ಸೌತ್ ಸಿನಿರಂಗದಲ್ಲಿ ಸೂಪರ್ ಸ್ಟಾರ್ ಆಗಿ ಸಾಗುತ್ತಿರುವ ನಟ ರಜನಿಕಾಂತ್ ಬಸ್ ಕಂಡಕ್ಟರ್ ಆಗಿದ್ದು ಹಂತ ಹಂತವಾಗಿ ಕಠಿಣ ಪರಿಶ್ರಮದಿಂದ ಇದೀಗ ಸ್ಟಾರ್ ನಟರಾಗಿದ್ದಾರೆ. ಮರಾಠಿ ಕುಟುಂಬದಲ್ಲಿ ಜನಿಸಿದ ಈತ ಬೆಂಗಳೂರಿನ ಬಿಟಿಎಸ್ ಬಸ್ ಕಂಡಕ್ಟರ್ ಆಗಿ ಕೆಲಸ ಪ್ರಾರಂಭಿಸಿ ಇದೀಗ ಸಿನಿರಂಗದಲ್ಲಿ ಮೇರು ನಟನಾಗಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಪಡೆದುಕೊಂಡು ವಯಸ್ಸಾದರೂ ಸಹ ಅನೇಕ ಸಿನೆಮಾಗಳ ಮೂಲಕ ರಂಜಿಸುತ್ತಿದ್ದಾರೆ. ಇದೀಗ ಕಾರ್ಯಕ್ರಮವೊಂದರಲ್ಲಿ ರಜನಿಕಾಂತ್ ಸೂಪರ್ ಸ್ಟಾರ್ ಎಂಬ ಬಿರುದಿನ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದು, ವೈರಲ್ ಆಗುತ್ತಿವೆ.
ನಟ ರಜನಿಕಾಂತ್ ಈಗಾಗಲೇ 170 ಕ್ಕೂ ಅಧಿಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಕೇವಲ ಕಾಲಿವುಡ್ ನಲ್ಲಿ ಮಾತ್ರವಲ್ಲದೇ ದೇಶ ವಿದೇಶಗಳಲ್ಲೂ ಅವರ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಸದ್ಯ ರಜನಿಕಾಂತ್ ರವರ ಜೈಲರ್ ಸಿನೆಮಾ ಆ.10 ರಂದು ಬಿಡುಗಡೆಯಾಗಲಿದೆ. ವಿಶ್ವದಾದ್ಯಂತ ಈ ಸಿನೆಮಾ ಬಿಡುಗಡೆಯಾಗಲಿದ್ದು, ಇತ್ತೀಚಿಗಷ್ಟೆ ಈ ಸಿನೆಮಾದ ಆಡಿಯೋ ರಿಲೀಸ್ ಈವೆಂಟ್ ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಮಾತನಾಡುತ್ತಾ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ತಾನು ಸೂಪರ್ ಸ್ಟಾರ್ ಎಂಬ ಟ್ಯಾಗ್ ನಿಂದ ಅನುಭವಿಸುತ್ತಿರುವ ಸಮಸ್ಯೆಯ ಬಗ್ಗೆ ಸಹ ಕಾಮೆಂಟ್ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದದ ರಜನಿಕಾಂತ್ ನನಗೆ ಜೈಲರ್ ಸಿನೆಮಾದಲ್ಲಿನ ಹುಕುಮ್ ಹಾಡು ತುಂಬಾನೆ ಇಷ್ಟ. ಆದ್ದರಿಂದ ಆ ಹಾಡಿನಿಂದ ಸೂಪರ್ ಸ್ಟಾರ್ ಎಂಬ ಟ್ಯಾಗ್ ತೊಲಗಿಸುವಂತೆ ಮೇಕರ್ಸ್ ಗೆ ಕೋರಿದ್ದೆ. ಆ ಟ್ಯಾಗ್ ನನ್ನನ್ನು ತುಂಬಾ ಸಮಸ್ಯೆಗೆ ಸಿಲುಕಿಸುತ್ತಿದೆ. ಅಷ್ಟೆ ಅಲ್ಲದೇ ಅದು ತುಂಬಾ ತಲೆನೋವಾಗಿ ಪರಿಣಮಿಸಿದೆ. ಈಗ ಅಲ್ಲೂ 1977 ರಿಂದಲೂ ಈ ಸೂಪರ್ ಸ್ಟಾರ್ ವಿವಾದ ನಡೆಯುತ್ತಿದೆ. ಅಂದಿನ ಕಾಲದಲ್ಲಿ ಕಮಲ್ ಹಾಸನ್, ಶಿವಾಜಿ ಗಣೇಶ್ ರಂತಹ ದೊಡ್ಡ ನಟರಿದ್ದಾಗ ಸೂಪರ್ ಸ್ಟಾರ್ ಎಂಬ ಬಿರುದನ್ನು ನನಗೆ ತಗಲಿಸಿಬಿಟ್ಟರು. ಅದು ತುಂಬಾ ವಿವಾದವಾಗಿತ್ತು. ಒಂದು ಕಾಡಿನಲ್ಲಿ ಕಾಗೆ ಹಾಗೂ ಹದ್ದು ಇರುತ್ತದೆ. ಕಾಗೆ ಹದ್ದಿನಂತೆ ಮೇಲಕ್ಕೆ ಎಗರಲು ಅಂದುಕೊಳ್ಳುತ್ತದೆ ಆದರೆ ಕಾಗೆ ಎಂದಿಗೂ ಹದ್ದಿನ ಮಾದರಿ ಎತ್ತರಕ್ಕೆ ಹಾರಲು ಸಾಧ್ಯವಿಲ್ಲ ಎಂಬ ಉದಾಹರಣೆಯನ್ನು ಸಹ ನೀಡಿದ್ದಾರೆ.
ಇನ್ನೂ ಅನೇಕರು ನಾವು ತುಂಬಾ ಸಾಧನೆ ಮಾಡಿದ್ದೀವಿ ಎಂದು ಕೊಂಡಿರುತ್ತೀವಿ. ಸ್ಟಾರ್ ಎಂಬ ವಾರಸತ್ವ ಪಡೆದುಕೊಂಡು ಸ್ಟಾರ್ ಗಳಾಗಿದ್ದೇವೆ ಎಂದು ಕೊಳ್ಳುತ್ತಾರೆ. ಆದರೆ ಸ್ಟಾರ್ ವಾರಸತ್ವ ಪಡೆದುಕೊಳ್ಳುವುದು ಮಾತ್ರವಲ್ಲ. ಅದನ್ನು ಉಳಿಸಿಕೊಳ್ಳುವುದು ಸಹ ಮುಖ್ಯ ಎಂದು ಸೂಪರ್ ಸ್ಟಾರ್ ವಿಜಯ್ ತಿಳಿಸಿದರು.