ಡಸ್ಕಿ ಬ್ಯೂಟಿ ಡಿಂಪುಲ್ ಹಯಾತಿ ಗಲ್ಫ್ ಎಂಬ ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ಆಕೆ ತೆಲುಗು, ತಮಿಳು ಹಾಗೂ ಹಿಂದಿ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಆದರೆ ಆಕೆಗೆ ಸಕ್ಸಸ್ ನೀಡಿದ್ದು ಮಾತ್ರ ಅಭಿನೇತ್ರಿ-2 ಸಿನೆಮಾ ಹಾಗೂ ಗದ್ದಲಕೊಂಡ ಗಣೇಶ್ ಸಿನೆಮಾದಲ್ಲಿನ ಐಟಂ ಸಾಂಗ್ಸ್ ಎಂದು ಹೇಳಬಹುದಾಗಿದೆ. ಸದ್ಯ ಆಕೆ ರಾಮಬಾಣಂ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾಗೆ ಸಂಬಂಧಿಸಿದ ಸಂದರ್ಶನವೊಂದರಲ್ಲಿ ಆಕೆ ರಿಪೋರ್ಟರ್ ವಿರುದ್ದ ಫೈರ್ ಆಗಿದ್ದಾರೆ. ಅಷ್ಟಕ್ಕೂ ಡಿಂಪಲ್ ಪತ್ರಕರ್ತನ ಮೇಲೆ ಫೈರ್ ಆಗಿದ್ದು ಯಾಕೆ ಎಂಬ ವಿಚಾರಕ್ಕೆ ಬಂದರೇ,
ನಟಿ ಡಿಂಪುಲ್ ಹಯಾತಿ ಖಿಲಾಡಿ ಸಿನೆಮಾದ ಮೂಲಕ ಕೊನೆಯದಾಗಿ ಕಾಣಿಸಿಕೊಂಡರು. ಈ ಸಿನೆಮಾದಲ್ಲಿ ಆಕೆಯ ಅಭಿನಯಕ್ಕೆ ಒಳ್ಳೆಯ ಸ್ಪಂದನೆ ದೊರೆತಿದೆ. ಈ ಸಿನೆಮಾ ಸೋತರೂ ಸಹ ಡಿಂಪುಲ್ ಮಾತ್ರ ತುಂಬಾನೆ ಖ್ಯಾತಿ ಪಡೆದುಕೊಂಡರು. ಕೊಂಚ ಗ್ಯಾಪ್ ಬಳಿಕ ಆಕೆ ರಾಮಬಾಣಂ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ತೆಲುಗು ನಟ ಗೋಪಿಚಂದ್ ಜೊತೆಗೆ ಡಿಂಪುಲ್ ಹಯಾತಿ ಈ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಮೇ.5 ರಂದು ರಿಲೀಸ್ ಆಗಲಿದ್ದು, ಸಿನೆಮಾ ಪ್ರಮೋಷನ್ಸ್ ಕಾರ್ಯಕ್ರಮಗಳು ಸಹ ಜೋರಾಗಿ ನಡೆಯುತ್ತಿವೆ. ಅದರ ಭಾಗವಾಗಿ ಇತ್ತೀಚಿಗಷ್ಟೆ ಹೈದರಾಬಾದ್ ನಲ್ಲಿ ಪ್ರೆಸ್ ಮೀಟ್ ಏರ್ಪಡಿಸಲಾಗುತ್ತು. ಈ ವೇಳೆ ಓರ್ವ ರಿಪೋರ್ಟರ್ ಪ್ರಶ್ನೆಯೊಂದನ್ನು ಕೇಳಿದ್ದು, ಆ ಪ್ರಶ್ನೆಗೆ ಡಿಂಪುಲ್ ಫೈರ್ ಆಗಿ ಶಾಕಿಂಗ್ ಆನ್ಸರ್ ಸಹ ಕೊಟ್ಟಿದ್ದಾರೆ.
ಡಿಂಪುಲ್ ಹಯಾತಿಯನ್ನು ರಿಪೋರ್ಟರ್ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಈ ಸಿನೆಮಾದಲ್ಲಿ ನೀವು ಕೊಂಚ ವಲ್ಗರ್ ಆಗಿ ಹಾಗೂ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದೀರಾ, ನಿಮ್ಮ ಪಾತ್ರ ಹೇಗಿರುತ್ತದೆ ಎಂದು ಪ್ರಶ್ನೆ ಮಾಡಿದ್ದಾನೆ. ಆ ಪ್ರಶ್ನೆಯನ್ನು ಕೇಳಿದ ಕೂಡಲೇ ಎಲ್ಲರೂ ಶಾಕ್ ಆಗಿದ್ದಾರೆ. ಈ ಪ್ರಶ್ನೆಗೆ ಡಿಂಪುಲ್ ತುಂಬಾ ಅಸಮಧಾನಗೊಂಡಿದ್ದಾರೆ. ಆಕೆ ಕೊಂಚ ಸಮಯ ಅತ್ತ ಇತ್ತ ನೋಡಿ ಬಳಿಕ ವಲ್ಗರ್ ಅಂತೀರಾ ಏಕೆ, ನನಗೆ ತಿಳಿದ ಮಟ್ಟಿಗೆ ಸಿನೆಮಾದಲ್ಲಿ ಯಾವುದೇ ವಲ್ಗರ್ ದೃಶ್ಯಗಳು ನೋಡಲಿಲ್ಲ. ಗ್ಲಿಂಪ್ಸ್ ನಲ್ಲೂ ಸಹ ಅಂತಹವು ಬಿಡುಗಡೆ ಮಾಡಿಲ್ಲ. ನಮ್ಮ ಸಿನೆಮಾದ ಹಾಡುಗಳು ಹಾಗೂ ಪೋಸ್ಟರ್ ಗಳಲ್ಲೂ ಸಹ ನಾನು ವಲ್ಗರ್ ಆಗಿ ಕಾಣಸಿಕೊಂಡಿಲ್ಲ. ನೀವು ವಲ್ಗರ್ ಎಂದರೇ ನನಗೆ ನಿಜಕ್ಕೂ ಅರ್ಥ ಆಗುತ್ತಿಲ್ಲ. ಅದರ ಅರ್ಥ ಏನು ಎಂಬುದು ತಿಳಿಯುತ್ತಿಲ್ಲ ಎಂದು ಅಸಮಧಾನ ಹೊರಹಾಕಿದ್ದಾರೆ.
ಈ ವೇಳೆ ನಿರ್ದೇಶಕ ಶ್ರಿವಾಸ್ ರಿಯಾಕ್ಟ್ ಆಗಿದ್ದು, ಆತ ಯಾವ ಪದ ಬಳಕೆ ಮಾಡಬೇಕೆಂದು ತಿಳಿಯದೇ ವಲ್ಗರ್ ಎಂಬ ಪದ ಬಳಸಿದ್ದಾನೆ. ಈ ಪ್ರೆಸ್ ಮೀಟ್ ಗೆ ಆಕೆ ಹಾಕಿಕೊಂಡು ಬಂದಿದ್ದ ಡ್ರೆಸ್ ನೋಡಿದರೇ ಆಕೆಯ ಪಾತ್ರ ಎಂತಹುದು ಎಂಬುದು ತಿಳಿಯುತ್ತದೆ. ಈ ಸಿನೆಮಾ ಒಳ್ಳೆಯ ಫ್ಯಾಮಿಲಿ ಎಂಟರ್ ಟ್ರೈನರ್ ಸಿನೆಮಾ. ಆ ಕಾರಣದಿಂದಲೇ ಸಂಪ್ರದಾಯ ಡ್ರೆಸ್ ಗಳಲ್ಲೇ ಪ್ರಮೋಷನ್ ಗಳಲ್ಲಿ ಕಾಣಿಸುತ್ತಿದ್ದಾರೆ. ಅದನ್ನು ಪರಿಗಣಿಸಿ ತಾವು ಆಕೆಯ ಪಾತ್ರ ಹೇಗಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕೆಂದು ಉತ್ತರ ನೀಡಿದ್ದಾರೆ.