ಪ್ರತಿ ವರ್ಷ ಆ ಸಮಯಕ್ಕಾಗಿ ನಾನು ಎದುರು ನೋಡುತ್ತಿರುತ್ತೇನೆ ಎಂದ ಪವನ್ ಪತ್ನಿ ರೇಣು ದೇಸಾಯಿ..!

Follow Us :

ನಟಿ ರೇಣು ದೇಸಾಯಿ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ನಟ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಮದುವೆಯಾಗಿ ವಿಚ್ಚೇಧನ ಪಡೆದುಕೊಂಡು ಸದ್ಯ ಆಕೆ ತಮ್ಮ ಮಕ್ಕಳೊಂದಿಗೆ ಇದ್ದಾರೆ. ಪವನ್ ಜೊತೆಗೆ ಬೇರೆಯಾದ ಬಳಿಕ ಆಕೆ ಪುಣೆಯಲ್ಲಿ ಮಕ್ಕಳೊಂದಿಗೆ ಸೆಟಲ್ ಆಗಿದ್ದಾರೆ. ಮಕ್ಕಳೊಂದಿಗೆ ಜೀವನ ಕಳೆಯುತ್ತಾ ಸಂತೋಷವಾಗಿದ್ದಾರೆ. ಇನ್ನೂ ರೇಣು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾ ಮೂಲಕವೇ ತಮ್ಮ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಹೊಸ ವರ್ಷದ ಆಚರಣೆಗಾಗಿ ರೇಣು ಹಾಗೂ ತನ್ನ ಪುತ್ರಿ ಆಧ್ಯಾ ಜೊತೆಗೆ ಕಾಶ್ಮೀರಕ್ಕೆ ತೆರಳಿದ್ದರು. ಹೀಗೆ ಅನೇಕ ಬಾರಿ ತಮ್ಮ ಮಕ್ಕಳೊಂದಿಗೆ ಆಕೆ ವೆಕೇಷನ್ ಗೆ ಹೋಗುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಇತ್ತೀಚಿಗೆ ದೆಹಲಿ ಬೀದಿಗಳಲ್ಲಿ ಸುತ್ತಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ದೆಹಲಿ ವೆಕೇಷನ್ ನಲ್ಲಿರುವ ರೇಣು ದೇಸಾಯಿ ವಿಡಿಯೋ ಒಂದನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ದಲ್ಲಿ ಆಕೆ ಬಟಾಣಿಗಳನ್ನು ತಿನ್ನುತ್ತಾ ವಿಡಿಯೋ ಮಾಡಿದ್ದಾರೆ. ಇನ್ನೂ ಈ ವಿಡಿಯೋ ಶೇರ್‍ ಮಾಡಿದ ರೇಣು ನನಗೆ ಬಟಾಣಿ ಎಂದರೇ ತುಂಬಾ ಇಷ್ಟ. ಇದಕ್ಕಾಗಿ ಪ್ರತಿ ವರ್ಷ ಡಿಸೆಂಬರ್‍ ಮಾಹೆಗಾಗಿ ನಾನು ಎದುರು ನೋಡುತ್ತಿರುತ್ತೇನೆ ಎಂದಿದ್ದಾರೆ.

ಡಿಸೆಂಬರ್‍ ಮಾಹೆಯಲ್ಲಿ ಹಸಿ ಬಟಾಣಿ ಬೆಳೆ ಬರುತ್ತದೆ. ಹಸಿ ಬಟಾಣಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಹಸಿ ಬಟಾಣಿ ನನಗೆ ಎಷ್ಟು ಕೊಟ್ಟರೂ ತಿನ್ನುತ್ತೇನೆ. ಆದರೆ ಬಟಾಣಿ ಮುಗಿದ ಕೂಡಲೇ ನನಗೆ ತುಂಬಾ ನೋವಾಗುತ್ತದೆ ಎಂದು ಈ ವಿಡಿಯೋದಲ್ಲಿ ರೇಣು ದೇಸಾಯಿ ಹೇಳಿದ್ದಾರೆ. ಈ ವಿಡಿಯೋ ಮೂಲಕ ತನಗೆ ಹಸಿ ಬಟಾಣಿ ಎಂದರೇ ಎಷ್ಟು ಇಷ್ಟ ಎಂಬುದನ್ನು ಹೇಳಿದ್ದಾರೆ.  ಇನ್ನೂ ಈ ವಿಡಿಯೋ ಅನ್ನು ರೇಣು ಪುತ್ರಿ ಆಧ್ಯಾ ಶೂಟ್ ಮಾಡಿದ್ದಾರೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಆದ್ಯ ಕ್ಯಾಮೆರಾ ಮೆನ್ ಆಗಿಬಿಟ್ಟಿದ್ದಾರೆ ಎಂದು ಅನೇಕರು ಕಾಮೆಂಟ್ ಗಳನ್ನು ಸಹ ಮಾಡುತ್ತಿದ್ದಾರೆ.

ರೇಣು ದೇಸಾಯಿ ಸಿನಿರಂಗದಿಂದ ದೂರ ಉಳಿದು ಸುಮಾರು 18 ವರ್ಷಗಳು ಕಳೆದಿದೆ. 70 ರ ದಶಕದ ಕಥೆಯೊಂದನ್ನು ಆಧರಿಸಿ ನಿರ್ಮಾಣ ಮಾಡಲಾಗುತ್ತಿರುವ ಟೈಗರ್‍ ನಾಗೇಶ್ವರ್‍ ರಾವ್ ಎಂಬ ಸಿನೆಮಾದಲ್ಲಿ ರೇಣು ದೇಸಾಯಿ ಬಣ್ಣ ಹಚ್ಚಿದ್ದಾರೆ. ತುಂಬಾ ಗ್ಯಾಪ್ ಬಳಿಕ ರೇಣು ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು ಮತ್ತೇ ಆಕೆ ಸಿನಿರಂಗದಲ್ಲಿ ಸಕ್ಸಸ್ ಆಗಲಿದ್ದಾರಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ ಸಿನೆಮಾದ ಶೂಟಿಂಗ್ ಸಹ ಶುರುವಾಗಿದ್ದು, ಮುಂದಿನ ವರ್ಷ ತೆರೆ ಕಾಣಲಿದೆ.