Film News

ಗಂಡನಿಗೆ ಖಡಕ್ ವಾರ್ನಿಂಗ್ ಕೊಟ್ಟ ನಟಿ, ಮಹಾಲಕ್ಷ್ಮೀ ದಾಂಪತ್ಯದಲ್ಲಿ ಬಿರುಕು ಬಂತಾ?

ತಮಿಳು ಕಿರುತೆರೆಯ ನಟಿ ಮಹಾಲಕ್ಷ್ಮೀ ಹಾಗೂ ನಿರ್ಮಾಪಕ ರವೀಂದರ್‍ ಚಂದ್ರಶೇಖರ್‍ ಪ್ರೀತಿಸಿ ಮದುವೆಯಾದ ವಿಚಾರ ತಿಳಿದೇ ಇದೆ. ಇತ್ತೀಚಿಗೆ ತುಂಬಾನೆ ಸದ್ದು ಮಾಡಿದ ಮದುವೆ ಈ ಜೋಡಿಯ ಮದುವೆ ಎಂದು ಹೇಳಬಹುದು. ಸ್ಟಾರ್‍ ಸೆಲೆಬ್ರೆಟಿಗಳ ಮದುವೆಗಿಂತಲೂ ಈ ಜೋಡಿಯ ಮದುವೆ ಎಲ್ಲಾ ಕಡೆ ಸಖತ್ ಸೌಂಡ್ ಮಾಡಿತ್ತು. ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಮದುವೆಯಾದಾಗಿನಿಂದ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚಿಗೆ ಈ ಜೋಡಿಯ ನಡುವೆ ವಿಬೇದಗಳು ಉದ್ಬವಿಸಿದೆ ಎಂದು ಹೇಳಲಾಗುತ್ತಿದೆ. ಇದೀಗ ,ಮಹಾಲಕ್ಷ್ಮೀ ಆ ಕಾರಣದಿಂದ ರವೀಂದರ್‍ ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ.

ನಿರ್ಮಾಪಕ ರವಿಂದರ್‍ ಹಾಗೂ ಮಹಾಲಕ್ಷ್ಮೀ ತಮ್ಮ ಮೊದಲ ಪತಿ ಹಾಗೂ ಪತ್ನಿಗೆ ವಿಚ್ಚೇದನ ನೀಡಿ ಕೆಲವು ದಿನಗಳ ಕಾಲ ಇಬ್ಬರೂ ಪ್ರೀತಿಸಿ ಅದ್ದೂರಿಯಾಗಿ ಸಪ್ತಪದಿ ತುಳಿದರು. ಅವರಿಬ್ಬರ ಮದುವೆ ವಿಚಾರ ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿದ್ದೇ ತಡ ಪ್ರತಿನಿತ್ಯ ಅವರನ್ನು ಟ್ರೋಲ್ ಮಾಡುತ್ತಲೇ ಇದ್ದರು. ಮೊದಲಿಗೆ ಮಹಾಲಕ್ಷ್ಮೀ ಸಹ ತಮ್ಮನ್ನ ಟ್ರೋಲ್ ಮಾಡಬೇಡಿ ಎಂದು ಕೇಳಿಕೊಂಡಿದ್ದರು. ಆದರೂ ಸಹ ಟ್ರೋಲ್ ಗಳು ನಿಲ್ಲದ ಕಾರಣ ಯಾವ ಟ್ರೋಲ್ ಗಳನ್ನು ಸಹ ಕಿವಿಗೆ ಹಾಕಿಕೊಳ್ಳದೇ ತಮ್ಮ ವೈವಾಹಿಕ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದರು. ಆದರೆ ಇತ್ತೀಚಿಗೆ ಅವರ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ ಎನ್ನಲಾಗಿದೆ. ಇತ್ತೀಚಿಗೆ ಕಾರಣ ರವೀಂದರ್‍ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡ ಪೊಟೊ ಇದಕ್ಕೆ ಮತ್ತೊಂದು ಉದಾಹರಣೆ ಎನ್ನಲಾಗುತ್ತಿದೆ.

ನಿರ್ಮಾಪಕ ರವೀಂದರ್‍ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಈ ಹಿಂದೆ ತನ್ನ ಪತಿಯೊಂದಿಗೆ ದೇವಾಸ್ತಾನಗಳು, ಹೋಟೆಲ್ ಗಳು, ವೆಕೇಷನ್ ಗಳಿಗೆ ಹೋಗಿದಂತಹ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ರವಿಂದರ್‍ ಇತ್ತೀಚಿಗೆ ತಾನು ಒಂಟಿಯಾಗಿ ನಿಂತು ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ನಿಮ್ಮೊಳಗಿನ ಕಠಿಣತೆಯನ್ನು ಜಗತ್ತಿಗೆ ತರುವ ಪರಿಸ್ಥಿತಿ ನನಗಾಗಿ ಕಾಯುತ್ತಿದೆ ಎಂದು ಬರೆದು ಪೊಟೋ ಒಂದನ್ನು ಹಂಚಿಕೊಂಡಿದ್ದರು. ಸದಾ ಜೊತೆಯಲ್ಲಿರುವ ಪೊಟೋ ಹಂಚಿಕೊಳ್ಳುತ್ತಿದ್ದ ರವೀಂದರ್‍ ಹಂಚಿಕೊಂಡ ಈ ಪೊಟೋ ಕಾರಣದಿಂದ ಇಬ್ಬರ ನಡುವೆ ವಿಬೇದ ಸೃಷ್ಟಿಯಾಗಿದೆ ಎಂದು, ಈ ಕಾರಣದಿಂದಲೇ ಅವರು ಈ ಪೋಸ್ಟ್ ಹಂಚಿಕೊಂಡಿದ್ದಾರೆ ಎಂದು ಸೋಷಿಯಲ್ ಮಿಡಿಯಾದಲ್ಲಿ ಕಾಮೆಂಟ್ ಗಳು ಹರಿದಾಡುತ್ತಿವೆ.

ಇನ್ನೂ ಈ ಸುದ್ದಿ ಮಹಾಲಕ್ಷ್ಮೀ ವರೆಗೂ ತಲುಪಿದ್ದು, ತನ್ನ ಗಂಡನಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬ್ರೇಕಪ್ ಆಗಿದೆ ಎಂಬ ಅರ್ಥದಲ್ಲಿ ಏಕಾಂಗಿ ಪೊಟೋಗಳನ್ನು ಹಂಚಿಕೊಂಡು ಏನೇನೋ ಬರೆಯಬೇಡಿ. ಇನ್ನೂ ಮುಂದೆ ಇಂತಹ ಪೋಸ್ಟ್ ಮಾಡಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

Most Popular

To Top