ನರೇಶ್ ಪವಿತ್ರ ಅಫೈರ್ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಪವಿತ್ರ ಮೊದಲ ಪತಿ ಸುಚೇಂದ್ರ, ಅದಕ್ಕಾಗಿ ನರೇಶ್ ನ ಕೈಹಿಡಿದ್ರಾ?

Follow Us :

ಇತ್ತೀಚಿಗೆ ಕೆಲವು ತಿಂಗಳುಗಳಿಂದ ಸೊಷಿಯಲ್ ಮಿಡಿಯಾದಲ್ಲಿ ತೆಲುಗು ಸೀನಿಯರ್‍ ನಟ ನರೇಶ್ ಹಾಗೂ ನಟಿ ಪವಿತ್ರಾ ರವರ ಬಗ್ಗೆ ಸುದ್ದಿಗಳು ಹರಿದಾಡುತ್ತಲೇ ಇರುತ್ತದೆ. ಕೆಲವು ದಿನಗಳ ಹಿಂದೆಯಷ್ಟೆ ಮದುವೆಯಾಗುತ್ತಿರುವ ವಿಡಿಯೋ ಒಂದನ್ನು ನರೇಶ್ ಹಂಚಿಕೊಂಡಿದ್ದರು. ಬಳಿಕ ಅದು ಪ್ರಮೋಷನ್ ವಿಡಿಯೋ ಎಂದೂ ಸಹ ಟ್ವಿಸ್ಟ್ ಕೊಟ್ಟರು. ಜನರನ್ನೂ ಮೂರ್ಖರನ್ನಾಗಿ ಮಾಡುತ್ತಿದ್ದಿರಾ ಎಂದು ನರೇಶ್ ರನ್ನು ತರಾಟೆಗೆ ಸಹ ತೆಗೆದುಕೊಂಡಿದ್ದರು. ಇದೀಗ ಮತ್ತೊಂದು ಸುದ್ದಿ ಅವರ ಬಗ್ಗೆ ಕೇಳಿಬರುತ್ತಿದೆ. ನಟಿ ಪವಿತ್ರ ರವರ ಮೊದಲನೇ ಪತಿ ಪವಿತ್ರಾ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ನರೇಶ್ ಹಾಗೂ ಪವಿತ್ರರವರಿಗೆ ಸಂಬಂಧಿಸಿದ ಒಂದಲ್ಲ ಒಂದು ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಲೇ ಇದೆ. ಸದ್ಯ ಸಹಜೀವನ ನಡೆಸುತ್ತಿರುವ ಇವರಿಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ವರ್ಷದ ಆರಂಭದಲ್ಲಿ ಸ್ಪೇಷಲ್ ವಿಡಿಯೋ ಮೂಲಕ ತಾವು ಶೀಘ್ರದಲ್ಲೇ ಮದುವೆಯಾಗುವುದಾಗಿಯೂ ಸಹ ಹೇಳಿಕೊಂಡಿದ್ದರು. ಇನ್ನೂ ನರೇಶ್ ತನ್ನ ಮೂರನೇ ಪತ್ನಿ ರಮ್ಯ ರಘುಪತಿಯೊಂದಿಗೆ ವಿಚ್ಚೇದನ ಪಡೆದುಕೊಳ್ಳುವುದಕ್ಕೂ ಮುಂಚೆಯಿಂದಲೇ ಪವಿತ್ರಾ ಜೊತೆಗೆ ಇದ್ದಾರೆ. ಅದೇ ರೀತಿ ಪವಿತ್ರಾ ಸಹ ಎರಡು ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಪವಿತ್ರ ಮೊದಲನೇ ಪತಿ ನಟ ಸುಚೇಂದ್ರ ಆಕೆಯ ಬಗ್ಗೆ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ಪವಿತ್ರ ಹಾಗೂ ನರೇಶ್ ಅಫೈರ್‍ ಬಗ್ಗೆ ಹೆಚ್ಚಾಗಿ ಪವಿತ್ರ ಮೊದಲನೇ ಪತಿ ಮೊದಲಿನಿಂದಲೂ ವಿರೋಧಿಸುತ್ತಾ ಬರುತ್ತಿದ್ದಾರೆ. ಪವಿತ್ರ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ಪವಿತ್ರಾ ಬಗ್ಗೆ ಸಂಚಲನಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ಮತ್ತೊಮ್ಮೆ ಪವಿತ್ರ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ಪವಿತ್ರಗೆ ಲಗ್ಜುರಿ ಲೈಫ್ ಅಂದರೇ ತುಂಬಾ ಇಷ್ಟ. ಅದಕ್ಕಾಗಿ ಆಕೆ ಏನು ಬೇಕಾದರೂ ಮಾಡಲು ಸಿದ್ದವಾಗಿರುತ್ತಾರೆ. ವಿಜಯ ನಿರ್ಮಲ ರವರು ಸಂಪಾದಿಸಿದ್ದ ಕೋಟ್ಯಂತರ ಆಸ್ತಿಯ ಮೇಲೆ ಪವಿತ್ರ ಕಣ್ಣು ಹಾಕಿದ್ದಾರೆ. ಏನಾದರೂ ಮಾಡಿ ಅದನ್ನು ಕಸಿದುಕೊಳ್ಳಬೇಕು ಎಂದು ನರೇಶ್ ಹಿಂದೆ ಸುತ್ತಾಡುತ್ತಿದ್ದಾಳೆ. ಹಣಕ್ಕಾಗಿಯೇ ಇಬ್ಬರಿಗೆ ವಿಚ್ಚೇದನ ನೀಡಿದ್ದಾರೆ. ಈ ವಿಚಾರದಲ್ಲಿ ನರೇಶ್ ಗೆ ಇನ್ನೂ ಪವಿತ್ರ ನಿಜಸ್ವರೂಪ ತಿಳಿದು ಬರುತ್ತಿಲ್ಲ ಎಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ಸದ್ಯ ಸುಚೇಂದ್ರ ನೀಡಿರುವ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಪವಿತ್ರ ಹಣಕ್ಕಾಗಿಯೇ ನರೇಶ್ ಸುತ್ತಾ ಸುತ್ತಾಡುತ್ತಿದ್ದಾಳೆ. ಹಣ ಇರುವವರೆಗೂ ನರೇಶ್ ಜೊತೆ ಇರುತ್ತಾಳೆ. ಬಳಿಕ ಆತನನ್ನು ಸಹ ಬಿಟ್ಟು ಬಿಡುತ್ತಾಳೆ ಎಂದು ಸುಚೇಂದ್ರ ಹೇಳಿದ್ದು ಈ ಬಗ್ಗೆ ಪವಿತ್ರಾ ಯಾವ ರೀತಿಯಲ್ಲಿ ರಿಯಾಕ್ಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.