಸಿನೆಮಾದ ನಿರ್ದೇಶಕರೇ ವೀರಸಿಂಹಾರೆಡ್ಡಿ ಸಿನೆಮಾಗೂ ನಿರ್ದೇಶಕರಾದ ಕಾರಣದಿಂದ ಆಕೆ ಒಪ್ಪಿದ್ದಾರೆ ಎನ್ನಲಾಗಿದೆ. ಜೊತೆಗೆ ಮೈತ್ರಿ ಮೂವಿಸ್ ಬ್ಯಾನರ್‍ ಆದ್ದರಿಂದ ವಾಲ್ತೇರು ವೀರಯ್ಯ ಸಿನೆಮಾಗೂ ಒಪ್ಪಿಸಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ. ಸದ್ಯ ಶ್ರುತಿ ಹಾಸನ್ ರವರ ಸಂಭಾವನೆ ವಿಚಾರ ತೆಲುಗು ವಲಯದಲ್ಲಿ ಹಾಟ್ ಟಾಪಿಕ್ ಆಗಿದೆ.

ಇನ್ನೂ ಶ್ರುತಿ ಹಾಸನ್ ಬಹುನಿರೀಕ್ಷಿತ ಸಲಾರ್‍ ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ. ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಹಾಗೂ ಬಾಹುಬಲಿ ಪ್ರಭಾಸ್ ಕಾಂಬಿನೇಷನ್ ನಲ್ಲಿ ಈ ಸಿನೆಮಾ ತುಂಬಾನೆ ನಿರೀಕ್ಷೆ ಹುಟ್ಟಿಸಿದೆ. ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿದ್ದು, ಶ್ರುತಿ ಹಾಸನ್ ಸಹ ಈ ಸಿನೆಮಾ ಮೇಲೆ ತುಂಬಾನೆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ.